ಆಸ್ಕರ್‌ಗೆ ಆಹ್ವಾನ ಪಡೆದ ನಟ ಸೂರ್ಯ, ಕಾಜೋಲ್‌; ದಕ್ಷಿಣದಿಂದ ಆಹ್ವಾನ ಪಡೆದ ಮೊದಲ ವ್ಯಕ್ತಿ ಸೂರ್ಯ!

ತಮಿಳಿನ ಖ್ಯಾತ ನಟ ಸೂರ್ಯ ಅವರಿಗೆ ಪ್ರತಿಷ್ಠಿತ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನ (ಆಸ್ಕರ್‌) ಸದಸ್ಯರಾಗಲು ಆಹ್ವಾನಸಿದ್ದು, ಬಾಲಿವುಡ್‌ ನಟಿ ಕಾಜೋಲ್‌ ಅವರಿಗೂ ಅಕಾಡೆಮಿ ಆಹ್ವಾನಿಸಿದೆ. ಸೂರ್ಯ ಈ ಅಕಾಡೆಮಿಗೆ…

ತಮಿಳಿನ ಖ್ಯಾತ ನಟ ಸೂರ್ಯ ಅವರಿಗೆ ಪ್ರತಿಷ್ಠಿತ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನ (ಆಸ್ಕರ್‌) ಸದಸ್ಯರಾಗಲು ಆಹ್ವಾನಸಿದ್ದು, ಬಾಲಿವುಡ್‌ ನಟಿ ಕಾಜೋಲ್‌ ಅವರಿಗೂ ಅಕಾಡೆಮಿ ಆಹ್ವಾನಿಸಿದೆ.

ಸೂರ್ಯ ಈ ಅಕಾಡೆಮಿಗೆ ಆಹ್ವಾನ ಪಡೆದಿರುವ ದಕ್ಷಿಣ ಭಾರತದ ಮೊದಲ ನಟ ಎನ್ನಲಾಗಿದೆ. 2022ನೇ ಸಾಲಿಗೆ ಈ ಅಕಾಡೆಮಿ ಸೇರಲು 397 ಪ್ರತಿಷ್ಠಿತ ಕಲಾವಿದರಿಗೆ ಆಹ್ವಾನ ನೀಡಲಾಗಿದ್ದು, ಇದರಲ್ಲಿ ಸೂರ್ಯ ಕೂಡ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಅವರ ಈ ಸಿನಿಮಾಕ್ಕಾಗಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನಿಂದ ಆಹ್ವಾನಿಸಲಾಯಿತು. ಅಕಾಡೆಮಿಯಿಂದ ಆಹ್ವಾನ ಸ್ವೀಕರಿಸಿದ ದಕ್ಷಿಣದ ಮೊದಲ ನಟ ಎಂದು ಸೂರ್ಯ ಗೌರವ ಪಡೆದಿದ್ದಾರೆ.

Vijayaprabha Mobile App free

ದೀನದಲಿತರ ನ್ಯಾಯಕ್ಕಾಗಿ ಹೋರಾಡಿದ ವಕೀಲ ಚಂದ್ರು ಅವರ ಜೀವನಾಧಾರಿತ ಚಿತ್ರ ಜೈ ಭೀಮ್. ಇದರಲ್ಲಿ ನಾಯಕ ಸೂರ್ಯ ಲಾಯರ್ ಚಂದ್ರು ಪಾತ್ರ ನಿರ್ವಹಿಸಿದ್ದರು. ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾದ ಜೈ ಭೀಮ್ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಸೂರ್ಯ ಈ ಚಿತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೆ ಪತ್ನಿ ಜ್ಯೋತಿಕಾ ಅವರೊಂದಿಗೆ ಸಹ ನಿರ್ಮಾಣ ಕೂಡ ಮಾಡಿದ್ದರು. ಇನ್ನು, ಈ ಚಿತ್ರ ಬಿಡುಗಡೆಗೂ ಮುನ್ನವೇ.. ಆ ಬಳಿಕ ಕೆಲ ಕಡೆಯಿಂದ ಬೆದರಿಕೆ, ಸಮಸ್ಯೆಗಳು ಬಂದರೂ ನಟ ಸೂರ್ಯ ಹಿಂದೆ ಸರಿಯಲಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.