ಬೆಂಗಳೂರು : ಇಂದಿಗೆ ಕನ್ನಡದ ಅಪೂರ್ವ ಮೈಲಿಗಲ್ಲಿನ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ – ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಕಾಂಬಿನೇಶನ್ ನ ಮೆಗಾ ಬ್ಲಾಕ್ ಬ್ಲಸ್ಟರ್ ‘ಸಾರಥಿ’ ಬಿಡುಗಡೆಯಾಗಿ ಸರಿಯಾಗಿ 9 ವರ್ಷಗಳು ತುಂಬಿವೆ.
9 ವರ್ಷಗಳ ಹಿಂದೆ ಇದೇ ದಿನ ದರ್ಶನ್ ನಟನೆಯ ‘ಸಾರಥಿ’ ಬಿಡುಗಡೆಯಾಗಿ ಅವರಿಗೆ ಚಂದನವನದಲ್ಲಿ ಮರುಹುಟ್ಟು ನೀಡಿತ್ತು. ಪತ್ನಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೂ, ಅವರ ತಮ್ಮ ಹಾಗೂ ನಿರ್ದೇಶಕ ದಿನಕರ್ ತೂಗುದೀಪ್ ದೃಢ ನಿರ್ಧಾರದೊಂದಿಗೆ ಚಿತ್ರ ಬಿಡುಗಡೆ ಮಾಡಿಸಿದ್ದರು.ಜನ ನಟನ ಖಾಸಗಿ ಜೀವನದ ಬಗ್ಗೆ ತೆಲೆಕೆಡಿಸಿಕೊಳ್ಳದೆ ಉತ್ತಮ ಚಿತ್ರವೊಂದನ್ನು ಗೆಲ್ಲಿಸಿದ್ದರು.
ಸಾರಥಿ ಸಿನಿಮಾಕ್ಕೆ ನಿರ್ಮಾಪಕ ಸತ್ಯಪ್ರಕಾಶ್ ಅವರು ಬಂಡವಾಳ ಹೂಡಿದ್ದರು. ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ದರ್ಶನ್ ಗೆ ದೀಪಾ ಸನ್ನಿಧಿ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಈ ಸಿನಿಮಾದಲ್ಲಿ ರಂಗಾಯಣ ರಘು, ಬಹುಭಾಷಾ ಹಿರಿಯ ನಟಿ ಸೀತ, ಬುಲೆಟ್ ಪ್ರಕಾಶ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.