1. ನಿಂಬೆ ರಸ ಮತ್ತು ಅಪ್ಪಟ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಸೇರಿಸಿ ಕೀಲು ನೋವು ಇರುವ ಸ್ಥಳಕ್ಕೆ ಹಚ್ಚಿ ಮಾಲೀಸು ಮಾಡುವುದರಿಂದ ನೋವು ಪರಿಹಾರವಾಗುತ್ತದೆ.
2. ಧಡೂತಿ ಶರೀರದವರು ಪ್ರತಿದಿನ ನಾಲ್ಕು ಟೀ ಚಮಚ ಹಳೆಯದಾದ ಜೇನು ತುಪ್ಪವನ್ನು ಸೇವಿಸುತ್ತಿದ್ದರೆ ಶರೀರದ ತೂಕ ಇಳಿಯುವುದು ಮತ್ತು ದೈಹಿಕ ಶಕ್ತಿ ಹೆಚ್ಚಾಗಿ ಮರಗಳಲ್ಲಿ ಹೊಸ ಚೈತನ್ಯ ತುಂಬಿ ಕೊಳ್ಳುವುದು.
3, ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ಧ ರಕ್ತ ವೃದ್ಧಿಯಾಗುವುದು ಹಾಗೂ ಮೂಳೆಗಳು ಶಕ್ತಿಯುತವಾಗುತ್ತದೆ.
4. ಹರಳೆಣ್ಣೆಯನ್ನು ಶರೀರಕ್ಕೆ ಹಚ್ಚಿ ಕೊಂಡು ಸ್ವಲ್ಪ ಕಾಲ ಬಿಸಿಲಿನಲ್ಲಿ ಶಕ್ತಿ ಸ್ನಾನ ಮಾಡಿ ಬಿಸಿನೀರಿನ ಅಭ್ಯಂಜನ ಮಾಡುವುದರಿಂದ ಮೈ ಕೈ ನೋವು ದೂರವಾಗಿ ಚೆನ್ನಾಗಿ ನಿದ್ರೆ ಆವರಿಸುವುದು.
5. ಉಳುಕಿರುವ ಮತ್ತು ಪೆಟ್ಟು ಬಿದ್ದು ಊದಿಕೊಂಡಿರುವ ಸ್ಥಾನಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ನಿವಾರಣೆ ಆಗುವುದು.
6. ಸುಮಾರು ಒಂದು ಅಂಗುಲ ಉದ್ದದ ಅರಿಶಿನ ಕೊನೆಯನ್ನು ನುಣ್ಣಗೆ ಪುಡಿ ಮಾಡಿ ಈ ಪುಡಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಚೆನ್ನಾಗಿ ಚೆನ್ನಾಗಿ ಕದಡಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಸಂಧಿವಾತ ಗುಣವಾಗುತ್ತದೆ.
ಇದನ್ನು ಓದಿ: ಹಲ್ಲಿನಿಂದ ಸೌಂದರ್ಯ ವೃದ್ಧಿ