ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕ 3 ಕಂತುಗಳಲ್ಲಿ ನೀಡುವ 2,000 ರೂ. ಪ್ರೋತ್ಸಾಹ ಧನದ 11ನೇ ಕಂತಿನ ಹಣ ಶೀಘ್ರವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ.
ಆದರೆ ಈ ಬಾರಿ ದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಖಾತೆಗೆ ಬೀಳಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಿದೆ. ಇಲ್ಲವಾದಲ್ಲಿ ಸಿಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ.
ನೀವು ಪಿಎಂ ಕಿಸಾನ್ ಹಣ ಪಡೆಯಲು ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸುತ್ತಿದ್ದರೆ, ಕೆಳಗಿನ ಹಂತ ಹಂತದ ಪ್ರಕ್ರಿಯೆಯನ್ನು ಪಾಲಿಸಿ.
– ಮೊದಲು ಅಧಿಕೃತ PM ಕಿಸಾನ್ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಬೇಕು
– ಬಲಭಾಗದಲ್ಲಿ ಮುಖಪುಟದ ಕೆಳಗೆ, ರೈತರ ಕಾರ್ನರ್ ಅನ್ನು ಒತ್ತಿರಿ, ಅದರ ಕೆಳಗೆ ಇ ಕೆವೈಸಿ ಕಾಣಿಸಿಕೊಳ್ಳುತ್ತದೆ.
– ಇ ಕೆವೈಸಿ ಮೇಲೆ ಕ್ಲಿಕ್ ಮಾಡಿ ಆಧಾರ್ ನಂಬರ್ ಎಂಟ್ರಿ ಮಾಡಿ ಕ್ಯಾಪ್ಚಾ ಕೋಡ್ ನಮೂದಿಸಿ, ಸರ್ಚ್ ಕೊಡಿ
- ಆಗ ಆಧಾರ್ ಗೆ ನೋಂದಾಯಿಸಿದ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ.
– ಧಾರ್ ಗೆ ನೋಂದಾಯಿಸಿದ ಒಟಿಪಿಯನ್ನು ಎಂಟ್ರಿ ಮಾಡಿ ಸಬ್ ಮಿಟ್ ಬಟನ್ ಒತ್ತುತ್ತಿದ್ದಂತೆಯೇ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.