ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣುಗಳನ್ನು ತೇವವಾಗಿಸಿದೆ. ಹೌದು, ವ್ಯಕ್ತಿಯ ಮೃತಪಟ್ಟ ನಂತರ ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು.
ಅಷ್ಟೇ ಆದರೆ ಅಂತಹ ವಿಶೇಷ ಇರಲಿಲ್ಲ. ಆದರೆ ಆ ಕರು ಆತನ ಮೃತ ದೇಹದ ಹತ್ತಿರ ಹೋಗಿ ಪ್ರದಕ್ಷಿಣೆ ಹಾಕಿ ತನ್ನ ಯಜಮಾನನ ಪಾದಗಳಿಗೆ ಮತ್ತು ಹಣೆಗೆ ಮುತ್ತಿಟ್ಟು ನಂತರ ಆತನ ಸಾವಿಗೆ ಮೃತದೇಹದ ಮುಂದೆ ಕಣ್ಣೀರು ಸುರಿಸಿದ್ದು, ಈ ದೃಶ್ಯವನ್ನು ನೋಡಿದ ಜನರ ಕಣ್ಣಲ್ಲಿಯೂ ನೀರು ಜಿನುಗಿದೆ ಎಂದು ವರದಿಯಾಗಿದೆ.
ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದ ಮಾನವ ಮತ್ತು ಪ್ರಾಣಿ ನಡುವಿನ ಬಾಂಧವ್ಯದ ಈ ವಿಶಿಷ್ಟ ಘಟನೆ ಇಡೀ ಪ್ರದೇಶದಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವವರೆಗೂ ಆ ಕರು ಅಲ್ಲಿಂದ ಕದಲಲಿಲ್ಲ ಎಂದು ವರದಿಯಾಗಿದೆ.




