ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಕೂಡ ಭಾರತ 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಹೌದು, ಶ್ರೀಲಂಕಾ ನೀಡಿದ 184 ರನ್ ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು. ಭಾರತದ ಪರ, ಇಶಾನ್ ಕಿಶನ್-16, ಸಂಜು ಸ್ಯಾಮ್ಸನ್-39, ಜಡೇಜಾ-45* & ಶ್ರೇಯಸ್ ಅಯ್ಯರ್-74* ರನ್ ಗಳಿಸಿದರು. ಲಂಕಾ ಪರ ಲಾಹಿರು-2, ದುಶ್ಮಂತ-1 ವಿಕೆಟ್ ಪಡೆದರು.
ಇನ್ನು, ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭಿಕ ಆಟಗಾರರಾದ ಪಾಥುನ್ ನಿಸಂಕ 75, ಧನುಷ್ಕಾ ಗುಣತಿಲಕ 38 ರನ್ ಹಾಗು ನಾಯಕ ಡಾಸುನ್ ಶನಕ 47 ರನ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. ಭಾರತ ಪರ ಭುವನೇಶ್ವರ್ ಕುಮಾರ್, ಬುಮ್ರಾ, ಹರ್ಷಲ್ ಪಟೇಲ್, ಚಾಹಲ್ ಹಾಗು ಜಡೇಜಾ ತಲಾ 1 ಪಡೆದರು.
ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.