ಬೆಂಗಳೂರು: ಸುಖಾಸುಮ್ಮನೆ ದಾಖಲೆ ಪರಿಶೀಲನೆಗೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆಯುವಂತಿಲ್ಲ ಎಂಬ ನಿಯಮ ರಾಜ್ಯದಲ್ಲಿ ಜಾರಿಗೆ ಬಂದ ಬೆನ್ನಲ್ಲೇ ಇದೀಗ ಮತ್ತೊಂದು ಆದೇಶ ಹೊರಬಿದ್ದಿದೆ.
ಹೌದು, ಯಾವುದೇ ವ್ಯಕ್ತಿ ಆರೋಪಿಯಾಗಿರಲಿ, ವಿಚಾರಣಾ ಕೈದಿಯಾಗಿರಲಿ ಅಥವಾ ಅಪರಾಧಿಯಾಗಿರಲಿ, ಆ ವ್ಯಕ್ತಿ ಏಕೆ ಬಂಧನವಾಗಿದ್ದಾರೆ ಎಂಬುದಕ್ಕೆ ಸಂಬಂಧಿತ ದಾಖಲೆಯಲ್ಲಿ ಕಾರಣ ದಾಖಲಿಸದ ಹೊರತು ಕೈಕೋಳ ಹಾಕಬಾರದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇನ್ನು, ಸಂಬಂಧಿತ ದಾಖಲೆಯಲ್ಲಿ ಕಾರಣ ದಾಖಲಿಸದ ಹೊರತು ಕೈಕೋಳ ಹಾಕಿದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಇದಕ್ಕೆ ಹೊಣೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.