Actor Darshan : ಸುಪ್ರೀಂಕೋರ್ಟ್ ತೀರ್ಪಿನಿಂದ ಆತಂಕಕ್ಕೊಳಗಾಗಿರುವ ನಟ ದರ್ಶನ್ ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಹೌದು, ಇದುವರೆಗೆ ನಟ ದರ್ಶನ್ ಎಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಇಲ್ಲ. ಇನ್ನೊಂದು ಮೂಲಗಳ ಪ್ರಕಾರ ದರ್ಶನ್ ಮಡಿಕೇರಿಯಲ್ಲಿರುವ ಗೆಳೆಯನ ಸುಂಟಿಕೊಪ್ಪದ ಫಾರ್ಮ್ ಹೌಸ್ನಲ್ಲಿದ್ದು, ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್ ಬಹತೇಕ ಇಂದು ರಾತ್ರಿ ಬಂಧನವಾಗುವ ಸಾಧ್ಯತೆ ಇದೆ.
ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ?.. ಆರೋಪಿಗಳನ್ನು ಟ್ರೇಸ್ ಮಾಡುತ್ತಿದೆ ಪೊಲೀಸ್ ಟೀಂ.
ನಟ ದರ್ಶನ್ ಅವರಿಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ದರ್ಶನ್ ಇನ್ನೂ ಬೆಂಗಳೂರಿಗೆ ಬಂದಿಲ್ಲ. ಬಹುತೇಕ ಇವತ್ತೇ ಅರೆಸ್ಟ್ ಆಗಲಿದ್ದಾರೆ.
ತಕ್ಷಣ ಆರೋಪಿಗಳನ್ನು ಬಂಧಿಸಿ ಎಂದು ಸುಪ್ರೀಂ ಆದೇಶದ ಹಿನ್ನೆಲೆ 7 ಪೊಲೀಸ್ ತಂಡಗಳು ಅರೆಸ್ಟ್ ಮಾಡಲು ರೆಡಿಯಾಗಿವೆ. ಸದ್ಯ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದೆ. ಒಟ್ಟಿನಲ್ಲಿ ದರ್ಶನ್ ಮತ್ತೆ ಜೈಲಿಗೆ ಸೇರುವುದು ಗ್ಯಾರಂಟಿಯಾಗಿದೆ. ಅತ್ತ ಪವಿತ್ರಾ ಗೌಡ ನಿವಾಸಕ್ಕೆ ಅವರ ತಾಯಿ ತೆರಳಿದ್ದಾರೆ.




