ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ರಾಜ್ಯದ ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಅ.22 ರವರೆಗೆ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗಲಿದ್ದು. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲೀ 2 ದಿನಗಳ ಬಳಿಕ ಮಳೆ ಹೆಚ್ಚಾಗಲಿದೆ ಎಂದಿದೆ.
ಬಾದಾಮಿ, ಬಳ್ಳಾರಿ, ಬೆಂಗಳೂರು ನಗರ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಗೋಕರ್ಣ, ಹಂಪಿ, ಹೊನ್ನಾವರ, ಕಲಬುರಗಿ, ಕಾರವಾರ, ಮಡಿಕೇರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು ಹಾಗೂ ವಿಜಯಪುರದಲ್ಲಿ ಮಳೆಯಾಗಲಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ಪ್ರಮುಖ ನಗರಳ ತಾಪಮಾನ:
ಬೆಂಗಳೂರು: 27-19, ಮಂಗಳೂರು: 29-24, ಶಿವಮೊಗ್ಗ: 28-21, ಬೆಳಗಾವಿ: 27-20, ಮೈಸೂರು: 27-20, ಮಂಡ್ಯ: 28-20, ಮಡಿಕೇರಿ: 23-17, ರಾಮನಗರ: 28-20, ಹಾಸನ: 29-19, ಚಾಮರಾಜನಗರ: 27-20, ಚಿಕ್ಕಬಳ್ಳಾಪುರ: 28-18, ಕೋಲಾರ: 28-20, ತುಮಕೂರು: 28-20,ಉಡುಪಿ: 29-24, ಕಾರವಾರ: 29-25, ಚಿಕ್ಕಮಗಳೂರು: 25-18, ದಾವಣಗೆರೆ: 29-21, ಚಿತ್ರದುರ್ಗ: 28-21, ಹಾವೇರಿ: 29-22, ಬಳ್ಳಾರಿ: 31-23, ಗದಗ: 29-21, ಕೊಪ್ಪಳ: 30-22, ರಾಯಚೂರು: 31-23 ಡಿಗ್ರಿ ಸೆಲ್ಸಿಯಸ್ ಇರಲಿದೆ.