ಉಗುರುಸುತ್ತು ಸಮಸ್ಯೆಗೆ, ಬೆಳ್ಳುಳ್ಳಿ ಪರಿಹಾರ:
ಕೈಬೆರಳುಗಳಲ್ಲಿ ಮತ್ತು ಕಾಲಿನ ಬೆರಳುಗಳಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗವುದನ್ನು ದೊಡ್ಡವರು ಉಗುರುಸುತ್ತು ಎಂದು ಕರೆಯುತ್ತಾರೆ.
ಶಿಲೀಂಧ್ರಗಳ ತೊಂದರೆಗೆ ಶೀಘ್ರವಾದ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಉಗುರುಸುತ್ತು ಸೋಂಕಿಗೆ ಬೆಳ್ಳುಳ್ಳಿ ಸುಲಭವಾದ ಪರಿಹಾರ.
ಉಗುರು ಸುತ್ತಿಗೆ ಬೆಳ್ಳುಳ್ಳಿ ಬಳಸಿ:
>>ಉಗುರು ಸುತ್ತು ಉಂಟಾಗಿರುವ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ಆನಂತರದಲ್ಲಿ ಜಜ್ಜಿದ ಬೆಳ್ಳುಳ್ಳಿ ಹಚ್ಚಿರಿ.
>>ಜಜ್ಜಿದ ಬೆಳ್ಳುಳ್ಳಿ ಹಚ್ಚಲು ಸಾಧ್ಯವಾಗದಿದ್ದರೆ, ಬೆಳ್ಳುಳ್ಳಿ ಎಣ್ಣೆಯನ್ನು ಮನೆಯಲ್ಲಿ ತಯಾರಿಸಿ, ಅಂಗಡಿಯಿಂದ ತಂದು ಉಗುರು ಸುತ್ತು ಇರುವ ಜಾಗಕ್ಕೆ ಹಚ್ಚಿ, ರಾತ್ರಿ ಹಾಗೆ ಬಿಟ್ಟು, ಮುಂಜಾನೆ ಎದ್ದು ಕಾಲು ತೊಳೆದುಕೊಳ್ಳಬಹುದು.
ಈ ರೀತಿ ಮಾಡಿದ್ರೆ 2-3 ವಾರಗಳಲ್ಲಿ ಪರಿಹಾರ ದೊರೆಯುತ್ತದೆ. ಆದರೂ ವಾಸಿಯಾಗದಿದ್ರೆ ವೈದ್ಯರನ್ನು ಸಂಪರ್ಕಿಸಿ.