ರಾಜಧಾನಿ ಸೇರಿದಂತೆ ಹಲವು ಕಡೆ ನಿರತರವಾಗಿ ಮಳೆ ಸುರಿಯುತ್ತಿದ್ದು, ರಾಜ್ಯದ ಕರಾವಳಿ ಜೆಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇನ್ನೂ 3 ದಿನ (ಬುಧವಾರದವರೆಗೆ) ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಇಂದು ಶಾಲೆಗಳಿಗೆ ರಜೆ ನೀಡಲಾಗಿದ್ದು, ಹಾಸನ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು, ರಾಜ್ಯದ ಕೆಲವು ಭಾಗಗಳಲ್ಲಿ ಅಬ್ಬರಿಸಿದ್ದ ವರುಣ ಇಂದಿನಿಂದ ಕೊಂಚ ತಗ್ಗುವ ಲಕ್ಷಣಗಳಿದ್ದು, ಕರಾವಳಿ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯಬ್ಬರ ಕಡಿಮೆಯಾಗಲಿದೆ ಎನ್ನಲಾಗಿದೆ.
ಇಂದಿನ ದಿನ ಹವಾಮಾನ ವರದಿ:
ಬೆಂಗಳೂರು: 26-20
ಮಂಗಳೂರು: 27-25
ಶಿವಮೊಗ್ಗ: 24-21
ಬೆಳಗಾವಿ: 23-20
ಮೈಸೂರು: 26-21
ದಾವಣಗೆರೆ: 25-21
ಚಿತ್ರದುರ್ಗ: 25-21
ಹಾವೇರಿ: 25-21
ಬಳ್ಳಾರಿ: 28-23
ಗದಗ: 24-21
ಕೊಪ್ಪಳ: 34-27
ಮಂಡ್ಯ: 27-21
ಕೊಡಗು: 20-17
ರಾಮನಗರ: 27-21
ಹಾಸನ: 22-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 24-19
ಕೋಲಾರ: 27-21
ತುಮಕೂರು: 26-21
ಉಡುಪಿ: 27-24
ಚಿಕ್ಕಮಗಳೂರು: 21-18
ರಾಯಚೂರು: 26-23
ಯಾದಗಿರಿ: 29-23
ವಿಜಯಪುರ: 27-22
ಬೀದರ್: 27-21
ಕಲಬುರಗಿ: 28-22
ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.