Anna bhagya: 5kg ಕೆಜಿ ಅಕ್ಕಿ ಬದಲು ಹಣ; ಆಗಸ್ಟ್‌ 26ಕ್ಕೆ ಖಾತೆಗೆ ಹಣ!?

Vijayaprabha

Anna bhagya: ಕೇಂದ್ರ ಸರ್ಕಾರವು ಹೆಚ್ಚುವರಿ 5 ಕೆಜಿ ಅಕ್ಕಿ ಪೂರೈಕೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಕ್ಕಿ ಬದಲು ಖಾತೆಗೆ ಹಣವನ್ನ ಹಾಕಿದ್ದ ರಾಜ್ಯ ಸರ್ಕಾರ ಇದೀಗ ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ಪಡಿತರ ಚೀಟಿದಾರರ ಖಾತೆಗಳಿಗೆ ಹಣ ಜಮಾ ಮಾಡಲಿದೆ.

Anna bhagya

ಇನ್ನು, ಆದಷ್ಟು ಬೇಗ ಅಕ್ಕಿ ಸರಿಹೊಂದಿಸಿ ಅಕ್ಕಿಯನ್ನೇ ಪಡಿತರ ಚೀಟಿದಾರರಿಗೆ ಕೊಡುವುದಾಗಿ ಈಗಾಗಲೇ ಸಚಿವ ಕೆಹೆಚ್ ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಇಂದೇ ಕೊನೆಯ ದಿನ; ಗೃಹಲಕ್ಷ್ಮೀ ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!?

Anna bhagya:  ಆಗಸ್ಟ್‌ 26ಕ್ಕೆ ಖಾತೆಗೆ ಹಣ

ʻಅನ್ನಭಾಗ್ಯʼ ಯೋಜನೆಯಡಿ ಅರ್ಹ ಫಲಾನುಭವಿಗಳು ಈ ತಿಂಗಳು ಕೂಡ ಕೇವಲ 5kg ಅಕ್ಕಿ & ಉಳಿದ 5kg ಅಕ್ಕಿಯ ನಗದು ಪಡೆಯಲಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.

ಅಕ್ಕಿ ಪಡೆಯಲು ರಾಜ್ಯ ಸರ್ಕಾರ ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗೆ ಚರ್ಚೆ ನಡೆಸಿದರೂ ಸದ್ಯಕ್ಕೆ ದರ ಹಾಗೂ ಇತರೆ ವಿಚಾರಗಳಿಂದಾಗಿ ಅಕ್ಕಿ ಲಭ್ಯವಾಗಿಲ್ಲ. ಹೀಗಾಗಿ ಈ ಬಾರಿಯೂ ಅಕ್ಕಿಯ ಬದಲು ನಗದು ಜಮೆಯಾಗಲಿದೆ. ಈ ತಿಂಗಳು ಆಗಸ್ಟ್‌ 26 ವೇಳೆಗೆ ಸುಮಾರು 1 ಕೋಟಿ 7 ಲಕ್ಷ ಕಾರ್ಡ್‌ಗಳಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಮೋದಿ ಸರ್ಕಾರದ ಯೋಜನೆ ; ಇವರಿಗೆ ರೂ.2 ಲಕ್ಷ ಸಾಲ, ರೂ.15 ಸಾವಿರ ಆರ್ಥಿಕ ನೆರವು!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version