ಜುಲೈನಲ್ಲಿ ಪ್ರಳಯ! ಬಾಬಾ ವಂಗಾರ ಭಯಾನಕ ಭವಿಷ್ಯವಾಣಿ

Baba Vanga prophecy : ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಯಾವಾಗಲೂ ಜನರನ್ನು ಅಚ್ಚರಿಗೊಳಿಸುತ್ತವೆ ಮತ್ತು ಭಯವನ್ನೂ ಹುಟ್ಟಿಸುತ್ತವೆ. ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು ಈ ವರೆಗೆ ನಿಜವಾಗಿವೆ. ಅದೇ ರೀತಿ, ಈಗ ಜಪಾನೀಸ್…

Baba Vanga prophecy

Baba Vanga prophecy : ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಯಾವಾಗಲೂ ಜನರನ್ನು ಅಚ್ಚರಿಗೊಳಿಸುತ್ತವೆ ಮತ್ತು ಭಯವನ್ನೂ ಹುಟ್ಟಿಸುತ್ತವೆ. ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು ಈ ವರೆಗೆ ನಿಜವಾಗಿವೆ. ಅದೇ ರೀತಿ, ಈಗ ಜಪಾನೀಸ್ ಬಾಬಾ ವಂಗಾ ಎಂದೇ ಪ್ರಸಿದ್ಧರಾಗಿರುವ ರಿಯೋ ತತ್ಸುಕಿ ಅವರು ನುಡಿದ ಹೊಸ ಮತ್ತು ಆತಂಕಕಾರಿ ಭವಿಷ್ಯ ಲಭ್ಯವಾಗಿದೆ. ಈ ವರ್ಷದ ಜುಲೈನಲ್ಲಿ ದೊಡ್ಡ ಪ್ರಳಯ ಸಂಭವಿಸಲಿದೆ ಎ೦ಬ ಎಚ್ಚರಿಕೆ ಇದಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೊಡ್ಡ ವಿಪತ್ತು

ಜಪಾನ್‌ನ ಬಾಬಾ ವಂಗಾ ಅವರು ಜುಲೈ 2025 ರಲ್ಲಿ ಜಗತ್ತಿಗೆ ದೊಡ್ಡ ವಿಪತ್ತು ಸಂಭವಿಸಬಹುದು ಎ೦ದು ಎಚ್ಚರಿಸಿದ್ದಾರೆ. ಇದು ನಿಜವಾದರೆ ಇದುವರೆಗಿನ ಅತ್ಯಂತ ಅಪಾಯಕಾರಿ ಬಿಕ್ಕಟ್ಟುಗಳಲ್ಲಿ ಒಂದಾಗಿರುತ್ತದೆ. ಅವರ ಹಿಂದಿನ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಆದ್ದರಿಂದ ಇದನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಲಾಗುತ್ತಿದೆ.

ಏನಿದು ವಿಪತ್ತು?

ಬಾಬಾ ವಂಗಾರ ಹೊಸ ಭವಿಷ್ಯವಾಣಿಯ ಪ್ರಕಾರ, ಜುಲೈ 2025 ರಲ್ಲಿ ಜಪಾನ್‌ಗೆ ಅತ್ಯಂತ ವಿನಾಶಕಾರಿ ಸುನಾಮಿ ಅಪ್ಪಳಿಸಬಹುದು, ಇದು 2011 ರ ಸುನಾಮಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ. ಅವರು ಈ ದೃಶ್ಯವನ್ನು ಕನಸಿನಲ್ಲಿ ಕಂಡಿದ್ದಾರೆ. ಅವರ ಪ್ರಕಾರ ಇದು ಮುಂಬರುವ ಭೀಕರ ವಿಪತ್ತಿನ ಎಚ್ಚರಿಕೆಯಾಗಿದೆ.

Vijayaprabha Mobile App free

ಅನೇಕ ದೇಶಗಳು

ಜಪಾನ್‌ನ ದಕ್ಷಿಣಕ್ಕೆ ಸಮುದ್ರವು ಕುದಿಯುತ್ತಿರುವ ಕನಸನ್ನು ಅವರು ಕಂಡಿದ್ದಾರೆ. ಕೆಲವು ಜನರು ಈ ದೃಶ್ಯವನ್ನು ಸಮುದ್ರದ ಅಡಿಯಲ್ಲಿ ಜ್ವಾಲಾಮುಖಿ ಸ್ಪೋಟದ ಸಂಕೇತವೆಂದು ಪರಿಗಣಿಸುತ್ತಿದ್ದಾರೆ, ಹಾಗಾಗಿ ಇದು ಈ ಬಾರಿ ಸುನಾಮಿಗೆ ಕಾರಣವಾಗಬಹುದು. ಇದು ಜಪಾನ್‌ಗೆ ಮಾತ್ರ ಸೀಮಿತವಾಗಿರದೆ, ಫಿಲಿಪೈನ್ಸ್, ತೈವಾನ್, ಇಂಡೋನೇಷ್ಯಾ ಮತ್ತು ಇತರ ಹಲವು ಪ್ರದೇಶಗಳ ಮೇಲೂ ಪರಿಣಾಮ ಬೀರಬಹುದು.

ಭಾರತಕ್ಕೆ ಅಪಾಯ

ಡಿಸೆಂಬರ್ 26, 2004 , ಇಂಡೋನೇಷ್ಯಾದ ಸಮುದ್ರ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಭೀಕರ ಸುನಾಮಿಯನ್ನು ಭಾರತ ಎದುರಿಸಿತ್ತು. ಇದರಲ್ಲಿ ದಕ್ಷಿಣ ಭಾರತದ ಅನೇಕ ಪ್ರದೇಶಗಳು ಕಷ್ಟ ಅನುಭವಿಸಿದ್ದವು. ಇದು ಸಾವಿರಾರು ಜೀವಗಳನ್ನು ಅಪಾಯಕ್ಕೆ ಸಿಲುಕಿಸಿತ್ತು. ಆದ್ದರಿಂದ, ಭಾರತದಂತಹ ದೇಶಗಳು ಮುಂಚಿತವಾಗಿ ತಯಾರಿ ನಡೆಸಬೇಕಾಗಿದೆ.

ವಂಗಾರ ಪ್ರಸಿದ್ಧ ಭವಿಷ್ಯವಾಣಿಗಳು

  1. 1991 ರಲ್ಲಿ ಫ್ರೆಡ್ಡಿ ಮರ್ಕ್ಯುರಿಯ ಸಾವು (ಏಡ್ಸ್ ನಿಂದಾಗಿ)
  2. 1995 ರಲ್ಲಿ ಜಪಾನ್‌ನ ಕೋಬ್ ನಗರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಮುನ್ಸೂಚನೆ
  3. 2011 ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಸುನಾಮಿಯ ಎಚ್ಚರಿಕೆ
  4. 2020 ರಲ್ಲಿ, ಒಂದು ನಿಗೂಢ ವೈರಸ್ ಹರಡುವ ಮುನ್ಸೂಚನೆ

ಈ ಎಲ್ಲಾ ಈ ಘಟನೆಗಳನ್ನು ಅವರು ಈಗಾಗಲೇ ತನ್ನ ಕನಸಿನಲ್ಲಿ ನೋಡಿದ್ದು ಎಂದು ಹೇಳಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.