ಬೆಂಗಳೂರು: ಇಂಡೋನೇಷ್ಯಾದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿ ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿಯವರಿಗೆ ವಿದೇಶಿಯರ ಮೇಲಿರುವ ಕಾಳಜಿ ಸ್ವದೇಶಿಯರ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದೆ.
ಹೌದು ರಾಜ್ಯ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದ್ದೂ, ನೋಟ್ ಬ್ಯಾನ್ ಹೆಸರಲ್ಲಿ 100 ಹೆಚ್ಚು ಮಂದಿ ಪ್ರಾಣ ಬಿಟ್ಟರು ಮೋದಿ ಮೌನವಾಗಿದ್ದರು. ಲಾಕ್ ಡೌನ್ ವೇಳೆ ನೂರಾರು ವಲಸೆ ಕಾರ್ಮಿಕರು ನಡೆದು ಜೀವ ಬಿಟ್ಟರು ಮೋದಿ ಮೌನವಾಗಿದ್ದರು.
ಈಗ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನಾನಿರತ 60ಕ್ಕೂ ಹೆಚ್ಚು ರೈತರು ಜೀವ ತೆತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಅದೇ ವಿದೇಶಿಯರ ಮೇಲಿರುವ ಪ್ರೀತಿ ಸ್ವದೇಶೀಯರ ಮೇಲೆ ಏಕಿಲ್ಲ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.
🔹ನೋಟ್ ಬ್ಯಾನ್’ನಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟರು
🔸ಮೋದಿಮೌನ
🔹ಲಾಕ್ ಡೌನ್’ನಲ್ಲಿ ನೂರಾರು ವಲಸೆ ಕಾರ್ಮಿಕರು ನಡೆದು ಜೀವಬಿಟ್ಟರು
🔸ಮೋದಿಮೌನ
🔹ಪ್ರತಿಭಟನಾ ನಿರತ 60ಕ್ಕೂ ಹೆಚ್ಚು ರೈತರು ಜೀವ ತೆತ್ತಿದ್ದಾರೆ
🔸ಮೋದಿಮೌನ@narendramodi ಅವರಿಗೆ ವಿದೇಶಿಯರ ಮೇಲಿರುವ ಕಾಳಜಿ ಸ್ವದೇಶಿಯರ ಮೇಲೆ ಏಕಿಲ್ಲ @BJP4Karnataka? pic.twitter.com/fbMjB95Ghg
— Karnataka Congress (@INCKarnataka) January 11, 2021