ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆ ಆರ್ ಬಿಐ ರೂಪಿಸಿದ್ದ ಲೋನ್ ಮೊರೆಟೋರಿಯಂ ನೀತಿಯಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದ್ದು, 6 ತಿಂಗಳ ಲೋನ್ ಮೊರೆಟೋರಿಯಂ ವಿಸ್ತರಿಸಲು ನಿರಾಕರಿಸಿದೆ.
ಹಣಕಾಸಿನ ನೀತಿಗಳು ಸರ್ಕಾರ & ಆರ್ಬಿಐ ವ್ಯಾಪ್ತಿಗೆ ಬರುತ್ತವೆ. ಠೇವಣಿದಾರರ ಮೇಲೆ ಪರಿಣಾಮ ಬೀರುವುದರಿಂದ ಸಂಪೂರ್ಣ ಬಡ್ಡಿ ಮನ್ನಾ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವರ್ಷ ಡಿ. 17ರಂದು ನ್ಯಾ. ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಕೇಂದ್ರ ಸರ್ಕಾರಕ್ಕೆ ನಿರಾಳ ತಂದಿದೆ.
ಹೀಗಾಗಿ ಮೊರೆಟೋರಿಯಂ ಸೌಲಭ್ಯ ಪಡೆದವರಿಗೆ ಸಾಲದ ಮೇಲಿನ ಚಕ್ರಬಡ್ಡಿ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಿದೆ.