PM Vishwakarma Yojana: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಾಲ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

PM Vishwakarma Yojana PM Vishwakarma Yojana

PM Vishwakarma Yojana: ಗ್ರಾಮೀಣ ಮತ್ತು ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಕ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಬೆಂಬಲ ನೀಡುವ ಕೇಂದ್ರೀಯ ವಲಯದ “ಪಿಎಂ ವಿಶ್ವಕರ್ಮ” ಎಂಬ ಹೊಸ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಯೋಜನೆಯ ಒಟ್ಟಾರೆ ಹಣಕಾಸು ವೆಚ್ಚ 13,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಪಿಎಂ ವಿಶ್ವಕರ್ಮ ಯೋಜನೆಯ ಮೊದಲ ಹಂತದಲ್ಲಿ 18 ಸಾಂಪ್ರದಾಯಿಕ ಕುಲಕಸುಬು ವಲಯಗಳು ಒಳಗೊಂಡಿವೆ.

ಇದನ್ನೂ ಓದಿ: ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್; ಒಣ, ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಔಷಧಿ

ಮುಂದಿನ ಐದು ವರ್ಷಗಳ ಅವಧಿಗೆ (ಹಣಕಾಸು ವರ್ಷ 2023-24 ದಿಂದ ಹಣಕಾಸು ವರ್ಷ 2027-28) ಅನ್ವಯವಾಗುವಂತೆ 13,000 ಕೋಟಿ ರೂಪಾಯಿ ಹಣಕಾಸು ವೆಚ್ಚದ ಕೇಂದ್ರೀಯ ವಲಯದ ಹೊಸ ಯೋಜನೆ “ಪಿಎಂ ವಿಶ್ವಕರ್ಮ” ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಅನುಮೋದನೆ ನೀಡಿದೆ.

Advertisement

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶ

Vishwakarma Yojana
PM Vishwakarma Yojana

ಗುರು –ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳು ಕೈಗಳು ಮತ್ತು ಸಾಧನ, ಸಲಕರಣೆಗಳಿಂದ ಕೆಲಸ ಮಾಡುವುದನ್ನು ಪ್ರೋತ್ಸಾಹಿಸಿ ಬಲಪಡಿಸುವುದು ಪಿಎಂ ವಿಶ್ವಕರ್ಮ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ? ತಿಳಿಯಲು ಇಲ್ಲಿದೆ ಸರಳ ಪ್ರಕ್ರಿಯೆ!

ಪಿಎಂ ವಿಶ್ವಕರ್ಮ ಯೋಜನೆಯಡಿ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು. ಸಾಲ ಸೌಲಭ್ಯ ಗರಿಷ್ಠ ಒಂದು ಲಕ್ಷ ರೂಪಾಯಿ [ಮೊದಲ ಹಂತ] ಮತ್ತು ಎರಡು ಲಕ್ಷ [ಎರಡನೇ ಹಂತ] ರೂಪಾಯಿ ಮೊತ್ತವನ್ನು ಶೇ 5% ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಕೌಶಲ್ಯ ವರ್ಧನೆ, ಉಪಕರಣ ಸಾಧನಗಳ ಕಿಟ್ ಪಡೆಯಲು ಸಹಾಯಧನ, ಡಿಜಿಟಲ್ ವಹಿವಾಟಿಗೆ ಸಹಾಯಧನ ಮತ್ತು ಮಾರುಕಟ್ಟೆ ಬೆಂಬಲ ಕೂಡ ದೊರೆಯಲಿದೆ.

ಈ ಯೋಜನೆಯಡಿ 18 ಸಾಂಪ್ರದಾಯಿಕ ಕುಲಕಸುಬುಗಳು

  • ಮರಗೆಲಸ,
  • ದೋಣಿ ತಯಾರಿಸುವವರು,
  • ಶಸ್ತ್ರ ತಯಾರಕರು,
  • ಕಮ್ಮಾರ
  • ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು,
  • ಬೀಗ ತಯಾರಕರು,
  • ಆಭರಣ ತಯಾರಕರು.
  • ಕುಂಬಾರರು,
  • ಶಿಲ್ಪಿ [ಮೂರ್ತಿ ಮತ್ತು ಕಲ್ಲಿನ ಕೆತ್ತನೆ]
  • ಕಲ್ಲು ಕುಟಿಕರು
  • ಚಮ್ಮಾರ,ಪಾದರಕ್ಷೆ ತಯಾರಕರು,
  • ಗಾರೆ ಕೆಲಸ ಮಾಡುವವರು [ರಾಜಮೇಸ್ತ್ರಿ]
  • ಬಟ್ಟೆ/ಚಾಪೆ/ಪೊರಕೆ/ಕಸಪೊರಕೆ ತಯಾರಕರು.
  • ಗೊಂಬೆ ಮತ್ತು ಅಟಿಕೆ ತಯಾರಕರು [ಸಂಪ್ರದಾಯಿಕ],
  • ಕ್ಷೌರಿಕರು [ಸವಿತಾ ಸಮಾಜ]
  • ಹೂಮಾಲೆ ತಯಾರಕರು
  • ಅಗಸರು,
  • ದರ್ಜಿಗಳು ಮತ್ತು ಮೀನು ಬಲೆ ಹೆಣೆಯುವವರು.

ಇದನ್ನೂ ಓದಿ: ಟ್ರೆಂಡಿಂಗ್ ಲಾಭದಾಯಕ ಹಳ್ಳಿಗಾಡಿನ ಕೋಳಿ ಸಾಕಾಣಿಕೆ; ದೇಸಿ ಕೋಳಿ ಸಾಕಿ ಲಾಭ ಗಳಿಸುವುದು ಹೇಗೆ?

ಸಾಲ ಪಡೆಯುವುದು ಹೇಗೆ?

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಭಾರತ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ, ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ರೂ 10,000ರಿಂದ ರೂ 1,00,000 ವರೆಗೆ ಸಾಲವನ್ನು ಪಡೆಯಬಹುದು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್‌ಸೈಟ್ https://pmvishwakarma.gov.in/ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಸಾಲದ ಅವಧಿಯು 5 ವರ್ಷಗಳು. ಸಾಲದ ಮೇಲೆ 7% ಬಡ್ಡಿದರ ಅನ್ವಯ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement