ದಾರವಾಡ ರಸ್ತೆ ಅಪಘಾತ ಪ್ರಕರಣ; ದಾವಣಗೆರೆಯ 13 ಮಂದಿಯನ್ನು ಬಲಿ ಪಡೆದ ರಾಷ್ಟೀಯ ಹೆದ್ದಾರಿ ವಿರುದ್ಧ ಮೃತರ ಕುಟುಂಬಸ್ಥರಿಂದ ಹೋರಾಟ

ದಾವಣಗೆರೆ : ದಾವಣಗೆರೆಯ 10 ಕುಟುಂಬಗಳ ದಿವ್ಯ ನಂದಾದೀಪಗಳನ್ನು ಹಾರಿಸಿರುವ ಹಾಗು ಸಂಕ್ರಮಣ ಸಂಭ್ರಮವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟೀಯ ಹೆದ್ದಾರಿ ವಿರುದ್ಧ ಹೋರಾಟ ಆರಂಭವಾಗಿದೆ. ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ…

accident from davanagere to Goa vijayaprabha

ದಾವಣಗೆರೆ : ದಾವಣಗೆರೆಯ 10 ಕುಟುಂಬಗಳ ದಿವ್ಯ ನಂದಾದೀಪಗಳನ್ನು ಹಾರಿಸಿರುವ ಹಾಗು ಸಂಕ್ರಮಣ ಸಂಭ್ರಮವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟೀಯ ಹೆದ್ದಾರಿ ವಿರುದ್ಧ ಹೋರಾಟ ಆರಂಭವಾಗಿದೆ.

ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ ಬಳಿಯ ರಾಷ್ಟೀಯ ಹೆದ್ದಾರಿ 4 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 13 ಜನ ಗೆಳತಿಯರು ಮೃತ ಪಟ್ಟಿದ್ದರು. ಈಗ ಈ ಘಟನೆಗೆ ಕಾರಣವಾದ ರಸ್ತೆಯ ರಾಷ್ಟೀಯ ಹೆದ್ದಾರಿ ವಿರುದ್ಧ ಮೃತರ ಕುಟುಂಬಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ.

ಇದೆ ಫೆಬ್ರುವರಿ 6 ರಂದು ರಸ್ತೆಯ ಬಗ್ಗೆ ಸರ್ಕಾರದ ನಿರ್ಲಕ್ಷ ಹಾಗು ಅಸುರಕ್ಷಿತ ನಿಯಮಗಳ ವಿರುದ್ದ ಸರ್ಕಾರದ ವೈಫಲ್ಯಗಳನ್ನ ಜನತೆಗೆ ತಿಳಿಸುವ ಸಂಬಂಧ ದಾವಣಗೆರೆಯಿಂದ ಅಪಘಾತ ನಡೆದ ಸ್ಥಳದ ವರೆಗೆ ಮೃತರ ಕುಟುಂಬಸ್ಥರು ಜಾಥಾ ನಡೆಸಲು ನಿರ್ಧರಿಸಿದ್ದಾರೆ. ಅಂದು ಬೆಳಗ್ಗೆ 7  ಗಂಟೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಜಾಥಾ ಆರಂಭವಾಗಲಿದೆ.

Vijayaprabha Mobile App free

ಈ ಜಾತಾಕ್ಕೆ ದಾವಣಗೆರೆ, ಹುಬ್ಬಳ್ಳಿ, ಧಾರವಾಡ ನಾಗರಿಕರು ಸಾಥ್ ನೀಡಲಿದ್ದು, ಮೃತ ಮಹಿಳೆ ಪತಿ ಡಾ। ರವಿಕುಮಾರ್, ಡಾ| ರಮೇಶ್ ಹಾಗು ಉದ್ಯಮಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಜಾಥಾ ನಡೆಯಲಿದೆ. ಅಪಘಾತಕ್ಕೆ ಕಾರಣವಾದ ರಸ್ತೆಯ ವಿರುದ್ಧ ಇವರು ಪ್ರತಿಭಟನೆಯನ್ನು ನಡೆಸಲಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜಗತ್ತಿಗೆ ತೆರೆದಿಡುವ ಹಾಗು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಜಾಗೃತಿ ಮೂಡಿಸವುದು ಈ ಜಾಥದ ಉದ್ದೇಶ.

ಕಳೆದ ಜನವರಿ 15 ರಂದು ದಾವಣಗೆರೆಯಿಂದ ಗೋವಾಕ್ಕೆ ಹೊರಟಿದ್ದ 13 ಜನ ಮಹಿಳೆಯರು ದಾರವಾಡದ ಇಟಿಗಟ್ಟಿ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಇದನ್ನು ಓದಿ: ಭೀಕರ ಅಪಘಾತ: ಸಂಕ್ರಾಂತಿ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ 13 ಜನರ ದುರ್ಮರಣ; ಉಳಿದವರ ಸ್ಥಿತಿ ಗಂಭೀರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.