ಚಿತ್ರರಂಗಕ್ಕೆ ಬರುವ ಯುವತಿಯರು ಜಾಗರೂಕರಾಗಿರಿ; ನನ್ನಂತೆ ಮೋಸ ಹೋಗಬೇಡಿ; ಶಕೀಲಾ ಭಾವನಾತ್ಮಕ ಪ್ರತಿಕ್ರಿಯೆ

ಬೆಂಗಳೂರು: ಆಗಿನ ಕಾಲದ ಪ್ರೇಕ್ಷಕರಿಗೆ ಶೃಂಗಾರ ತಾರೆ ಶಕೀಲಾ ಎಂದರೆ ಗೊತ್ತಿಲ್ಲ ಎನ್ನುವರು ಯಾರು ಇಲ್ಲ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಎಲ್ಲಾ ಸಿನಿಮಾಗಳೂ ಲೋ ಬಡ್ಜೆಟ್ ಸಿನಿಮಾಗಳೇ ಆಗಿದ್ದು, ಎಲ್ಲ ಚಿತ್ರಗಳಲ್ಲೂ ಅವರದೇ ಲೀಡ್ ರೋಲ್. ಪಾತ್ರ ಯಾವುದೆಂದು ಲೆಕ್ಕಿಸದೆ ತನ್ನ ನಟನೆಯ ಮೂಲಕ ನ್ಯಾಯ ಒದಗಿಸುವಲ್ಲಿ ಶಕೀಲಾ ನೂರಕ್ಕೆ ನೂರು ಪಟ್ಟು ಯಶಸ್ವಿಯಾಗಿದ್ದಾಳೆ.

ಅದಕ್ಕಾಗಿಯೇ ಶಕೀಲಾ ಅಂದರೆ ಇಂದಿನ ಕಾಲದ ಪ್ರೇಕ್ಷಕರಿಗೆ ಸಹ ಅದೇ ತರಹದ ಕ್ರೇಜ್. ನಟಿ ಶಕೀಲಾ ಅವರಿಗೆ ಇರುವ ಕ್ರೇಜ್ ಉಪಯೋಗಿಸಿಕೊಂಡು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ‘ಶಕೀಲಾ’ ಅವರ ಜೀವನಚರಿತ್ರೆಯನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.

ಶೃಗಾರ ತಾರೆಯಾಗಿ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಶಕೀಲಾ, ಒಂದು ಕಾಲದಲ್ಲಿ ರಸಿಕರ ಆರಾಧ್ಯ ದೈವವಾಗಿ ಬೆಳ್ಳಿ ಪರದೆಯ ಮೇಲೆ ಹಂಗಾಮ ಸೃಷ್ಟಿಸಿದ್ದಲ್ಲದೆ, ನಿರ್ಮಾಪಕರಿಗೆ ಹಣ ಹೊಳೆಯನ್ನೇ ಹರಿಸಿದ್ದಳು. ಆದರೆ ಅವಳ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಅದೆಲ್ಲವನ್ನು ಹೊರ ತೆಗೆಯುವ ಪ್ರಯತ್ನವೇ ಶಕೀಲಾ ಜೀವನಚರಿತ್ರೆ.

Advertisement

ಈ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ನಟಿ ರಿಚಾ ಚಡ್ಡಾ ಕಾಣಿಸಿಕೊಳ್ಳಲಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಶೂಟಿಂಗ್ ಮುಗಿದ ಈ ಸಿನಿಮಾ ಪ್ರಸ್ತುತ ಸಿನಿಮಾದ ಪ್ರಮೋಷನ್ ನಲ್ಲಿ ಬಿಸಿಯಾಗಿದ್ದಾರೆ.

ಇತ್ತೀಚೆಗೆ ಸಿನಿಮಾದ ಪ್ರಮೋಷನ್ ನಲ್ಲಿ ಭಾಗವಹಿಸಿದ್ದ ಶಕೀಲಾ, ತಾನು ಬದುಕಿರುವಾಗಲೇ ತನ್ನ ಜೀವನಚರಿತ್ರೆ ಹೊರಬರುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಎಲ್ಲರೂ ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗೆ ಸಿಲುಕಿ ನೋವು ಅನುಭವಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ, ನಾವು ಅನುಭವಿಸುವ ಸಂಕಟ ಇತರರಿಗೆ ತಿಳಿಯದೆ ನಮ್ಮ ಬಗ್ಗೆ ತಪ್ಪು ಮಾತನಾಡುತ್ತಾರೆ. ಅಂತಹ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಕೀಲಾ ಹೇಳಿದ್ದಾರೆ.

ಆದರೆ ಚಿತ್ರರಂಗಕ್ಕೆ ಬರುವ ಯುವತಿಯರಿಗೆ ಮತ್ತು ಓದುತ್ತಿರುವ ಹುಡುಗಿಯರಿಗೆ ನಾನು ಹೇಳುವ ಏಕೈಕ ವಿಷಯವೆಂದರೆ, ” ನಾನು ಜೀವನದಲ್ಲಿ ಮಾಡಿದ ತಪ್ಪುಗಳನ್ನು ಮಾಡಬೇಡಿ. ನನ್ನಂತೆ ಮೋಸಹೋಗಬೇಡಿ. ಈ ಸಿನಿಮಾದಲ್ಲಿ ಮಹಿಳೆಯರಿಗಾಗಿ ವಿಶೇಷ ಸಂದೇಶ ಇದೆ. ಈ ರೀತಿಯ ನನ್ನ ಜೀವನಚರಿತ್ರೆಯೊಂದಿಗೆ ಮಹಿಳೆಯರಿಗೆ ಒಳ್ಳೆಯ ಸಂದೇಶವನ್ನು ನೀಡಲು ನನಗೆ ಸಂತೋಷವಾಗಿದೆ ಎಂದು ನಟಿ ಶಕೀಲಾ ಹೇಳಿದ್ದಾರೆ.

ನಿಜ ಜೀವನದಲ್ಲಿ ತನ್ನ ಸ್ವಂತ ಸಹೋದರಿ ಮೋಸ ತನ್ನನ್ನು ಮಾಡಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಸ್ವತಃ ಶಕೀಲಾ ಹೇಳಿದ್ದು ಎಲ್ಲರಿಗು ತಿಳಿದ ವಿಷಯ. ಆದ್ದರಿಂದ ಶಕೀಲಾ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಯಾವ ಅಂಶಗಳ ಬಗ್ಗೆ ನಿರ್ದೇಶಕರು ಕೇಂದ್ರೀಕರಿಸಿದ್ದಾರೆ ಎಂದು ಕಾದು ನೋಡಬೇಕಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement