ಹುರುಳಿಕಾಳಿನ ಆರೋಗ್ಯ ಪ್ರಯೋಜನ

ಒಂದು ಅದ್ಭುತ ದ್ವಿದಳ ಧಾನ್ಯವಾದ ಹುರುಳಿಯು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ನೋಡೋಣ. ಜತೆಗೆ ಅದರಿಂದ ಮಾಡಬಹುದಾದ ಪಾಕ ವಿಧಾನವೂ ಇದೆ! ಹೆಚ್ಚು ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟಿನ್‌ನಿಂದ ಕೂಡಿದೆ. ದ್ವಿದಳ ಧಾನ್ಯಗಳಲ್ಲಿಯೇ…

ಒಂದು ಅದ್ಭುತ ದ್ವಿದಳ ಧಾನ್ಯವಾದ ಹುರುಳಿಯು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ನೋಡೋಣ. ಜತೆಗೆ ಅದರಿಂದ ಮಾಡಬಹುದಾದ ಪಾಕ ವಿಧಾನವೂ ಇದೆ! ಹೆಚ್ಚು ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟಿನ್‌ನಿಂದ ಕೂಡಿದೆ.

ದ್ವಿದಳ ಧಾನ್ಯಗಳಲ್ಲಿಯೇ ಅದು ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ ಹಾಗೂ ಅತಿ ಹೆಚ್ಚು ಸಸ್ಯಗಳ ಮೂಲದ ಪ್ರೊಟಿನ್ ಅನ್ನು ಹೊಂದಿದೆ.ಕಡಿಮೆ ಕೊಬ್ಬು ಹಾಗೂ ಹೆಚ್ಚು ಶರ್ಕರ ಪಿಷ್ಟ ದಿಂದ ಕೂಡಿದೆ.ಕಡಿಮೆ ಮೇದಸ್ಸು ಮತ್ತು ಸೋಡಿಯಂನಿಂದ ಕೂಡಿದೆ. ಅದರ ಜೀರ್ಣಕಾರಿ ಪಿಷ್ಟವು ಮಧುಮೇಹ ಮತ್ತು ಸ್ಥೂಲಕಾಯರಿಗೆ ಸೂಕ್ತ ಆಹಾರವಾಗಿದೆ. ಕಾಮಾಲೆ ಅಥವಾ ಸ್ರಾವರೋಧಗಳಿಂದ ನರಳುತ್ತಿರುವವರಿಗೆ ಆಯುರ್ವೇದ ಪಾಕಪದ್ಧತಿಯು, ಹುರುಳಿಯನ್ನು ಶಿಫಾರಸ್ ಮಾಡುತ್ತದೆ.

ಸಂಧಿವಾತ, ಉದರದಲ್ಲಿನ ಹುಳುಗಳು, ಕಣ್ಣಿನ ಸೋಂಕು ಹಾಗೂ ಮೂಲವ್ಯಾಧಿಗಳು ಹುರುಳಿಯ ಮುಂದೆ ಹೆದರಿ ಓಡುವುದು. ದೇಹದಲ್ಲಿ ಉಷ್ಣ ಮತ್ತು ಶಕ್ತಿಯನ್ನು ಉತ್ಪಾಧಿಸುವ ಸಾಮರ್ಥ್ಯ ಹುರುಳಿಗಿದೆ. ಆದ್ದರಿಂದ ಅದು ದೇಹವನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ. ಹುರುಳಿ ಕಾಳು ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಈ ಹುರುಳಿ ಕಾಳು ದೇಹದಲ್ಲಿನ ಇನ್ಸುಲಿನ್ ರಚನೆಯನ್ನು ಕಡಿಮೆ ಮಾಡುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Vijayaprabha Mobile App free

ಬೇಯಿಸಿದ ಹುರಳಿಯನ್ನು ಹಾಗು ಹುರಳಿ ಕಟ್ಟು ನಿಯಮಿತವಾಗಿ ಸೇವಿಸುವುದರಿಂದ ಮೂತ್ರ ಪಿಂಡದ ಸಣ್ಣ ಸಣ್ಣ ಕಲ್ಲುಗಳು ಹೊರಬೀಳುತ್ತವೆ ಅಲ್ಲದೆ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳ ರಚನೆಯನ್ನು ಹುರುಳಿ ತಡೆಯುತ್ತದೆ. ಹುರುಳಿಕಾಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಹಲವಾರು ಅಪಾಯಕಾರಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

ಹಸಿ ಹುರುಳಿಕಾಳು ವಿಶೇಷವಾಗಿ ಆಂಟಿ ಆಕ್ಸಿಡೆಂಟ್‌ಗಳಾದ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಹೆಚ್ಚು ಹೊಂದಿದೆ, ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಮ್ಮ ಚಕ್ರದ ಸಮಯದಲ್ಲಿ ನೀವು ಭಾರೀ ರಕ್ತಸ್ರಾವವನ್ನು ಹೊಂದಿರುವಾಗ, ಹುರುಳು ಕಾಳು ತಿನ್ನುವುದರಿಂದ ನಿಮಗೆ ಸಹಾಯ ಮಾಡಬಹುದು. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.