ರಾಷ್ಟ್ರೀಯ ಕುಟುಂಬ ನೆರವು ಯೋಜನೆ; ಈ ಯೋಜನೆಯಡಿ ನಿಮಗೆ ಸಿಗಲಿದೆ 20,000 ರೂ ನೆರವು

National Family Assistance Scheme: ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ(NSAP) ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸಹಾಯಧನ ಲಭ್ಯವಿದ್ದು, ಇದರ ಅನ್ವಯ ಬಡತನ ರೇಖೆಗಿಂತ ಕೆಳಗೆ ಇರುವ ಬಿ.ಪಿ.ಎಲ್. ಕಾರ್ಡ್(BPL Card) ಹೊಂದಿದ…

BPL card with money

National Family Assistance Scheme: ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ(NSAP) ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸಹಾಯಧನ ಲಭ್ಯವಿದ್ದು, ಇದರ ಅನ್ವಯ ಬಡತನ ರೇಖೆಗಿಂತ ಕೆಳಗೆ ಇರುವ ಬಿ.ಪಿ.ಎಲ್. ಕಾರ್ಡ್(BPL Card) ಹೊಂದಿದ ಕುಟುಂಬದ ಮುಖ್ಯಸ್ಥನ ಮರಣವಾದಲ್ಲಿ ಒಂದು ಬಾರಿಯ ಸಹಾಯದನವನ್ನು ನೀಡಲಾಗುವುದು.

ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆ

ರಾಷ್ಟ್ರೀಯ ಕುಟುಂಬ ನೆರವು ಯೋಜನೆ 1995 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಉಪ ವಿಭಾಗಾಧಿಕಾರಿ ಮಂಜೂರಾತಿ ಪ್ರಾಧಿಕಾರವಾಗಿದ್ದು, 2008 ರಿಂದ ತಹಸೀಲ್ದಾರ್ ರವರನ್ನು ಮಂಜೂರಾತಿ ಪ್ರಾಧಿಕಾರವಾಗಿ ಸ.ಆ.ಆ‌.0.46 ಡಿಎಸ್‌ಪಿ 2008 ರಂತ ನೇಮಿಸಿದೆ.

Vijayaprabha Mobile App free

ಇದನ್ನು ಓದಿ: ಪಾನ್- ಆಧಾರ್ ಲಿಂಕ್ ಮಾಡಿದ್ದೀರಾ? ಇಲ್ಲವಾ? ಗುರುತು ಇಲ್ಲದಿದ್ದರೂ ಪರವಾಗಿಲ್ಲ, ಸಿಂಪಲ್‌ಗಾ ಹೀಗೆ ಚೆಕ್ ಮಾಡಿ ಲಿಂಕ್ ಮಾಡಿಕೊಳ್ಳಿ!

ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಅರ್ಹರು ಯಾರು, ನಿಬಂಧನೆಗಳೇನು

* ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟುಂಬಸ್ಥನ (Primary Bread winner) ಮರಣ ಹೊಂದಿದಲ್ಲಿ ಆತನ ಕುಟುಂಬ ಈ ಯೋಜನೆಗೆ ಅರ್ಹರು

* ಮೃತರು 18 ರಿಂದ 59 ವರ್ಷದೊಳಿನವರಾಗಿರಬೇಕು.

* ಮರಣ ಹೊಂದಿದ ಆರು ತಿಂಗಳ ಒಳಗಾಗಿ ಅರ್ಜಿಸಲ್ಲಿಸಬೇಕು.

* ಮರಣ ಪ್ರಮಾಣ ಪತ್ರ ಹಾಜರುಪಡಿಸಬೇಕು. ನಂತರ ರೂ. 20,000/- ಗಳ ನೆರವು ನೀಡಲಾಗುವುದು,

ಇದನ್ನು ಓದಿ: ಯುವಶಕ್ತಿ ಯೋಜನೆಗೆ ಇಂದು ಸಿಎಂ ಚಾಲನೆ: ಈ ಯೋಜನೆಯಡಿ 10 ಸಾವಿರ ರೂ ನಿಧಿ, 5 ಲಕ್ಷ ಸಾಲಕ್ಕೆ,1 ಲಕ್ಷ ಸಬ್ಸಿಡಿ

ನೆಮ್ಮದಿ ಕೇಂದ್ರ ಅಥವಾ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಿ

* ರಾಷ್ಟ್ರೀಯ ಕುಟುಂಬ ನೆರವು ಯೋಜನೆಗೆ ಸಂಬಂಧ ಪಟ್ಟ ನೆಮ್ಮದಿ ಕೇಂದ್ರ ಅಥವಾ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು

* ಒಂದು ವೇಳೆ ಆ ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳಿದ್ದರೆ ಆ ಅರ್ಜಿ ತಿರಸ್ಕರಿಸಲಾಗುವುದು.

* ಪಲಾನುಭವಿಗಳು ಮರಣ ಹೊಂದಿದಲ್ಲಿ ಅವರ ಮಕ್ಕಳಿಗೆ ನೆರವನ್ನು ನೀಡಬಹುದು

ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: ಈ ರೀತಿ ಮಾಡಿದರೆ 10,000 ರೂ ದಂಡ; ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ, ಹೀಗೆ ಪರಿಶೀಲಿಸಿ

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

1) ವಾಸಸ್ಥಳ ಪ್ರಮಾಣ ಪತ್ರ

2) ಮರಣ ಪ್ರಮಾಣ ಪತ್ರ

3) ಪಡಿತರ ಚೀಟಿ

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್‌ ಲವ್ವಿಡವ್ವಿ, ಮದುವೆ, ಹನಿಮೂನ್‌ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.