ತಮಿಳು ಸ್ಟಾರ್ ನಟ ಅಜಿತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ನಿರ್ಮಾಪಕ

ಚೆನ್ನೈ : ತಮಿಳಿನ ಸ್ಟಾರ್‌ ನಟ ತಲಾ ಅಜಿತ್‌ ಅವರ ವಿರುದ್ಧ ತಮಿಳಿನ ನಿರ್ಮಾಪಕರೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ. 1995ರಲ್ಲಿ ‘ಕೂಲಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ‘ವಿಥಗನ್’, ‘ವೆಟ್ಟೈಯಾಡು ವಿಲೈಯಾಡು’ ಸೇರಿ ಹಲವು…

ಚೆನ್ನೈ : ತಮಿಳಿನ ಸ್ಟಾರ್‌ ನಟ ತಲಾ ಅಜಿತ್‌ ಅವರ ವಿರುದ್ಧ ತಮಿಳಿನ ನಿರ್ಮಾಪಕರೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

1995ರಲ್ಲಿ ‘ಕೂಲಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ‘ವಿಥಗನ್’, ‘ವೆಟ್ಟೈಯಾಡು ವಿಲೈಯಾಡು’ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಮಾಣಿಕಂ ನಾರಾಯಣನ್ ಅವರು ಅಜಿತ್ ವಿರುದ್ಧ ದೂರು ನೀಡಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ 6 ಲಕ್ಷ ರೂಪಾಯಿಗಳನ್ನು ಪಡೆದು ಅದನ್ನು ಹಿಂತಿರುಗಿಸಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ನಟ ತಲಾ ಅಜಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಜಿತ್ ಅವರು ತಮಿಳಿನ ಬಿಲ್ಲಾ, ವೇದಲಂ, ವಿವೇಗಂ ಸಿನಿಮಾ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.