ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ರಣಭೀಕರ ಮಳೆಯಾಗುತ್ತಿದ್ದು, ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಆರೆಂಜ್ ಹಾಗೂ 6 ಜಿಲ್ಲೆಗಳಲ್ಲಿ ‘ಯೆಲ್ಲೋ’ ಆಲರ್ಟ್ ಘೋಷಿಸಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ರೆಡ್ ಆಲರ್ಟ್ ಘೋಷಿಸಲಾಗಿದ್ದು, ಧಾರವಾಡ, ಹಾವೇರಿ, ಕಲಬುರಗಿ, ಬೆಳಗಾವಿ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಯಾದಗಿರಿ, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ, ಮೈಸೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿವಿಧ ನಗರಗಳ ತಪಮಾನ ಹೀಗಿದೆ :
ಬೆಂಗಳೂರು: 34-22, ಮಂಗಳೂರು: 33-27, ಶಿವಮೊಗ್ಗ: 37-23, ಬೆಳಗಾವಿ: 36-22, ಮೈಸೂರು: 35-22, ಮಂಡ್ಯ: 36-23, ಕೊಡಗು: 31-20, ರಾಮನಗರ: 37-23, ಹಾಸನ: 35-21, ಚಾಮರಾಜನಗರ: 34-22, ಚಿಕ್ಕಬಳ್ಳಾಪುರ: 34-19, ಕೋಲಾರ: 34-21, ತುಮಕೂರು: 36-22, ಉಡುಪಿ: 33-27, ಕಾರವಾರ: 33-27, ಚಿಕ್ಕಮಗಳೂರು: 34-21, ದಾವಣಗೆರೆ: 38-23, ಚಿತ್ರದುರ್ಗ: 37-23, ಹಾವೇರಿ: 37-23, ಬಳ್ಳಾರಿ: 39-26, ಗದಗ: 37-24, ಕೊಪ್ಪಳ: 38-24, ರಾಯಚೂರು: 39-26, ಯಾದಗಿರಿ: 39-27, ವಿಜಯಪುರ: 38-27, ಬೀದರ್: 38-26, ಕಲಬುರಗಿ: 39-27, ಬಾಗಲಕೋಟೆ: 38-26 ಡಿಗ್ರಿ ಸೆಲ್ಸಿಯಸ್ ಇರಲಿದೆ.




