ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ಇದೆ ತಿಂಗಳು ಜುಲೈ 28ರಂದು ದೇಶದಾತ್ಯಂತ ರಿಲೀಸ್ ಆಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಸುದೀಪ್ ದೆಹಲಿಗೆ ತೆರಳಿದ್ದಾರೆ.
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಆಗಿರುವ ಕಿಚ್ಚ ಸುದೀಪ್, ಸಚಿವರೊಂದಿಗೆ ಉಪಹಾರ ಸವಿದಿದ್ದಾರೆ. ಆ ಬಳಿಕ ಇಂಡಿಯಾ ಗೇಟ್ ಬಳಿ ಪ್ರಮೋಷನ್ ಕಾರ್ಯ ಆರಂಭಿಸಿದ್ದಾರೆ. 13 ವರ್ಷಗಳ ಬಳಿಕ ಸುದೀಪ್, ಸಿನಿಮಾ ಪ್ರಚಾರಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ತೆಗೆದ ಫೋಟೋಗಳನ್ನು ಸಚಿವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು, ಕುರಿತು ಪ್ರತಿಕ್ರಿಸಿರುವ ಕಿಚ್ಚ ಸುದೀಪ್, ಆಹ್ವಾನಕ್ಕಾಗಿ, ನಿಮ್ಮ ಸಮಯ ಮತ್ತು ಆತಿಥ್ಯಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
Thank you for the invite,your time and for the warm hospitality @JoshiPralhad sir.
It was indeed a pleasure meeting you.
🙏🏼 https://t.co/z6dWewVn4F— Kichcha Sudeepa (@KicchaSudeep) July 16, 2022