ಬೆಂಗಳೂರು: ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ, ರಾಜ್ಯದ ಅತಿ ಸಣ್ಣ ಒಬಿಸಿ ಸಮುದಾಯವಾದ ಬಳೆಗಾರ ಶೆಟ್ರು ಸಮುದಾಯಕ್ಕೆ ಸೇರಿದವರು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಾರಾದರೊಬ್ಬರು ಯಡಿಯೂರಪ್ಪ ಅವರ ಜಾತಿಯ ಬಗ್ಗೆ ಸತ್ಯ ತಿಳಿದುಕೊಳ್ಳಲು ಬಯಸಿದರೆ, ಅವರು ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಲಿ. ಅಲ್ಲಿ ಅವರ ಕುಟುಂಬವನ್ನು ಬಳೆಗಾರ ಶೆಟ್ಟರು ಎಂದು ಪರಿಗಣಿಸಲಾಗುತ್ತದೆ ಎಂದು ಯತ್ನಾಳ್ ಸುದ್ದಿಗಾರರಿಗೆ ತಿಳಿಸಿದರು.
ಲಿಂಗಾಯತ ಸಮುದಾಯದ ಹೆಸರಿನಲ್ಲಿ ಯಡಿಯೂರಪ್ಪ ಅವರು ಬಿಜೆಪಿಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. “ವೀರೇಂದ್ರ ಪಾಟೀಲ್ ಮತ್ತು ಜೆ.ಎಚ್.ಪಟೇಲ್ ನಂತರ, ಅಜಾಗರೂಕತೆಯಿಂದ, ಯಡಿಯೂರಪ್ಪ ಅವರನ್ನು ವೀರಶೈವ-ಲಿಂಗಾಯತ ಸಮುದಾಯ ಅಪ್ಪಿಕೊಂಡಿತು. ಅವರ ಜೀವನದುದ್ದಕ್ಕೂ ಅವರು ಲಿಂಗಾಯತರಿಗೆ ಮೀಸಲಾತಿಯನ್ನು ಕಸಿದುಕೊಂಡಿದ್ದಾರೆ” ಎಂದು ಅವರು ಆರೋಪಿಸಿದರು.