ಪ್ರಿಯಕರನೊಂದಿಗೆ ಪತಿಯನ್ನೇ ಕೊಂದ ಪತ್ನಿ: 15 ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಹೂತಿಟ್ಟ ಹಂತಕಿ!

ಲಕ್ನೋ: ಉತ್ತರ ಪ್ರದೇಶದ ಮೀರತ್ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು ಹಾಕಿದ ಭೀಕರ ಘಟನೆ ವರದಿಯಾಗಿದೆ. ಸೌರಭ್ ಕುಮಾರ್ ಮೃತ ಪತಿಯಾಗಿದ್ದಾರೆ. ಮುಸ್ಕಾನ್ ತನ್ನ ಗಂಡನನ್ನು ಕೊಂದ ಹೆಂಡತಿ. ಘಟನೆ ಹಿನ್ನಲೆ:…

ಲಕ್ನೋ: ಉತ್ತರ ಪ್ರದೇಶದ ಮೀರತ್ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು ಹಾಕಿದ ಭೀಕರ ಘಟನೆ ವರದಿಯಾಗಿದೆ. ಸೌರಭ್ ಕುಮಾರ್ ಮೃತ ಪತಿಯಾಗಿದ್ದಾರೆ. ಮುಸ್ಕಾನ್ ತನ್ನ ಗಂಡನನ್ನು ಕೊಂದ ಹೆಂಡತಿ.

ಘಟನೆ ಹಿನ್ನಲೆ: ಸೌರಭ್ ಇತ್ತೀಚೆಗೆ ಲಂಡನ್ನಿಂದ ಮೀರತ್‌ಗೆ ಬಂದಿದ್ದರು. ಸೌರಭ್ 2016ರಲ್ಲಿ ಮುಸ್ಕಾನ್ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.  ಈ ಹಿಂದೆ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಭ್, ನಂತರ ಲಂಡನ್ಗೆ ತೆರಳಿ ಮಾಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮುಸ್ಕಾನ್ ತನ್ನ 5 ವರ್ಷದ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಆಕೆಯ ಪತಿ ಲಂಡನ್ನಲ್ಲಿದ್ದಾಗ, ಮುಸ್ಕಾನ್ ಸಾಹಿಲ್ ಶುಕ್ಲಾ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು.  ಸೌರಭ್ ಇತ್ತೀಚೆಗೆ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಲಂಡನ್ನಿಂದ ಬಂದಿದ್ದರು.  ಆದರೆ ಅದೇ ಸಮಯದಲ್ಲಿ, ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಸೌರಭ್ ನನ್ನು ಕೊಲ್ಲಲು ಯೋಜಿಸಿದರು.

Vijayaprabha Mobile App free

ಮಾರ್ಚ್ 4ರಂದು, ಸೌರಭ್ ಅವರ ಎದೆಗೆ ಚಾಕುವಿನಿಂದ ಇರಿದು ಅವರ ಜೀವವನ್ನೇ ತೆಗೆದಿದ್ದಾರೆ.  ಅದರ ನಂತರ, ಮುಸ್ಕಾನ್ ಮತ್ತು ಸಾಹಿಲ್ ದೇಹವನ್ನು ಅಡಗಿಸಲು ಯೋಜಿಸಿದರು. ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಲಾಯಿತು. ನಂತರ ಅದನ್ನು ಡ್ರಮ್ನಲ್ಲಿ ಹಾಕಿ, ಡ್ರಮ್ ಅನ್ನು ಸಿಮೆಂಟ್ನಿಂದ ತುಂಬಿಸಿದ್ದಾರೆ. ಅಪರಾಧದ ನಂತರ, ಮುಸ್ಕಾನ್ ಸಾಹಿಲ್ನೊಂದಿಗೆ ಓಡಿಹೋಗಿದ್ದಾಳೆ. ಆಕೆ ತನ್ನ ಮಗಳನ್ನು ತನ್ನ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಮುಸ್ಕಾನ್ನ ತಾಯಿ ಪೊಲೀಸರಿಗೆ ಕರೆ ಮಾಡಿ ತನ್ನ ಮಗಳು ಇಂತಹ ಕೃತ್ಯ ಎಸಗಿದ್ದಾಳೆ ಎಂದು ತಿಳಿಸಿದಳು. ಪೊಲೀಸರು ಮುಸ್ಕಾನ್ ಮತ್ತು ಆಕೆಯ ಪ್ರೇಮಿಯನ್ನು ಪ್ರಶ್ನಿಸಿದಾಗ, ಆರೋಪವನ್ನು ತಪ್ಪೊಪ್ಪಿಕೊಂಡಿದ್ದಾರೆ. ನಂತರ, ಅವರು ಶವವನ್ನು ಅಡಗಿಸಿಟ್ಟಿದ್ದ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಆದರೆ ಸಿಮೆಂಟ್ ಗಟ್ಟಿಯಾಗಿದ್ದರಿಂದ ದೇಹವನ್ನು ಹೊರತೆಗೆಯಲು ಅವರು ಹೆಣಗಾಡಿದರು. ಶವವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಸ್ಕಾನ್ ತನ್ನ ಮನೆಗೆ ಬೀಗ ಹಾಕಿದ್ದನ್ನು ಗಮನಿಸಿದ ಸ್ಥಳೀಯರಿಗೆ, ಆಕೆ ತನ್ನ ಪತಿಯೊಂದಿಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿರುವುದಾಗಿ ನೆರೆಹೊರೆಯವರಿಗೆ ತಿಳಿಸಿದ್ದರು.  ಈ ಅವಧಿಯಲ್ಲಿ, ಅನುಮಾನವನ್ನು ತಪ್ಪಿಸಲು ಆಕೆ ಸೌರಭ್ ಅವರ ಫೋನ್ನಿಂದ ತನ್ನ ಕುಟುಂಬಕ್ಕೆ ದಾರಿತಪ್ಪಿಸುವ ಸಂದೇಶಗಳನ್ನು ಕಳುಹಿಸಿದ್ದಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕುಟುಂಬದವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply