ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಸಪ್ತಪದಿ’ಯನ್ನು ಆಯೋಜಿಸಲಾಗಿದ್ದು, ಮಾರ್ಚ್ 15 ಮತ್ತು ಜೂನ್ 17ರಂದು ಈ ವಿವಾಹ ಕಾರ್ಯಕ್ರಮ ನಡೆಯಲಿದ್ದು ಸಪ್ತಪದಿ ತುಳಿಯುವ ವಧು ವರರಿಗೆ 55,000 ರೂ ಪ್ರೋತ್ಸಾಹಧನ ನೀಡಲಾಗುವದು.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಸರು ನೋಂದಾವಣೆಗೆ ಫೆಬ್ರುವರಿ 28 ಕೊನೆಯ ದಿನವಾಗಿದ್ದು, ವರನ ಪ್ರೋತ್ಸಾಹಧನಕ್ಕೆ 5,000 ರೂ. ವಧುವಿಗೆ 10,000 ರೂ. ಮತ್ತು ವಧುವಿಗೆ ಚಿನ್ನದ ತಾಳಿ, 2 ಗುಂಡುಗಳಿಗಾಗಿ 40,000 ರೂ. ಗಳಂತೆ ಒಟ್ಟು 55,000ರೂ. ಗಳನ್ನು ನೀಡಲಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ 0821-2590027, 2590082 ಸಂಪರ್ಕಿಸಬಹುದು.
ಇದನ್ನು ಓದಿ: ಭರ್ಜರಿ ಸಿಹಿ ಸುದ್ದಿ: 380 ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಮುಂದಾದ ಪೊಲೀಸ್ ಇಲಾಖೆ