Memory loss | ಇಂದಿನ ಆಧುನಿಕ ಜೀವನಶೈಲಿಯ ಒತ್ತಡಗಳು & ಬದಲಾವಣೆಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರ ಮೇಲೆ ದೈಹಿಕ & ಮಾನಸಿಕವಾಗಿ ತೀವ್ರವಾಗಿ ಪರಿಣಾಮ ಬೀರಿವೆ. ಇದು ಭಾರತೀಯರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎ೦ದು ಆಘಾತಕಾರಿ ಅಧ್ಯಯನವೊ೦ದು ಬಹಿರಂಗಪಡಿಸಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಪೀಳಿಗೆಯ ಮೇಲೆ ಪರಿಣಾಮ

ನೆನಪಿನ ಶಕ್ತಿ ಕುಂಠಿತವು ವ್ಯಕ್ತಿಯ ಜೀವಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೂ ಅಪಾಯವನ್ನುಂಟುಮಾಡುತ್ತಿದೆ ಎ೦ದು ಗುರುಗ್ರಾಮ್ನ ಮೇದಾಂತ ಆಸ್ಪತ್ರೆಯ ನರವಿಜ್ಞಾನಿ ಡಾ. ಅರುಣ್ ಗರ್ಗ್ ನಡೆಸಿದ ಅಧ್ಯಯನದಿಂದ ತಿಳಿದುಬ೦ದಿದೆ. 38% ವಿದ್ಯಾರ್ಥಿಗಳು ಶೈಕ್ಷಣಿಕ ಆತಂಕದಿಂದ, 40% ಜನರು ಒಂಟಿತನ ಅನುಭವಿಸುತ್ತಿದ್ದಾರೆ. ಇದು ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ.
ತಪ್ಪು ತೀರ್ಮಾನ
ಇನ್ನು, ಶೇ.8.7 ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳ ದುರುಪಯೋಗ ಮತ್ತು ಶಿಕ್ಷಣ ತಜ್ಞರಿಂದ ಉಂಟಾಗುವ ಒತ್ತಡದಿಂದಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂಬ ಆತಂಕಕಾರಿ ಅಂಶ ಬಿಡುಗಡೆಯಾಗಿದ್ದು, ಅತಿಯಾದ ಡಿಜಿಟಲ್ ಉಪಯೋಗದಿಂದ ಜನರು ನಿದ್ರಾಹೀನತೆ, ಸ್ಮರಣಶಕ್ತಿ ನಷ್ಟ, ಆತಂಕ & ಮೆದುಳಿನ ರಚನಾತ್ಮಕ ಬದಲಾವಣೆಗಳಿಂದ ಬಳಲುತ್ತಿದ್ದಾರೆ.
ಒತ್ತಡದ ಕಾರಣ
ದೀರ್ಘಾವಧಿಯವರೆಗೆ ಕೆಲಸ ಮಾಡುವುದು, ಸಂಸ್ಕರಿಸಿದ ಆಹಾರ ತಿನ್ನುವುದು, ನಿದ್ರೆಯ ಕೊರತೆ, ಒತ್ತಡ, ವಾಯು ಮಾಲಿನ್ಯ & ರಾಸಾಯನಿಕಗಳು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ. ಇದು ಜೀವನದ ಗುಣಮಟ್ಟದಲ್ಲಿನ ಕುಸಿತ, ಸಂಬಂಧಗಳ ಸ್ಥಗಿತ & ಶಕ್ತಿಯ ಕೊರತೆಯು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
ಮಾನಸಿಕ ಆರೋಗ್ಯ ರಕ್ಷಣೆ
ಪ್ರಸ್ತುತ 150 ಮಿಲಿಯನ್ಗಿಂತಲೂ ಹೆಚ್ಚು ಭಾರತೀಯರಿಗೆ ಮಾನಸಿಕ ಆರೋಗ್ಯ ಆರೈಕೆಯ ಅಗತ್ಯವಿದೆ ಎ೦ದು ಅಧ್ಯಯನ ತಿಳಿಸಿದೆ. ಈ ಅಪಾಯ ಕಡಿಮೆ ಮಾಡಲು, ಮೆದುಳಿನ ಆರೋಗ್ಯ ರಕ್ಷಿಸಲು ಸಾಕಷ್ಟು ನಿದ್ರೆ, ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರಗಳಿಗೆ ಆದ್ಯತೆ ನೀಡುವುದು & ಡಿಜಿಟಲ್ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸುವುದು ಅವಶ್ಯಕ.
ಸಾಮಾಜಿಕ ಬೆಂಬಲ
ಕುಟುಂಬಗಳಲ್ಲಿ ಮುಕ್ತ ಸಂಭಾಷಣೆ ಬೆಳೆಸುವುದು & ಸಾಮಾಜಿಕ ಜಾಗೃತಿ ಉತ್ತೇಜಿಸುವುದು ಅರಿವಿನ ದುರ್ಬಲತೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ದೇಶಾದ್ಯಂತ ಮಾನಸಿಕ ಆರೋಗ್ಯ ಸೇವೆಗಳನ್ನು ಸಂಘಟಿಸಬೇಕು & ಪ್ರತಿಯೊಬ್ಬ ನಾಗರಿಕರಿಗೂ ಇದರ ಬಗ್ಗೆ ತಿಳುವಳಿಕೆ ಇರಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ



