ಜೀರ್ಣಕ್ರಿಯೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಗುಣಪಡಿಸುವುದು ಹೇಗೆ? ಜೀರ್ಣಕ್ರಿಯೆ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲಿದೆ

ಉತ್ತಮ ಜೀರ್ಣಕ್ರಿಯೆ ಏಕೆ ಮುಖ್ಯ? ಆಹಾರವನ್ನು ಸೇವಿಸುವುದಕ್ಕಿಂತ ಮುಖ್ಯವಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನಾವು ಬಲವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವುದು ಬಹಳ ಮುಖ್ಯ. ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣವಾಗದಿದ್ದರೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು…

ಉತ್ತಮ ಜೀರ್ಣಕ್ರಿಯೆ ಏಕೆ ಮುಖ್ಯ?

ಆಹಾರವನ್ನು ಸೇವಿಸುವುದಕ್ಕಿಂತ ಮುಖ್ಯವಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನಾವು ಬಲವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವುದು ಬಹಳ ಮುಖ್ಯ. ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣವಾಗದಿದ್ದರೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಬೆಳೆದು ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿದ್ದರೆ ಏನಾಗುತ್ತದೆ?

Vijayaprabha Mobile App free
  • ಉಬ್ಬರ
  • ಅತಿಸಾರ
  • ಎದೆಯುರಿ
  • ಮಲಬದ್ಧತೆ
  • ಕರುಳಿನ ಉರಿಯೂತ
  • ಹೊಟ್ಟೆ ನೋವು

ದೇಹದಾರ್ಡ್ಯ ಮತ್ತು ಫಿಟ್‌ನೆಸ್:-

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕಳಪೆಯಾಗಿದ್ದರೆ ಆರೋಗ್ಯ ಸಮಸ್ಯೆಯಿಂದ ನೀವು ದೂರವಿರಲು ಸಾಧ್ಯವಿಲ್ಲ. ಮುಖ್ಯವಾಗಿ ನಿಮ್ಮ ಫಿಟ್‌ನೆಸ್ ಗುರಿಗಳನ್ನು ಸಾಧಿಸಲು ಅಥವಾ ನಿಮ್ಮ ದೇಹವನ್ನು ಸಶಕ್ತವಾಗಿ ಇರಿಸಲು ಬಹಳ ಕಷ್ಟವಾಗುತ್ತದೆ.

ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಅಥವಾ ಯಾವುದೇ ಫಿಟ್‌ನೆಸ್ ದಿನಚರಿಯನ್ನು ಅನುಸರಿಸಲು ನೀವು ಆಲೋಚಿಸುತ್ತಿದ್ದರೆ ಮೊದಲು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಜೀರ್ಣಕ್ರಿಯೆ ಸಮಸ್ಯೆಗೆ ತ್ವರಿತ ಪರಿಹಾರ:-

ಜೀರಿಗೆ ನೀರು: ಬಾಣಲೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ 1 ಚಮಚ ಜೀರಿಗೆ ಹಾಕಿ, ಬಾಣಲೆಯಲ್ಲಿರುವ ನೀರು ಅರ್ಧಕ್ಕೆ ಬರುವಷ್ಟರ ತನಕ ಕುದಿಸಿ. ಈಗ ನೀರನ್ನು ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುವ ಜೀರ್ಣಕಾರಿ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

ಇಂಗು ನೀರು: ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಿಂಗನ್ನು ಬೆರೆಸಿ ಅಥವಾ ಇಂಗು ಪುಡಿಯನ್ನೂ ಹಾಕಬಹುದು. ಊಟಕ್ಕೆ 30 ನಿಮಿಷಗಳ ಮೊದಲು ಇದನ್ನು ಕುಡಿಯಿರಿ.
ದುರ್ಬಲ ಜೀರ್ಣಾಂಗ ವ್ಯವಸ್ಥೆಗೆ ಔಷಧವಾಗಿ ಕಾರ್ಯನಿರ್ವಹಿಸುವ ಶಕ್ತಿಶಾಲಿ ಮಸಾಲೆ.

ಇಸಾನ್ಹೋಲ್ ಅಥವಾ ಸೈಲಿಯಮ್ ಹಸ್ಕ್: ‘ಮಲಬದ್ಧತೆ ನಿವಾರಣೆಗಾಗಿ, ಒಂದು ಲೋಟ ಬಿಸಿ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ 1 ಟೀ ಚಮಚ ಇಸಾನ್ಹೋಲ್ ಸೇರಿಸಿ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಇದನ್ನು ಕುಡಿಯಿರಿ. ಅತಿಸಾರಕ್ಕೆ, ತಾಜಾ ಮೊಸರಿಗೆ 1 ಚಮಚ ಇಸಾನ್ಹೋಲ್ ಸೇರಿಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.”

ಗಮನಿಸಿ: ಇಸಾನ್ಹೋಲ್ ಮಿಶ್ರಣವನ್ನು ತಕ್ಷಣವೇ ಸೇವಿಸಬೇಕು ಇಲ್ಲದಿದ್ದರೆ ಅದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು’

ಸೊಂಪು ಬೀಜ ಮತ್ತು ಓಮ ಕಾಳು: ಎರಡೂ ಬೀಜಗಳು ಸರಿಯಾದ ಜೀರ್ಣಕ್ರಿಯೆಗೆ ಅಗತ್ಯವಾದ ಗ್ಯಾಸ್ಟ್ರಿಕ್ ರಸವನ್ನು ಸ್ರವಿಸಲು ಸಹಾಯ ಮಾಡುತ್ತದೆ. ಊಟದ ನಂತರ 1 ಟೀ ಚಮಚ ಸೊಂಪು ಬೀಜ ಅಥವಾ ಓಮ ಕಾಳುಗಳನ್ನು ಅಗಿಯಿರಿ. ಇವೆರಡನ್ನು ನೀವು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಬಹುದು.

ಅಲೋವೆರಾ ಜ್ಯೂಸ್: ಅಲೋವೆರಾ ಜ್ಯೂಸ್ ಕರುಳಿನಲ್ಲಿ ನೀರಿನ ಅಂಶವನ್ನು ಹೆಚ್ಚಿಸುತ್ತದೆ. ಈ ನೀರಿನ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲೋವೆರಾದಲ್ಲಿರುವ ಜೆಲ್/ರಸವನ್ನು ತೆಗೆಯಿರಿ ಮತ್ತು ಅದನ್ನು ಬಿಸಿ ನೀರಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಿ’

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.