escape Thunder and lightning: ಸದ್ಯ ಈಶಾನ್ಯ ಮುಂಗಾರು ಮಳೆ ಬೀಳುತ್ತಿದೆ.ಈ ಸಮಯದಲ್ಲಿ ಕೃಷಿ ಕೆಲಸವೂ ಜೋರಾಗಿಯೇ ಇದೆ.ಹೀಗಾಗಿ ಕೃಷಿಭೂಮಿಗಳು ಜನರಿಂದ ತುಂಬಿರುವ ಕಾಲವಿದು. ಈ ಹಿನ್ನೆಲೆಯಲ್ಲಿ ಗುಡುಗು ಮತ್ತು ಸಿಡಿಲಿನ ಹೊಡೆತದಿಂದ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ತಿಳಿಯೋಣ.
ಇದನ್ನೂ ಓದಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಾಲ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ
Thunder and lightning: 30/30 ಗುಡುಗು ನಿಯಮ
- ನೀವು ಮಿಂಚನ್ನು ನೋಡಿದರೆ ಮತ್ತು ಗುಡುಗು ಶಬ್ದವನ್ನು ಕೇಳಿದರೆ 30 ಸೆಕೆಂಡುಗಳಲ್ಲಿ ಕೋಣೆಯೊಳಗೆ ರಕ್ಷಣೆ ಪಡೆಯಿರಿ.
- ನೀವು ಕನಿಷ್ಟ 30 ನಿಮಿಷಗಳ ಕಾಲ ಗುಡುಗು ಸದ್ದು ಕೇಳದಿದ್ದಾಗ, ನೀವು ಹೊರಗೆ ಬರಬಹುದು.
- ಮರದ (ಅಥವಾ) ಕಂಬದ ಕೆಳಗೆ ರಕ್ಷಣೆ ತೆಗೆದುಕೊಳ್ಳಬೇಡಿ.
Thunder and lightning: ಜಲಾವೃತವಾದ ಜಾಗ
ಬೇಸಾಯಕ್ಕೆ ಹೋಗುವ ಮೊದಲು ಯಾವಾಗಲೂ ಹವಾಮಾನ ಸುದ್ದಿಗಳನ್ನು ಪರಿಶೀಲಿಸಿ. ನೀರು ತುಂಬಿರುವ ಗದ್ದೆಯಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವಾಗ ಗುಡುಗು ಅಥವಾ ಮಿಂಚು ಬಂದರೆ ಆ ಜಾಗವನ್ನು ಬಿಟ್ಟು ಒಣ ಭೂಮಿಯಲ್ಲಿ ಅಡ್ಡವಾಗಿ ಕಾಲು ಹಾಕಿ ಕುಳಿತುಕೊಳ್ಳಿ.
ಇದನ್ನೂ ಓದಿ: ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್; ಒಣ, ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಔಷಧಿ
ಅಡ್ಡ ಕಾಲು ಏಕೆ ?
- ನಿಮ್ಮ ಹಿಮ್ಮಡಿಗಳು ಒಂದಕ್ಕೊಂದು ತಾಗುತ್ತಿರಬೇಕು.ಇದರ ಪರಿಣಾಮವಾಗಿ ನೆಲಕ್ಕೆ ಅಪ್ಪಳಿಸುವ ವಿದ್ಯುತ್ ಒಂದು ಕಾಲಿನಿಂದ ಇನ್ನೊ೦ದು ಕಾಲಿನ ಮೂಲಕ ಹರಿಯುತ್ತದೆ.
- ಹೀಗೆ ಕೂರದಿದ್ದರೆ ಅಪಾಯ ಎದುರಾಗಬಹುದು. ಅದೇ ಸಮಯದಲ್ಲಿ, ಕಿವಿಗಳನ್ನು ಕೈಗಳಿಂದ ಮುಚ್ಚಬೇಕು.
- ಇದನ್ನು ಮಾಡಬೇಡಿ:
- ಆಡು, ಹಸುಗಳಂತಹ ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು.
- ಮಿಂಚಿನ ಸಮಯದಲ್ಲಿ ಛತ್ರಿಯನ್ನು ಒಯ್ಯಬೇಡಿ. ಏಕೆಂದರೆ ವಿದ್ಯುತ್ ಛತ್ರಿ ತಂತಿಗಳ ಮೂಲಕ ಹರಿಯಬಹುದು.
- ಮಳೆ ಬಂದ ನಂತರ ಕೃಷಿ ಪಂಪ್ ಸೆಟ್ ಒದ್ದೆಯಾಗಿದ್ದರೆ ಅದನ್ನು ಮುಟ್ಟಬೇಡಿ.
- ಶಾರ್ಟ್ ಸರ್ಕ್ಯೂಟ್ ಅಥವಾ ಎಲೆಕ್ನಿಕ್ ಮೋಟರ್ ನಲ್ಲಿ ಬೆಂಕಿ ಕಾಣಿಸಿಕೊಂಡರೆ, ತಕ್ಷಣವೇ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ.
- ಗುಡುಗು ಮತ್ತು ಸಿಡಿಲಿನ ಸಮಯದಲ್ಲಿ ವಿದ್ಯುತ್ ಉಪಕರಣಗಳು, ಸೆಲ್ ಫೋನ್ ಇತ್ಯಾದಿಗಳನ್ನು ಬಳಸಬೇಡಿ.
- ಕೊಯ್ದು ಮಾಡಿದ ಕಾಳುಗಳನ್ನು ಹೊರಗೆ ಇಟ್ಟರೆ ಪಾಲಿಥಿನ್ ಕವರ್ನಿಂದ ಮುಚ್ಚಲು ಮರೆಯಬೇಡಿ.
ಇದನ್ನೂ ಓದಿ: ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ? ತಿಳಿಯಲು ಇಲ್ಲಿದೆ ಸರಳ ಪ್ರಕ್ರಿಯೆ!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |