ಬೆಂಗಳೂರು : ಇಂದು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ವೇಳೆ ಟ್ವೀಟ್ ಮಾಡಿರುವ ನಟ ಕಿಚ್ಚ ಸುದೀಪ್, ‘ಇಂದಿನ ಪಂದ್ಯವು ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬಹಳ ಕಠಿಣವಾಗಲಿದೆ. ಯಾಕೆಂದರೆ ಒಂದು ಕಡೆ ನಮ್ಮೂರಿನ ತಂಡ ಆರ್ಸಿಬಿ. ಎದುರಾಳಿಯಾಗಿ ಪಂಜಾಬ್ (ಹೆಚ್ಚು ಕರ್ನಾಟಕದ ಆಟಗಾರರು) ಆಡುತ್ತಿದ್ದಾರೆ. ಆದ್ದರಿಂದ ಹಿಂದೆ ಕುಳಿತುಕೊಂಡು ನಾವು ಆಟವನ್ನು ನೋಡಿ ಎಂಜಾಯ್ ಮಾಡಬೇಕಾದ ಸಮಯ ಅಷ್ಟೇ’ ಎಂದು ನಟ ಕಿಚ್ಚ ಸುದೀಪ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Today’s match is a tough call for cricket lovers of karnataka..
KX1P(More of Karnataka boyz) vs RCB.
Well,,, time to just sit back and njoy the game.
Would luv to see a ton from @imVkohli@RCBTweets ,, and @mayankcricket complete what he left unfinished.
Cheers and bst wshs. 🥂— Kichcha Sudeepa (@KicchaSudeep) September 24, 2020