Rashi bhavishya | ಬುಧವಾರದ ರಾಶಿ ಭವಿಷ್ಯ, 26 ಫೆಬ್ರವರಿ 2025

Rashi bhavishya : ಜಾತಕ ಇಂದು ಫೆಬ್ರವರಿ 26 ಬುಧವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು…

Today rashi bhavishya

Rashi bhavishya : ಜಾತಕ ಇಂದು ಫೆಬ್ರವರಿ 26 ಬುಧವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಸೂರ್ಯೋದಯ – 6:40 AM
  • ಸೂರ್ಯಾಸ್ತ – 6:18 PM
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಶಿಶಿರ ಋತು,
  • ಮಾಘ ಮಾಸ,
  • ತಿಥಿ – ತ್ರಯೋದಶಿ
  • ನಕ್ಷತ್ರ – ಶ್ರವಣ
  • ಯೋಗ – ಪರಿಘ
  • ಕರಣ – ವಣಿಜ
  • ರಾಹು ಕಾಲ – 12:00 ದಿಂದ 01:30 ವರೆಗೆ
  • ಯಮಗಂಡ – 07:30 ದಿಂದ 09:00 ವರೆಗೆ
  • ಗುಳಿಕ ಕಾಲ – 10:30 ದಿಂದ 12:00 ವರೆಗೆ
  • ಬ್ರಹ್ಮ ಮುಹೂರ್ತ – 5:04 ಬೆ.ದಿಂದ 5:52 ಬೆ.ವರೆಗೆ
  • ಅಮೃತ ಕಾಲ – 7:27 ಬೆ.ದಿಂದ 8:59 ಬೆ.ವರೆಗೆ
  • ಅಭಿಜಿತ್ ಮುಹುರ್ತ – ಇಲ್ಲ

ಮೇಷ ರಾಶಿ ಭವಿಷ್ಯ (Mesha rashi bhavishya)

ನಿಮ್ಮ ಸಂಗಾತಿ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಿದ್ದಾರೆ, ನಿಮ್ಮ ಪ್ರೇಮಿಯೂ ನಾಲ್ಕು ತಿಂಗಳು ಮುನಿಸಿಕೊಂಡಿದ್ದಾರೆ, ನೀವು ಇಚ್ಛೆ ಪಟ್ಟಿದ್ದೆಲ್ಲಾ ನಿಮ್ಮ ಕೈವಶವಾಗುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಹಿತಮಿತವಾಗಿ ಬೆರೆತು ವ್ಯವಹರಿಸಬೇಕು, ಕುಟುಂಬದಲ್ಲಿ ಮಂಗಲ ಕಾರ್ಯಗಳು ನಿರ್ವಿಘ್ನವಾಗಿ ಜರುಗುತ್ತವೆ, ಆಸ್ತಿಯ ಎಲ್ಲಾ ನ್ಯಾಯಗಳು ಬಗೆಹರಿದು ನಿರಂಬಳವಾಗುವವು, ಹೊಸ ಹೊಲ ಮನೆ ಇಲ್ಲವೇ ಆಸ್ತಿ ಖರೀದಿ ಯೋಗ ವಿದ್ದು ಅವು ಯಾವುದೇ ತೊಂದರೆಗಳಿಲ್ಲದೆ ನಿಮ್ಮ ಕೈ ಸೇರುತ್ತವೆ, ಆಕಸ್ಮಿಕವಾಗಿ ಪ್ರತಿಷ್ಠಿತ ವ್ಯಕ್ತಿ ಭೇಟಿಯಾಗುವವರು.

ಆಹಾರ ಧಾನ್ಯ ಮಾರಾಟಗಾರರಿಗೆ ಶುಭ ಯೋಗ, ನೌಕರಿಯಲ್ಲಿ ಬಡ್ತಿ ಯೋಗ ಸಾಧ್ಯತೆ, ಬಿಟ್ಟು ಹೋಗಿದ್ದ ಗಂಡ ಹೆಂಡತಿ ಮತ್ತೆ ಸೇರಿ ಸಂತೋಷದ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ, ಉದ್ಯೋಗದಲ್ಲಿ ಎರಡು ಕೈಯಿಂದ ಬಾಚಿಕೊಳ್ಳುವಷ್ಟು ಧನಪ್ರಾಪ್ತಿ, ಈ ತಿಂಗಳ ವ್ಯಾಪಾರ ವಿಸ್ತರಣೆ ಮಾಡುವವರಿಗೆ ಸುವರ್ಣ ಕಾಲ, ದಾಸ್ತಾನು ಮಾಡಿರುವ ದವಸ ಧಾನ್ಯಕ್ಕೆ ಭಾರಿ ಬೇಡಿಕೆ.

Vijayaprabha Mobile App free

ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403

ವೃಷಭ ರಾಶಿ ಭವಿಷ್ಯ (Vrushabha rashi bhavishya)

ನೀವು ಕೈ ಹಾಕಿದ ಎಷ್ಟೇ ಕಠಿಣ ಕೆಲಸಗಳು ಸರಳವಾಗಿ ಯಶಸ್ಸು, ಜನಪ್ರತಿನಿಧಿಗಳಿಗೆ ಗೌರವಾದರಗಳು ಸರಳವಾಗಿ ಲಭಿಸುತ್ತವೆ, ಮುನಿಸಿಕೊಂಡಿರುವ ಬಂಧು ಮಿತ್ರರು ತಾವೇ ಆಗಮಿಸಿ ನಿಮ್ಮ ವಾದವನ್ನು ಒಪ್ಪಿಕೊಳ್ಳುವರು, ಆಕಸ್ಮಿಕವಾಗಿ ಧನಪ್ರಾಪ್ತಿ ಯೋಗ ಇರುವುದರಿಂದ ಹೊಸ ಆಸ್ತಿ ಖರೀದಿ ಆಗುತ್ತದೆ, ನಿಮ್ಮ ಮಕ್ಕಳಿಂದ ಪಾಪದ ಕೆಲಸಗಳತ್ತ ಮನಸ್ಸು ಹರಿದುಬಿಡುತ್ತದೆ, ದುಷ್ಟರ ಸಹವಾಸದಿಂದ ತೊಂದರೆ, ನಿಮ್ಮ ಬೆನ್ನ ಹಿಂದೆ ಸಂಚು ಮಾಡುವರ ಬಗ್ಗೆ ಜಾಗೃತಿ ವಹಿಸಿ.

ಕೋರ್ಟ್ ಹಾಗೂ ಸರ್ಕಾರಿ ಕಚೇರಿ ಕೆಲಸಗಳು ನಿಮ್ಮ ಇಷ್ಟದಂತೆ ನೆರವೇರುತ್ತವೆ, ನಿಮ್ಮ ಸಂಗಾತಿಯು ಎಲ್ಲಿಲ್ಲದ ಧೈರ್ಯ ತುಂಬಿ ನಿಮ್ಮನ್ನು ಮುನ್ನಡೆಸುತ್ತಾರೆ, ಹಳೆಯ ರೋಗಾದಿಗಳೆಲ್ಲ ವಾಸಿಯಾಗಿ ಆರೋಗ್ಯದಲ್ಲಿ ನವಚೇತನ ಬರುತ್ತದೆ, ನವದಂಪತಿಗಳಿಗೆ ಸುಖ ಸಂತೋಷಗಳಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ, ಪ್ರೇಮಿಗಳ ಎಲ್ಲಾ ಆಸೆಗಳು ಈಡೇರುತ್ತವೆ, ಕುಟುಂಬದಿಂದ ಸ್ವತಂತ್ರವಾಗಿರಲು ಬಯಸುತ್ತೀರಿ, ಅಧಿಕಾರಿ ವರ್ಗದವರು ಕೆಳಗಿನವರ ಮೇಲೆ ಸಿಟ್ಟು ಸೆಡುವು ಯಾವ ಕಾರಣಕ್ಕೂ ಮಾಡದಿದ್ದರೆ ಉತ್ತಮ, ಕೈಯಲ್ಲಿ ನಾಲ್ಕು ಕಾಸು ಗಳಿಸಿ ಊರಿನಲ್ಲಿ ವಣಜಂಬ ಪ್ರದರ್ಶನ.

ಮಿಥುನ ರಾಶಿ ಭವಿಷ್ಯ (Mithuna rashi bhavishya)

ಕೃಷಿಕರು ದವಸ ಧಾನ್ಯ ಸಂಗ್ರಹ ಮಾಡುವಿರಿ, ಹೊಸದಾಗಿ ಹೊಲಗದ್ದೆ ಖರೀದಿ ಅಡಚಣೆ, ಕುಟುಂಬದಿಂದ ಹೊರಬರಲು ಬಯಸುತ್ತೀರಿ, ಮನೆಯಿಂದ ಹೊರಗೆ ಅಪರಿಚಿತರಿಂದ ತೊಂದರೆ ಕಾಡಲಿದೆ, ಈ ಹಿಂದೆ ನಷ್ಟ ಅನುಭವಿಸಿರುವ ವ್ಯಾಜ್ಯಗಳು ಇನ್ನು ಮುಂದೆ ಯಶಸ್ಸು ಕಾಣುವಿರಿ, ಸಹೋದ್ಯೋಗಿಗಳಿಂದ ನಿಮ್ಮ ಬಗ್ಗೆ ಇಲ್ಲಸಲ್ಲದ ಅವಹೇಳನದ ಮಾತುಗಳನ್ನಾಡುತ್ತಾ ತಿರುಗಾಡಿ ನಿಮ್ಮ ನೆಮ್ಮದಿಯ ಭಂಗ ಬಯಸುತ್ತಾರೆ , ವ್ಯಾಪಾರ ವಿಸ್ತರಿಸುವವರಿಗೆ ಹೊಸ ಉದ್ಯಮ ಪ್ರಾರಂಭಿಸುವವರಿಗೆ ಉತ್ತಮ ಕಾಲವಲ್ಲ, ಈಗಿನ ಸದ್ಯಕ್ಕೆ ವ್ಯವಹಾರ ಲಾಭದಾಯಕವಿದೆ ಮುನ್ನಡೆಸಿ, ಸಾಲದ ವ್ಯವಹಾರ ಅತಿರೇಖ, ಉದ್ರಿ ವ್ಯವಹಾರಗಳಿಂದ ಜಗಳ, ಕೆಲಸಗಾರರು ನಿಮ್ಮ ಬಗ್ಗೆ ಅಪನಂಬಿಕೆ, ಕೆಲಸದಲ್ಲಿ ಅಧಿಕಾರಿ ಎಷ್ಟೇ ಪೀಡಿಸಿದರು ಯಾವುದೇ ವ್ಯತ್ಯಾಸ ಆಗಲಾರದು.

ನೀವು ಮದುವೆ ನಂತರ ಮುಟ್ಟಿದ್ದೆಲ್ಲ ಚಿನ್ನ ವಾಗುವ ಕಾಲ ಬರುತ್ತದೆ, ಇಂದಿನಿಂದ ಕೆಲಸಗಳು ಪುನಹ ಚೇತನ ಕಂಡು ಆನಂದವೆನಿಸುತ್ತದೆ, ಹಳೆಯ ಸಂಗಾತಿ ಭೇಟಿಯಿಂದ ಮನಸ್ಸು ಹಗುರವಾಗುತ್ತದೆ, ಜನಪ್ರತಿನಿಧಿಗಳಿಗೆ ಸಮಾಜದಲ್ಲಿ ಕೀರ್ತಿ ಗೌರವ ಆದರದ ಸ್ವಾಗತಗಳು ಲಭಿಸುತ್ತವೆ, ಹೊಸ ಆಸ್ತಿ ಖರೀದಿ ವೇಗವು ಈ ವೇಳೆಯಲ್ಲಿ ಸಾಧ್ಯತೆ, ಕುಟುಂಬದ ಸದಸ್ಯರೆಲ್ಲರೂ ನಿಮ್ಮ ಅಭಿಪ್ರಾಯಕ್ಕೆ ಎದುರು ಮಾತನಾಡದೆ ಮನ್ನಣೆ ನೀಡುವರು, ಮಂಗಳಕಾರ್ಯ ಜರುಗುವ ಸೂಚನೆ ಕಾಣುತ್ತಿದೆ, ನಿಮ್ಮ ಬೆನ್ನ ಹಿಂದೆ ಒಳಸಂಚು ಮಾಡುವವರನ್ನು ಜಾಗೃತಿ ವಹಿಸಿ, ಕೋರ್ಟ್ ಹಾಗೂ ಕಚೇರಿ ಕೆಲಸಗಳ ಯಶಸ್ವಿನಿಂದ ತೃಪ್ತಿಕರ, ಹಳೆಯ ಖಾಯಿಲೆಗಳು ಮಾಯವಾಗಿ ಆರೋಗ್ಯ ಚೇತರಿಕೆ, ತಿಳಿದು ತಿಳಿಯದೆ ಮಾಡಿರುವ ತಪ್ಪಿಗೆ ಅಧಿಕಾರಿಯು ನಿಮ್ಮ ಪಾರು ಮಾಡುತ್ತಾನೆ, ದುಷ್ಟ ಜನರ ಸಂಗವನ್ನು ಮಾಡದೆ ನಿವಾಯಿತು ನಿಮ್ಮ ಕಾಯಕವಾಯಿತು ಇರುವುದು ಉತ್ತಮ, ನೀವು ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದು ಒಳ್ಳೆಯದು

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

ಅದಿರು ಉದ್ಯಮ ಗಾರರಿಗೆ ಶುಭದಾಯಕ, ಮೇಕಪ್ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭ, ರಾಜಕಾರಣಿಗಳಿಗೆ ಶುಭ ಯೋಗ, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನರಿಗೆ ನೌಕ್ರಿ ಸಿಗಲಿದೆ,ರಿಯಲ್ ಎಸ್ಟೇಟ್ ನವರಿಗೆ ಆದಾಯ, ಮಧ್ಯವರ್ತಿಗಳಿಗೆ ಧನ ಲಾಭ, ನಂಬಿ ನಂಬಿದವರ ಕಡೆಯಿಂದ ಧನ ಆಗಮನ ಪಾಲುದಾರಿಕೆಯಲ್ಲಿ ಲಾಭ, ಆಸ್ತಿ ವಿಚಾರ ಕೋರ್ಟ್ ಮೆಟ್ಟಿಯಲ್ಲಿರುವ ಸಂದರ್ಭ, ವಾಹನ ಬಿಡಿ ಭಾಗ ಮಾರಾಟಗಾರರಿಗೆ ಅಧಿಕ ಲಾಭ, ಅತ್ತೆ ಸೊಸೆ ಕಿರಿಕಿರಿಯಲ್ಲಿ ಮನಸ್ಸು ಬೇಸರ,ವಿವಾಹ ಮಾತುಕತೆಗಾಗಿ ಬರುವ ಸಾಧ್ಯತೆ, ಪತ್ರಿಕಾ ವರದಿಗಾರರಿಗೆ ಖಾಯಂ ಉದ್ಯೋಗ ಪ್ರಾಪ್ತಿ, ಕಿರುತೆರೆ ಮತ್ತು ಚಲನಚಿತ್ರದ ನಿರ್ಮಾಪಕರಿಗೆ ಈ ಬಾರಿ ಬಂಪರ್ ಕೊಡುಗೆ, ಪಕ್ಷದ ಕಾರ್ಯಕರ್ತರಿಗೆ ಸಂಘ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ, ಕೆಲವೊಮ್ಮೆ ಅವಿರೋಧ ನೇಮಕ ಸಾಧ್ಯತೆ, ಶತ್ರುಪೀಡೆ ನಿವಾರಣೆ ಮಾಡಿಕೊಳ್ಳಲು ಉತ್ತಮ, ಉಪನ್ಯಾಸಕರಿಗೆ ಉದ್ಯೋಗದಲ್ಲಿ ಅಭದ್ರತೆ, ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಸಿಹಿ ಸಂದೇಶ, ಅಧಿಕಾರ ವರ್ಗದವರಿಗೆ ಧನ ಲಾಭವಿದೆ.

ಸಿಂಹ ರಾಶಿ ಭವಿಷ್ಯ (Simha rashi bhavishya)

ಟಿವಿ ನಿರೂಪಣೆ ಮತ್ತು ಪತ್ರಿಕಾ ವರದಿಗಾರರಿಗೆ ಧನ ಲಾಭ ಜೊತೆಗೆ ಮುನ್ನಡೆ ಸಾಧಿಸಲಿದ್ದಾರೆ, ಬಹು ಬೇಡಿಕೆಯ ವರದಿಗಾರರಾಗಿ ಸಾಧನೆ, ವಿವಾಹ ಆಕಾಂಕ್ಷೆಗಳಿಗೆ ಶುಭದಾಯಕ, ಮಕ್ಕಳು ನಿಮ್ಮ ಆಸೆ ಈಡೇರಿಸುವ ಸಮಯ ಬಂದಿದೆ, ಉದ್ಯೋಗದಲ್ಲಿ ಸ್ವಯಂಕೃತ ಅಪರಾಧದಿಂದ ತೊಂದರೆ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೀರಿ, ಸರಕಾರಿ ಮಧ್ಯವರ್ತಿಗಳಿಗೆ ಧನ ಲಾಭ, ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆಯಲ್ಲಿ ಲಾಭ ಮಾರಾಟಗಾರರಿಗೆ ಧನ ಲಾಭ, ಅಧಿರು ಉದ್ಯಮಗಾರರಿಗೆ ಧನ ಲಾಭ,ರಾಜಕಾರಣಿಗಳಿಗೆ ಶುಭದಾಯಕ, ಕೌಟುಂಬಿಕ ಕಲಹ ಕೋರ್ಟು ಮೆಟ್ಟಿಲು ಹೇರುವ ಸಂದರ್ಭ ಎದುರಾಗಿದೆ.

ಉದ್ಯೋಗ ಕ್ಷೇತ್ರದಲ್ಲಿ ಶತ್ರು ಕಾಟ ಅಧಿಕ, ಬಾಡಿ ಮಸಾಜ್, ಜಿಮ್, ಯೋಗಾಸನ, ನಾಟಿ ವೈದ್ಯರಿಗೆ ಬಹುಬೇಡಿಕೆ ಭಾಗ್ಯ, ಪ್ರೇಮಿಗಳ ವಿವಾದಗಳು ರಾಜಿ ಮುಖಾಂತರ ಬಗೆಹರಿಸಿಕೊಳ್ಳಿ, ಕೌಶಲ್ಯ ತರಬೇತಿ ಉತ್ತೀರ್ಣ ಆದವರಿಗೆ ಉದ್ಯೋಗ ಪ್ರಾಪ್ತಿ, ಅತ್ತೆ ಸೊಸೆ ಬಿನ್ನಾಭಿಪ್ರಾಯ ಮುಂದುವರೆಯಲಿದೆ ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಆಸ್ತಿ ವಿಚಾರದಲ್ಲಿ ಮಧ್ಯಸ್ಥಿಕೆ ಜನ ದಾರಿ ತಪ್ಪಿಸಲಿದ್ದಾರೆ, ಒಂದು ಸಂಸ್ಥೆ ಮ್ಯಾನೇಜರ್ ಆಗಿ ಹೊಣೆಗಾರಿಕೆ ನಿಮಗೆ ಸಿಗಲಿದೆ, ರಾಜಕಾರಣಿಗಳಿಗೆ ಶತ್ರು ಪೀಡೆ ಕಾಡಲಿದೆ, ನಂಬಿದವರ ಕಡೆಯಿಂದ ಉಡುಗೊರೆ ಪಡೆಯುವಿರಿ, ಸಂತಾನ ವಿಚಾರ ಕೇಳಿ ಸಂತಸ ತರಲಿದೆ, ಪತ್ರಿಕಾ ವರದಿಗಾರರು ಹೆಚ್ಚಿನ ವೇತನ ಪಡೆಯಲಿದ್ದೀರಿ, ಉದ್ಯೋಗಿಗಳಿಗೆ ಭಡ್ತಿ.

ಕನ್ಯಾ ರಾಶಿ ಭವಿಷ್ಯ (Kanya rashi bhavishya)

ಆರ್ಥಿಕ ತೊಂದರೆ ಅನುಭವಿಸುತ್ತಿದ್ದೀರಿ, ನೌಕರದಾರರಿಗೆ ಬಡ್ತಿ ಯೋಗ ಇರುವುದಿಲ್ಲ, ಹಿರಿ ಅಧಿಕಾರಿಗಳೊಂದಿಗೆ ಸಹಕರಿಸಿಕೊಂಡು ಹೋಗಿರಿ, ವ್ಯಾಪಾರಸ್ಥರು ಹೂಡಿದ ಹಣದ ಬಗ್ಗೆ ಚಿಂತನೆ, ಹಿತ ಶತ್ರುಗಳಿಂದ ಮಾನಸಿಕ ಕಿರಿಕಿರಿ, ಹಳೆಯ ಯೋಜನೆಗಳು ಮರು ಚಾಲನೆ, ಮೂರನೇ ವ್ಯಕ್ತಿಯಿಂದ ಗಂಡ ಹೆಂಡತಿಯ ನಡುವೆ ವಿರಸ ಉಂಟಾಗುವುದು,ಇದರಿಂದ ಕುಟುಂಬದಲ್ಲಿ ಕಲಹ, ಮಕ್ಕಳು ಓದುವುದರ ಬಗ್ಗೆ ಅಲಸ್ಯ , ಕೂಡಿಟ್ಟ ಹಣದಿಂದ ಆಸ್ತಿ ಖರೀದಿ, ಕೆಲಸದ ಜಾಗದಲ್ಲಿ ಆಂತರಿಕ ಕಲಹಗಳು ಉಂಟಾಗುವವು, ವ್ಯಾಪಾರಸ್ಥರು ಹೂಡಿದ ಹಣ ಮರಳಿ ಗಳಿಸುವಿರಿ, ಹೆಂಡತಿಯ ಮಾತು ನಿರ್ಲಕ್ಷಿಸದಿರಿ, ಸ್ತ್ರೀ-ಪುರುಷ ವಿಷಯದಲ್ಲಿ ಜಾಗ್ರತೆವಹಿಸಿ ತೊಂದರೆ ಇದೆ, ಮಂಗಳಕಾರ್ಯ ಮೊಳಗುವವು, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆದಾಯದ ನಡು ನಡುವೆ ಅಲ್ಪಸ್ವಲ್ಪ ತೊಂದರೆಗಳು ಉಂಟಾಗಿ ಭಯ ಉಂಟಾಗುವುದು, ಕೋರ್ಟ್ ಕಚೇರಿ ಕೆಲಸಗಳು ವಿಳಂಬವಾದರೂ ಸರಿ ನಿರ್ಣಯಗಳು ನಿಮ್ಮ ಕೈ ಸೇರಲಿವೆ

ತುಲಾ ರಾಶಿ ಭವಿಷ್ಯ (Tula rashi bhavishya)

ಅನಾರೋಗ್ಯ ಬಾಧೆ,ಮಾನಸಿಕ ಕಿರಿಕಿರಿ ಪ್ರಾರಂಭ, ವಿರೋಧಿಗಳಿಂದ ಪ್ರೇಮಿಗಳಿಗೆ ಧೈರ್ಯ ಕುಗ್ಗಿಸಲು ಪ್ರಯತ್ನಿಸುವರು, ಬಂಧು ಬಾಂಧವರಿಂದ ಹಣಕಾಸಿನ ವಿಷಯಕ್ಕಾಗಿ ಮಾನಸಿಕ ಕಿರಿಕಿರಿ, ನಂಬಿದ ವ್ಯಕ್ತಿಯಿಂದ ಧನ ಲಾಭ, ಸಂಗಾತಿಯ ಸಹಕಾರ ಹೊಸ ಯೋಜನೆಗೆ ಸಹಕಾರ, ನಿಮ್ಮ ಪರಿಶ್ರಮಕ್ಕೆ ಮೋಸವಿಲ್ಲದೆ ಹಣ ಸಂಪಾದನೆ, ಕೆಟ್ಟ ಜನ ದೃಷ್ಟಿಯಿಂದ ಆಘಾತ ಅಪಘಾತಗಳ ಸಂಭವ, ಜನಪ್ರತಿನಿಧಿಗಳು ಧರ್ಮ ಪ್ರವೃತ್ತರಾಗಿ ಕಾರ್ಯನಿರ್ವಹಿಸುವಿರಿ, ಗೆಳೆಯ ಅಥವಾ ಗೆಳತಿಯಿಂದ ಉದ್ಯೋಗ ಸಿಗಲಿದೆ, ಸದ್ಯಕ್ಕೆ ದೂರದ ಪ್ರಯಾಣ ಕೈಬಿಡುವುದು ಉತ್ತಮ, ರಿಯಲ್ ಎಸ್ಟೇಟ್ ಮತ್ತು ಡೆವಲಪರ್ ಆರ್ಥಿಕತೆಯಲ್ಲಿ ಅಭಿವೃದ್ಧಿ ತೋರುವುದು, ತಾವು ಇಂದು ಹೊಸ ಆಸ್ತಿ ಖರೀದಿಗೆ ಮುನ್ನುಡಿ ಬರೆಯುವಿರಿ, ಆಕಸ್ಮಿಕ ಧನ ಲಾಭ ಯೋಗವಿದೆ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ವಿಷಯದಲ್ಲಿ ಕೈಗೊಂಡ ನಿರ್ಣಯಗಳು ಉತ್ತಮ ರೀತಿಯ ಫಲ ನೀಡುವವವು, ಸದ್ಯಕ್ಕೆ ಮದುವೆ ಯೋಗ ಇಲ್ಲ,

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ದಿನನಿತ್ಯ ಬಳಕೆ ಸಾಮಗ್ರಿಗಳ ಅಂದರೆ ಕಿರಾಣಿ ವ್ಯಾಪಾರ ಒಳ್ಳೆಯದು,ಉದ್ಯೋಗ ಪದೇ ಪದೇ ತೀರ್ಮಾನಗಳನ್ನು ಬದಲಾಯಿಸುವ ಬಗ್ಗೆ ತೊಂದರೆ,ಉದ್ಯೋಗದಲ್ಲಿ ಪ್ರಗತಿ,ಸ್ಥಾನಮಾನವ ಲಭ್ಯ,ಪತ್ನಿಯೊಂದಿಗೆ ಅನಾವಶ್ಯಕ ವಿರಸ,ಆಭರಣ ವ್ಯಾಪಾರಿಗಳಿಗೆ ಪ್ರಗತಿ, ಕಂಪ್ಯೂಟರ್ ಮತ್ತು ಬಿಡಿ ಭಾಗ ವ್ಯಾಪಾರಿಗಳಿಗೆ ಮಂದಗತಿ,ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಪ್ರೇಮ ಪ್ರಕರಣಗಳು ಬಹಿರಂಗ, ಭೂಮಿ ಸಂಬಂಧಿ ವ್ಯಾಜ್ಯಗಳಲ್ಲಿ ಜಯ, ಉದ್ಯೋಗಸ್ಥರಿಗೆ ಇಚ್ಛಿಸಿದ ಸ್ಥಾನಕ್ಕೆ ವರ್ಗಾವಣೆ,ಶತ್ರು ದಮನ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ ಸಾಮರಸ್ಯ ಇರುತ್ತದೆ,ಹಿತ ಶತ್ರುಗಳ ಕಿರಿಕಿರಿ ಅಧಿಕ, ಮಕ್ಕಳ ಚಿಂತೆ,ವಿವಾಹದಲ್ಲಿ ಅಡೆತಡೆ, ಸ್ತ್ರೀ ಮೂಲದಿಂದ ಧನ ಆಗಮನ, ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ.

ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಸಾಲ ಬಾಧೇ ಅಧಿಕ, ಕಾನೂನು ವಿಷಯದಲ್ಲಿ ಕಿರಿಕಿರಿ,ವ್ಯಾಪಾರದಲ್ಲಿ ನಷ್ಟ, ಸ್ತ್ರೀ ಪಕ್ಷದಿಂದ ಕಿರಿಕಿರಿ,ಮಕ್ಕಳಿಂದ ಮಾನಹಾನಿ,ಗರ್ಭ ನಷ್ಟ,ಉದ್ಯೋಗದಲ್ಲಿ ಬೇಸರ, ರಾಜಕಾರಣಿಗಳು ಬಹು ಮುಖ್ಯವಾದ ಒಂದು ಸಿಹಿ ಸಂತೋಷವನ್ನು ಹಂಚಿಕೊಳ್ಳುವರು, ಗೃಹಣಿಯರು ಅಡುಗೆ ಕೆಲಸದ ವೇಳೆ ಎಚ್ಚರ ಅಗತ್ಯ, ಸರ್ಕಾರದ ಅಧೀನದಲ್ಲಿರುವ ವ್ಯಾಪಾರ ವ್ಯವಹಾರ ಲಾಭದಾಯಕ, ಮಹಿಳಾ ವೈದ್ಯರು ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಸಗಟು ವ್ಯಾಪಾರಸ್ಥರು ದೊಡ್ಡ ಸವಾಲುಗಳನ್ನು ಎದುರಿಸಲಿದ್ದಾರೆ, ಬಟ್ಟೆ ತಯಾರಿಕೆಯವರಿಗೆ ಶುಭದಾಯಕ, ಷೇರು ಮಾರುಕಟ್ಟೆ ವ್ಯವಹಾರದಿಂದ ದೂರ ಇರುವುದು ಒಳಿತು.

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಹಿತ ಶತ್ರುಗಳ ಕಿರಿಕಿರಿ ಅಧಿಕ, ಮಕ್ಕಳ ಚಿಂತೆ,ವಿವಾಹದಲ್ಲಿ ಅಡೆತಡೆ, ಸ್ತ್ರೀ ಮೂಲದಿಂದ ಧನ ಆಗಮನ, ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ,ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಸಾಲ ಬಾಧೇ ಅಧಿಕ, ಕಾನೂನು ವಿಷಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ, ಸ್ತ್ರೀ ಪಕ್ಷದಿಂದ ಕಿರಿಕಿರಿ,ಮಕ್ಕಳಿಂದ ಮಾನಹಾನಿ,ಗರ್ಭ ನಷ್ಟ,ಉದ್ಯೋಗದಲ್ಲಿ ಬೇಸರ, ಉದ್ಯೋಗದಲ್ಲಿ ಪ್ರಗತಿ,ಸ್ಥಾನಮಾನವ ಲಭ್ಯ,ಪತ್ನಿಯೊಂದಿಗೆ ಅನಾವಶ್ಯಕ ವಿರಸ,ಆಭರಣ ವ್ಯಾಪಾರಿಗಳಿಗೆ ಪ್ರಗತಿ, ಕಂಪ್ಯೂಟರ್ ಮತ್ತು ಬಿಡಿ ಭಾಗ ವ್ಯಾಪಾರಿಗಳಿಗೆ ಮಂದಗತಿ,ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಪ್ರೇಮ ಪ್ರಕರಣಗಳು ಬಹಿರಂಗ, ಭೂಮಿ ಸಂಬಂಧಿ ವ್ಯಾಜ್ಯಗಳಲ್ಲಿ ಜಯ, ಉದ್ಯೋಗಸ್ಥರಿಗೆ ಇಚ್ಛಿಸಿದ ಸ್ಥಾನಕ್ಕೆ ವರ್ಗಾವಣೆ,ಶತ್ರು ದಮನ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ ಸಾಮರಸ್ಯ ಇರುತ್ತದೆ,

ಮಕರ ರಾಶಿ ಭವಿಷ್ಯ (Makara rashi bhavishya)

ಧಾರ್ಮಿಕ ಕಾರ್ಯ ಮಾಡಲು ಪ್ರಯತ್ನ, ಮದುವೆ ಕಾರ್ಯ ನಿರಾಸಕ್ತಿ ತೋರುವವರು, ಮದುವೆ ವಿಚಾರ ಒಂದು ಕಾರಣಾಂತರದಿಂದ ಮದುವೆ ವಿಳಂಬ, ಸಂಗ್ರಹಿಸಿದ ಕಾಳುಗಳು ವಿಕ್ರಿಯಗೊಳಿಸಿ, ವ್ಯಾಪಾರಸ್ಥರಿಗೆ ಹೊಸ ವ್ಯಾಪಾರದಿಂದ ಕಿರಿಕಿರಿ, ಹೊಸ ಆಸ್ತಿ ಖರೀದಿ ಯೋಗದಿಂದ ಸಂತಸ, ಹಳೆಯ ಆಸ್ತಿ ವಿವಾದಗಳಿಂದ ಮನಸ್ತಾಪ, ಕೋರ್ಟ್ ಕಚೇರಿ ಕೆಲಸಗಳು ನಿಮ್ಮ ಪರವಾಗುವವು, ಗಂಡ ಹೆಂಡತಿಯ ನಡುವೆ ವಿರಸ ಉಂಟಾಗಲಿದೆ, ಹೊಸ ಯೋಜನೆಗಳಿಗೆ ಚಾಲನೆ, ಹೆಚ್ಚಿನ ಉದ್ಯೋಗ ಬೇಡಿಕೆ ಇದೆ, ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರುವವು.

ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾವು ಸಹಾಯ ಮಾಡುವಿರಿ, ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಕೊಡಲು ಸಫಲರಾಗುವಿರಿ, ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಪ್ರಾರಂಭ,ಈ ವ್ಯವಹಾರದಲ್ಲಿ ಧನ ಲಾಭ ಪಡೆಯುವಿರಿ, ಒತ್ತಡದ ಕೆಲಸದ ನಡುವೆ ಕುಟುಂಬ ಮರೆಯದಿರಿ, ಪತ್ನಿಯ ಕಷ್ಟ ಸುಖ ಅರೆಯಿರಿ, ಕೆಲವರು ಹಣಕಾಸಿನ ಸಮಸ್ಯೆ ಎದುರಿಸುವಿರಿ ಮಾತಾ ಪಿತೃ ಸಲಹೆ ಪಡೆಯುವಿರಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ತೊಂದರೆಗೊಳಗಾಗಬಹುದು, ಪ್ರೀತಿ ಪ್ರೇಮ ಪ್ರಣಯ ನಿಮ್ಮ ಅಮೂಲ್ಯ ಸಮಯ ಹಾಳು ಮಾಡಬಹುದು, ಹಳೆಯ ಸಂಗಾತಿ ಜೊತೆ ಪುನರ್ಮಿಲನ ಸಾಧ್ಯತೆ.

ಕುಂಭ ರಾಶಿ ಭವಿಷ್ಯ (Kumba rashi bhavishya)

ಎಲ್ಲ ಸಹವಾಸ ಬಿಟ್ಟು ಹೆಂಡತಿಯೊಂದಿಗೆ ಸಹನೆ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಲು ಪ್ರಯತ್ನಿಸಿ ಇಲ್ಲವಾದಲ್ಲಿ ಮನೆಯಲ್ಲಿ ಅಶಾಂತಿಯ ವಾತಾವರಣ ನಿಮ್ಮಿಂದ ಸೃಷ್ಟಿ, ಕೃಷಿಕರು ಹೊಸ ತರಹದ ಕೃಷಿ ಪದ್ಧತಿಗೆ ನಾಂದಿ ಹಾಡುವಿರಿ, ನೀವು ಭೂತಾಯಿ ರಕ್ಷಿಸಿ ಸಂಪತ್ಭರಿತಳಾಗಿಸುವಳು, ವಿಪುಲ ಉದ್ಯೋಗಾವಕಾಶಗಳು ದೊರೆಯಲಿದೆ, ಸಂಗಾತಿಯ ಹಣಕಾಸಿನ ನೆರವು ಅಭಿವೃದ್ಧಿ ಕಾರ್ಯಕ್ಕೆ ತಕ್ಕ ವೇಗ ಪಡೆಯುತ್ತದೆ, ಶತ್ರುಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವಿರಿ, ಪ್ರಯತ್ನಿಸಿದ ಕೆಲಸ ಕಾರ್ಯಗಳು ಯಶಸ್ವಿ, ವ್ಯಾಪಾರಿಗಳು ಹೊಸ ವ್ಯಾಪಾರ ವಿಸ್ತರಿಸುವರು, ಬೆಲೆಬಾಳುವ ಆಭರಣ ಖರೀದಿ ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯೊಂದಿಗೆ ತಿರ್ಗಡೇ, ಮಕ್ಕಳ ದುಡಿಮೆಯಿಂದ ಸಾಲದ ಭಾರ ಕಡಿಮೆಯಾಗುವುದು.

ಇನ್ಮುಂದೆ ಏನೇ ಇದ್ದರೂ ಅಭಿವೃದ್ಧಿ ಮಂತ್ರ ಜಪಿಸುವಿರಿ, ಖರ್ಚು ಕಡಿಮೆಯಾಗಿ ಸಂಪತ್ತು ಸಂಗ್ರಹಣ, ಐಟಿ ಉದ್ಯೋಗಸ್ಥರು ಹೊಸ ಹೊಸ ಯೋಜನೆಗಳಿಗೆ ಸಮಯ ವಿನಿಯೋಗಿಸುವಿರಿ, ಮನೆಯಲ್ಲಿ ಮಂಗಳ ಕಾರ್ಯದ ಚರ್ಚೆ ಮನಸ್ಸಿಗೆ ಸಂತೋಷ, ಅಪಾಯಕಾರಿ ಕೆಲಸಕ್ಕೆ ಕೈಹಾಕಬಾರದು, ವಾಹನ ನಡೆಸುವವರು ಯಂತ್ರದ ಕಾರ್ಯದ ಕೆಲಸಗಾರರು ಜಾಗೃತಿ ವಹಿಸಿ, ಜೂಜಾಟ ಹಾಗೂ ಮೋಜಿನ ಅಪಾಯಕಾರಿ ಚಟುವಟಿಕೆಗಳಿಂದ ದೂರ ಇರಿ, ವ್ಯಾಪಾರಿಗಳಿಗೆ ದ್ವಿಗುಣ ಲಾಭ ಸಾಧ್ಯತೆ, ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ಲಾಭ, ಸೋಮಾರಿತನ ಹಾಗೂ ಅಲಸ್ಯ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ, ನೀರಾವರಿ ರೈತರು ಆದಾಯದಲ್ಲಿ ದ್ವಿಗುಣ, ವಾಣಿಜ್ಯ ಬೆಳೆ ಬೆಳೆಯುವ ಚಿಂತನೆ.

ಮೀನ ರಾಶಿ ಭವಿಷ್ಯ (Meena rashi bhavishya)

ಸಂಸಾರದಲ್ಲಿ ಆತಂಕ ಸೃಷ್ಟಿ, ಐಟಿ ಉದ್ಯೋಗಸ್ಥರು ಹೊಸ ಹೊಸ ವಿಚಾರಗಳಿಗೆ ನಾಂದಿ ಹಾಡುವಿರಿ,ಸರಕಾರಿ ನೌಕರರ ಕೆಲಸ ದಲ್ಲಿ ಅಡ್ಡಿ ಆತಂಕ ಉಂಟಾಗುವವು,ಹೊಸ ಯೋಜನೆಗಳಿಗೆ ಹಣ ಹೂಡಿಕೆ, ರಿಯಲ್ ಎಸ್ಟೇಟ್ ಉದ್ಯಮದಾರರು ತುಂಬಾ ಖುಷಿಯಿಂದ ಇರುವವರು, ಅನಾವಶ್ಯಕವಾದ ಪ್ರಯಾಣ ಕೈಬಿಡಿ, ವೈರಿಗಳ ಉಪಟಳ ಹೆಚ್ಚಾಗುವುದು, ಹಿತ ಶತ್ರುಗಳು ಸಮಯ ಸಾಧಕರು ನಿಮ್ಮ ಅಭಿವೃದ್ಧಿಗೆ ಸಹಿಸದಾಗಿ ಕಿರಿಕಿರಿ ನೀಡಲು ಪ್ರಾರಂಭಿಸುವರು, ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ವಿಫಲ, ಉಪನ್ಯಾಸಕರ ಅಭಿವೃದ್ಧಿಯ ವೇಗ ದೊರೆತು ಸಕಲ ಕಾರ್ಯದಲ್ಲಿ ನಿಮ್ಮ ಹಿಡಿತ ಸಾಧಿಸುವಿರಿ.

ಹೆಂಡತಿಯ ಸಹಾಯ ಸಹಕಾರದಿಂದ ಹೊಸ ಆಸ್ತಿ ಗಳಿಕೆ ಯೋಗ ಇದೆ, ಗೆಳೆಯರ ಸಂಪೂರ್ಣ ಸಹಾಯ ಸಹಕಾರ ಪಡೆಯಲಿದ್ದೀರಿ ನಿಮ್ಮ ಪ್ರತಿ ಹಂತದಲ್ಲಿ ಗೆಳೆಯರು ನಿಮ್ಮ ಏಳಿಗೆಗಾಗಿ ಧಾರಾಳತನವನ್ನು ಮೆರೆಯುವರು, ಬಂಗಾರ ಹಾಗೂ ಆಭರಣ ವ್ಯಾಪಾರಸ್ಥರು ಅಭಿವೃದ್ಧಿ ಕಡೆಗೆ ಸಾಗುವವರು, ಸರಕಾರಿ ನೌಕರರು ನೀವು ಮಾಡದ ತಪ್ಪಿಗೆ ಮಾನಸಿಕ ಖಿನ್ನತೆ ಉಂಟಾಗುವುದು, ಮೇಲಾಧಿಕಾರಿಗಳಿಂದ ಕಿರಿಕಿರಿ ತಪ್ಪಿದ್ದಲ್ಲ, ಕೃಷಿಕರು ಇದ್ದ ಸ್ಥಿತಿಯಲ್ಲಿಯೇ ಮುಂದುವರೆಯಿರಿ ಹೊಸ ಯೋಜನೆಗಳು ಸದ್ಯಕ್ಕೆ ಬೇಡ, ಸಂಬಂಧಿಗಳಿಂದ ಮೋಸ ಮಾಡುವ ಸಾಧ್ಯತೆ, ಉದ್ಯೋಗ ಕ್ಷೇತ್ರದಲ್ಲಿ ನಾಟಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ.

ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು 

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.