Small savings: ಪಿಪಿಎಫ್, ಸುಕನ್ಯಾ ಹೂಡಿಕೆದಾರರಿಗೆ ಬಿಗ್ ರಿಲೀಫ್; ಇವರು ಆಧಾರ್ ಮತ್ತು ಪ್ಯಾನ್ ನೀಡುವ ಅಗತ್ಯವಿಲ್ಲ..!?

Small savings scheme Small savings scheme

Small savings: ಕೇಂದ್ರ ಸರ್ಕಾರದ ಅಡಿಯಲ್ಲಿ ಸಣ್ಣ ಮೊತ್ತದ ಉಳಿತಾಯ ಯೋಜನೆಗಳಿಗೆ ಉತ್ತಮ ಬೇಡಿಕೆ ಇದೆ. ಹೆಚ್ಚಿನ ಬಡ್ಡಿದರ ನೀಡುವುದರಿಂದ ಜನರು ಇವುಗಳಲ್ಲಿ ಹಣ ಹೂಡುತ್ತಿದ್ದಾರೆ. ಇದರಲ್ಲಿ ಮತ್ತೆ ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಅವಧಿ ಠೇವಣಿಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿವೆ. ಆದರೆ, ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕು ಎಂದು ಕೇಂದ್ರ ಸೂಚಿಸಿದ್ದು,. ಈ ನಿಟ್ಟಿನಲ್ಲಿ, ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31, 2023 ರಂದು ಅಧಿಸೂಚನೆಯನ್ನು ಹೊರಡಿಸಿದೆ.

ಇದನ್ನೂ ಓದಿ: ಗುಡುಗು ಮಿಂಚಿನಿಂದ ಪಾರಾಗುವುದು ಹೇಗೆ? ದಯವಿಟ್ಟು ಗಮನಿಸಿ!

ಈ ಅಧಿಸೂಚನೆಯ ಪ್ರಕಾರ, ನಿಮ್ಮ ಯುಸರ್ ಕಸ್ಟಮರ್ ಪ್ರೊಸಸ್ (your customer process) ಭಾಗವಾಗಿ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಪ್ಯಾನ್ ಮತ್ತು ಆಧಾರ್ ಅನ್ನು ಸಲ್ಲಿಸಬೇಕು. ಗಡುವು ಸೆಪ್ಟೆಂಬರ್ 30 ಆಗಿದೆ. ಗಡುವಿನೊಳಗೆ ಆಧಾರ್ ಮತ್ತು ಪ್ಯಾನ್ ನೀಡದಿದ್ದರೆ ಆಯಾ ಉಳಿತಾಯ ಖಾತೆಗಳನ್ನು ಸ್ಥಗಿತಗೊಳಿಸುವ ಸಾದ್ಯತೆಯಿದೆಯೆಂದು ಎಂದು ಕೇಂದ್ರ ಎಚ್ಚರಿಸಿದೆ. ಇದರಿಂದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುವವರು ಕಂಗಾಲಾಗಿದ್ದಾರೆ. ಅನೇಕರು ಅಂಚೆ ಕಚೇರಿ, ಬ್ಯಾಂಕ್‌ಗಳ ಸುತ್ತ ತಿರುಗಾಡುತ್ತಿದ್ದಾರೆ. ಆದರೆ, ಕೇಂದ್ರ ಕೆಲವರಿಗೆ ಬಿಗ್ ರಿಲೀಫ್ ನೀಡಿದೆ. ಅವರು ಆಧಾರ್ ಮತ್ತು ಪ್ಯಾನ್ ಕಾರ್ಡ್ ನೀಡುವ ಅಗತ್ಯವಿಲ್ಲ.
ಇವರು ಆಧಾರ್ ಮತ್ತು ಪ್ಯಾನ್ ನೀಡುವ ಅಗತ್ಯವಿಲ್ಲ

Advertisement

Small savings scheme
Small savings scheme

ಹಣಕಾಸು ಇಲಾಖೆಯ ಅಧಿಸೂಚನೆಯ ಪ್ರಕಾರ, ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು (Small savings scheme) ತೆರೆದಿರುವ ಮತ್ತು ಆ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ಒದಗಿಸದಿರುವವರು ಆರು ತಿಂಗಳೊಳಗೆ ಅದನ್ನು ಒದಗಿಸಬೇಕು. ಅಂದರೆ, ಏಪ್ರಿಲ್ 1, 2023 ರಿಂದ ಆರು ತಿಂಗಳು ಅಂದರೆ ಸೆಪ್ಟೆಂಬರ್ 30, 2023 ರಿಂದ ಸಲ್ಲಿಸಬೇಕು. ಆದರೆ, ಕೆನರಾ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ‘ಏಪ್ರಿಲ್ 1, 2023 ರಿಂದ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೊಸ ಖಾತೆದಾರರಿಗೆ ಆಧಾರ್ ಮತ್ತು ಶಾಶ್ವತ ಖಾತೆ ಸಂಖ್ಯೆ ಪ್ಯಾನ್ ನೀಡುವುದು ಕಡ್ಡಾಯವಾಗಿದೆ’. ಇದರ ಪ್ರಕಾರ, ನೀವು ಏಪ್ರಿಲ್ 1, 2023 ರ ನಂತರ ಸಣ್ಣ ಉಳಿತಾಯ ಯೋಜನೆಯ ಖಾತೆಯನ್ನು ತೆರೆದರೆ, ನೀವು ಪ್ಯಾನ್ ಮತ್ತು ಆಧಾರ್ ಅನ್ನು ಈಗಾಗಲೇ ನೀಡುತ್ತೀರಿ. ನೀಡಿದರೆ ಮಾತ್ರ ಬ್ಯಾಂಕ್ ಮತ್ತು ಅಂಚೆ ಕಚೇರಿ ಖಾತೆ ತೆರೆಯಲಾಗುತ್ತದೆ. ಆದ್ದರಿಂದ ಇವರು ಈಗ ಮತ್ತೆ ನೀವು ಸೆಪ್ಟೆಂಬರ್ 30, 2023 ರ ಮೊದಲು ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆಯನ್ನು ಸಲ್ಲಿಸುವ ಅಗತ್ಯವಿಲ್ಲ. ನೀವು ಈಗಾಗಲೇ ನೀಡಿರುವಂತೆ ಸೆಪ್ಟೆಂಬರ್ 30 ರ ಗಡುವು ನಿಮಗೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ: ಕೇಂದ್ರದ ಹೊಸ ಪೋರ್ಟಲ್ ಮೂಲಕ ರೈತರಿಗೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ರೂ ಸಾಲ; ಹೀಗೆ ಅರ್ಜಿ ಸಲ್ಲಿಸಿ!

Small savings scheme: ಪ್ಯಾನ್ ಮತ್ತು ಆಧಾರ್ ನೀಡದಿದ್ದರೆ ಏನಾಗುತ್ತದೆ?

ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳ ಮೂಲಕ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಸೆಪ್ಟೆಂಬರ್ 30, 2023 ರೊಳಗೆ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕು. ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ನೀವು ಪ್ಯಾನ್, ಆಧಾರ್ ಸಲ್ಲಿಸುವವರೆಗೂ ಅದು ಫ್ರೀಜ್ ಆಗಿರುತ್ತದೆ. ಇದರಿಂದಾಗಿ ನಿಮಗೆ ಬರಬೇಕಾದ ಬಡ್ಡಿ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಅಲ್ಲದೆ, ನೀವು PPF ಮತ್ತು ಸುಕನ್ಯಾ ಸಮೃದ್ಧಿಯಂತಹ ಯೋಜನೆಗಳಲ್ಲಿ ಠೇವಣಿ ಮಾಡಲು ಸಾಧ್ಯವಿಲ್ಲ. ಸ್ಕೀಮ್ ಅವಧಿ ಮುಗಿದ ನಂತರವೂ ಮೆಚ್ಯೂರಿಟಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಆಸ್ತಿ ಖರೀದಿ, ಮಾರಾಟಕ್ಕೆ ಹೊಸ ನಿಯಮ ಜಾರಿ; ಇನ್ಮುಂದೆ ಆಸ್ತಿ ನೋಂದಣಿ ಬಲು ದುಬಾರಿ!

ಇನ್ನು, ಅಂಚೆ ಕಛೇರಿ ಯೋಜನೆಗಳು ಮುಖ್ಯವಾಗಿ ಸ್ಥಿರ ಠೇವಣಿಗಳು, ಮರುಕಳಿಸುವ ಠೇವಣಿಗಳು, ಮಾಸಿಕ ಆದಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಸಮಯ ಠೇವಣಿಗಳು, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರಗಳಂತಹ ಯೋಜನೆಗಳು ಸಹ ಒಳಗೊಂಡಿವೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement