ಹರಪನಹಳ್ಳಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಿನ್ನೆ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ಸರಳವಾಗಿ ನಡೆದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಿಲ್ಲನೇರಿದ ಗೋರಪ್ಪ ಅಜ್ಜ “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್” ಎಂಬ ವರ್ಷದ ಕಾರ್ಣಿಕ ನುಡಿಯನ್ನು ನುಡಿದಿದ್ದಾನೆ.
ಗೋರಪ್ಪ ಅಜ್ಜ ನುಡಿದ ವರ್ಷದ ಕಾರ್ಣಿಕದಂತೆ, ಈ ಬಾರಿ ಒಳ್ಳೆಯದಾಗಲಿದ್ದು, ಭಾಗ್ಯದ ನದಿ ತುಂಬುತ್ತದೆ ಎಂಬ ಮುನ್ಸೂಚನೆ ನೀಡಿರುವುದರಿಂದ ಒಳ್ಳೆಯ ಮಳೆಯಾಗುತ್ತದೆ ಎಂಬ ಸೂಚನೆ ಸಿಕ್ಕಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಹರಪನಹಳ್ಳಿಯಲ್ಲಿ ಭರತ ಹುಣ್ಣಿಮೆಯ ದಿನದಂದೇ ಮೈಲಾರ ಲಿಂಗೇಶ್ವರ ಜಾತ್ರಾ ನಡೆದಿದ್ದು ಗೋರಪ್ಪ ಅಜ್ಜನಿಂದ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಬಂದಿದ್ದರು. ಭರತ ಹುಣ್ಣಿಮೆಯ ಮೂರನೇ ದಿನದಂದು ಹೂವಿನಹಡಗಲಿ ತಾಲೂಕಿನಲ್ಲಿ ದೊಡ್ಡ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನೆರೆವೇರಲಿದ್ದು ಗೊರವಜ್ಜ ನುಡಿಯುವ ಈ ಕಾರ್ಣಿಕ ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ.
ಇದನ್ನು ಓದಿ: ದೇವರಗುಡ್ಡದ ವರ್ಷದ ಕಾರ್ಣಿಕ: ವ್ಯಾದಿ ಬೂದಿ ಆದಿತಲೆ,ಸೃಷ್ಟಿ ಸಿರಿ ಆಯಿತಲೆ ಪರಾಕ್..!