ಆಧ್ಯಾತ್ಮಿಕ ಚಿಂತನೆ: ಕುರುಕ್ಷೇತ್ರದ ರಣರಂಗದಲ್ಲಿ ಮಹಾಭಾರತ ಯುದ್ಧಕ್ಕೆ ಅಧಿಕೃತವಾಗಿ ಚಾಲನೆ ಸಿಗುವ ರೋಮಾಂಚಕಾರಿ ಸನ್ನಿವೇಶ ಇದಾಗಿದ್ದು, ಭಗವದ್ಗೀತೆಯ ಮೊದಲ ಅಧ್ಯಾಯದ (ಅರ್ಜುನ ವಿಷಾದ ಯೋಗ) 8 ರಿಂದ 14ನೇ ಶ್ಲೋಕಗಳಲ್ಲಿ, ದುರ್ಯೋಧನನು ತನ್ನ ಸೈನ್ಯದ ಬಲವನ್ನು ವಿವರಿಸಿದ ಬಳಿಕ, ಎರಡೂ ಕಡೆಯಿಂದ ಶಂಖನಾದ ಮೊಳಗುವ ಅದ್ಭುತ ದೃಶ್ಯಾವಳಿಗಳನ್ನು ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾನೆ. ಅದರ ಸರಳ ಕನ್ನಡ ಅರ್ಥ ಇಲ್ಲಿದೆ:
ಇದನ್ನೂ ಓದಿ: ಭಗವದ್ಗೀತೆ ಸಾರ: ಕುರುಕ್ಷೇತ್ರ ಯುದ್ಧದ ಅಖಾಡದಲ್ಲಿ ಪಾಂಡವರ ಸೈನ್ಯ ಕಂಡು ಬೆಚ್ಚಿದ ದುರ್ಯೋಧನ! (ಅಧ್ಯಾಯ 1ರ ಶ್ಲೋಕ 2-7)
ಶ್ಲೋಕ 8 & 9: ಕೌರವ ಪಡೆಯ ಮಹಾವೀರರ ಪರಿಚಯ

ಶ್ಲೋಕ 8
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥
ಶ್ಲೋಕ 9
ಅನ್ವೇ ಚ ಬಹವಃ ಶೂರಾ ಮದರ್ಥೇ
ತ್ಯಕ್ತಜೀವಿತಾಃ |
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ||
ಸರಳ ಅರ್ಥ: ಪಾಂಡವರ ಸೈನ್ಯವನ್ನು ವಿವರಿಸಿದ ದುರ್ಯೋಧನ, ನಂತರ ತನ್ನ ಗುರುವಾದ ದ್ರೋಣಾಚಾರ್ಯರಿಗೆ ತನ್ನ ಕಡೆಯ ವೀರರನ್ನು ಪರಿಚಯಿಸುತ್ತಾನೆ. “ಪೂಜ್ಯರೇ, ನಮ್ಮ ಪಡೆಯಲ್ಲಿ ನೀವು, ಭೀಷ್ಮ ಪಿತಾಮಹರು, ಕರ್ಣ, ಕೃಪಾಚಾರ್ಯರು, ಅಶ್ವತ್ಥಾಮ, ವಿಕರ್ಣ ಹಾಗೂ ಸೋಮದತ್ತನ ಮಗ (ಭೂರಿಶ್ರವ) ಇದ್ದಾರೆ. ಇಷ್ಟೇ ಅಲ್ಲದೆ, ನನಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾಗಿ ಬಂದಿರುವ, ನಾನಾ ಬಗೆಯ ಆಯುಧಗಳನ್ನು ಪ್ರಯೋಗಿಸಬಲ್ಲ ನುರಿತ ಅನೇಕ ಮಹಾವೀರರು ನಮ್ಮಲ್ಲಿದ್ದಾರೆ” ಎಂದು ಪರಿಚಯಿಸುತ್ತಾನೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10ನೇ ಗ್ಯಾರಂಟಿಯಾಗಿ ‘ಉಚಿತ ಆರೋಗ್ಯ’ ಘೋಷಿಸಿದ ಡಿಕೆಶಿ!
ಶ್ಲೋಕ 10 & 11: ಸೈನ್ಯದ ಬಲಾಬಲ ಹಾಗೂ ಎಚ್ಚರಿಕೆ
ಶ್ಲೋಕ 10
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ||
ಶ್ಲೋಕ 11
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ।।
ಸರಳ ಅರ್ಥ: ತನ್ನ ಸೈನ್ಯದ ಬಲವನ್ನು ವಿಶ್ಲೇಷಿಸುತ್ತಾ ದುರ್ಯೋಧನ ಹೇಳುತ್ತಾನೆ. “ಭೀಷ್ಮರಿಂದ ರಕ್ಷಿಸಲ್ಪಟ್ಟಿರುವ ನಮ್ಮ ಸೇನೆ ಅಪಾರ ಹಾಗೂ ಅಜೇಯವಾದದ್ದು. ಆದರೆ ಭೀಮನು ಕಾಯುತ್ತಿರುವ ಇವರ (ಪಾಂಡವರ) ಸೇನೆಯ ಬಲವು ಮಿತವಾದದ್ದು,” ಆದರೂ ಆತಂಕದಿಂದ ದುರ್ಯೋಧನ ತನ್ನ ಸೈನಿಕರಿಗೆ, “ನಮ್ಮ ಆಯಕಟ್ಟಿನ ಎಲ್ಲಾ ಜಾಗಗಳಲ್ಲೂ ನಿಂತು ನೀವೆಲ್ಲರೂ ಕೇವಲ ಭೀಷ್ಮ ಪಿತಾಮಹರನ್ನು ಮಾತ್ರ ರಕ್ಷಿಸಬೇಕು” ಎಂದು ಎಚ್ಚರಿಕೆ ನೀಡುತ್ತಾನೆ.
ಶ್ಲೋಕ 12 & 13: ಭೀಷ್ಮರ ಸಿಂಹನಾದ ಹಾಗೂ ಕೌರವರ ಕಹಳೆ
ಶ್ಲೋಕ 12
ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ವಿನದ್ಯೋಚೈಃ ಶಂಖಂ ದಧೂ ಪ್ರತಾಪವಾನ್ ||
ಶ್ಲೋಕ 13
ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ |
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋs ಭವತ್ ॥
ಸರಳ ಅರ್ಥ: ದುರ್ಯೋಧನನ ಆತಂಕವನ್ನು ಅರಿತ ಕುರುವಂಶದ ಹಿರಿಯಜ್ಜ, ಎದೆಗಾರ ಭೀಷ್ಮರು ಅವನಲ್ಲಿ ಉತ್ಸಾಹ ತುಂಬಲು ಗಟ್ಟಿಯಾಗಿ ಸಿಂಹನಾದಗೈದು ತಮ್ಮ ಶಂಖವನ್ನು ಮೊಳಗಿಸುತ್ತಾರೆ. ಭೀಷ್ಮರ ಶಂಖನಾದವಾಗುತ್ತಲೇ, ಕೌರವ ಪಡೆಯಲ್ಲಿದ್ದ ನಗಾರಿ, ಡೋಲು, ತಮಟೆ ಹಾಗೂ ಕಹಳೆಗಳು ಒಮ್ಮೆಲೇ ಬಾರಿಸಲ್ಪಟ್ಟವು. ಆ ಭಾರಿ ಶಬ್ದವು ಕಿವಿಗಡಚಿಕ್ಕುವಂತೆ ಇಡೀ ರಣರಂಗದಲ್ಲಿ ಮೊಳಗಿತು.
ಇದನ್ನೂ ಓದಿ: Ration Card: ಏಪ್ರಿಲ್ 1 ರಿಂದ ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ; ಈ 4 ತಪ್ಪು ಮಾಡಿದ್ರೆ ನಿಮ್ಮ ಕಾರ್ಡ್ ರದ್ದು!
ಶ್ಲೋಕ 14: ಶ್ರೀಕೃಷ್ಣ ಮತ್ತು ಅರ್ಜುನನಿಂದ ಪ್ರತ್ಯುತ್ತರ
ಶ್ಲೋಕ 14
ತತಃ ಶ್ವೇತೈರ್ಹಯ್ಕೆರ್ಯುಕೇ ಮಹತಿ ಸೈಂದನೇ ಸ್ಟಿತೌ
ಮಾಧವಃ ಪಾಂಡವಶೈವ ಪ್ರದದ್ಮತುಃ ||
ದಿವ್ಯ ಶ೦ಖ್
ಸರಳ ಅರ್ಥ: ಕೌರವರ ಕಡೆಯಿಂದ ಯುದ್ಧದ ಕಹಳೆ ಮೊಳಗುತ್ತಿದ್ದಂತೆ, ಅದಕ್ಕೆ ಪ್ರತಿಯಾಗಿ ಬಿಳಿಯ ಕುದುರೆಗಳನ್ನು ಕಟ್ಟಿದ ಭವ್ಯವಾದ ರಥದಲ್ಲಿ ಕುಳಿತಿದ್ದ ಮಾಧವ (ಶ್ರೀಕೃಷ್ಣ) ಮತ್ತು ಪಾಂಡವ (ಅರ್ಜುನ) ತಮ್ಮ ದಿವ್ಯವಾದ ಶಂಖಗಳನ್ನು (ಪಾಂಚಜನ್ಯ ಮತ್ತು ದೇವದತ್ತ) ದೀರ್ಘವಾಗಿ ಊದುವ ಮೂಲಕ ರಣಕಹಳೆಗೆ ಉತ್ತರ ನೀಡಿದರು.
ತಾತ್ಪರ್ಯ: ದುರ್ಯೋಧನನಿಗೆ ತನ್ನ ಸೈನ್ಯದ ಬಲದ ಮೇಲೆ ಅಹಂಕಾರವಿದ್ದರೂ, ಭೀಷ್ಮರ ರಕ್ಷಣೆಯ ಬಗ್ಗೆ ಆತಂಕವಿತ್ತು. ಮತ್ತೊಂದೆಡೆ, ಶ್ರೀಕೃಷ್ಣನ ಸಾರಥ್ಯದಲ್ಲಿ ಅರ್ಜುನನು ಧರ್ಮಯುದ್ಧಕ್ಕೆ ಸಂಪೂರ್ಣ ಸಜ್ಜಾಗಿದ್ದನು ಎಂಬುದನ್ನು ಈ ಶ್ಲೋಕಗಳು ಸಾರುತ್ತವೆ.




