ಚಿತ್ರದುರ್ಗ, ಜನವರಿ 22 : ಐತಿಹಾಸಿಕ ಕುರುಬರ S T ಮೀಸಲಾತಿ ಹೋರಾಟದ ಪಾದಯಾತ್ರೆ ಕನಕಗುರುಪೀಠ ಶ್ರೀ ಕ್ಷೇತ್ರ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕನಕಗುರುಪೀಠ ಹೊಸದುರ್ಗ ಶ್ರೀಗಳ ನೇತೃತ್ವದಲ್ಲಿ ಇಂದು ಎಂಟನೇ ದಿನದಂದು ಮುಂಜಾನೆ 6:00 ಕ್ಕೆ ಭರಮಸಾಗರ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಆರಂಭವಾಗಿದ್ದು ಚಿಕ್ಕಿಬೆನ್ನೂರು (ಸಿರಿಗೆರೆ ಕ್ರಾಸ್) ಬಳಿ ತಲುಪಿದ್ದು ನಾಳೆ ಕೋಟೆ ನಾಡು ಚಿತ್ರದುರ್ಗ ತಲುಪಲಿದ್ದು, ಭವ್ಯ ಸ್ವಾಗತಕ್ಕೆ ಕೋಟೆ ನಾಡು ಹಳದಿಮಯವಾಗಿ ಕಂಗೊಳಿಸುತ್ತಿದೆ.
ಕುರುಬರ S T ಹೋರಾಟದ ಪಾದಯಾತ್ರೆ ಎಂಟನೇ ದಿನವಾದ ಇಂದು ಮುಂಜಾನೆ ಭರಮಸಾಗರ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಚಿಕ್ಕಬೆನ್ನೂರುಗೆ ತೆರಳುವಾಗ ಅಂಗವಿಕಲನೊಬ್ಬ ಪಾದಯಾತ್ರೆಯಗಳ ಜೊತೆಗೆ ಹೆಜ್ಜೆ ಹಾಕುವ ದೃಶ್ಯ ನೋಡಿದರೆ ಮನಕಲಕುವಂತಿತ್ತು.

ಕುರುಬರ S T ಹೋರಾಟದ ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ಆರತಿ ಹಿಡಿದು ಕುಂಭವನ್ನು ಹೊತ್ತುಕೊಂಡು ಸಾಗುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯಿತು.

ಇನ್ನು ಕುರುಬರ S T ಹೋರಾಟದ ಪಾದಯಾತ್ರೆ ಹಿನ್ನಲೆಯಲ್ಲಿ ಪಾದಯಾತ್ರೆಯನ್ನು ಮುನ್ನೆಡೆಸುತ್ತಿರುವ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರಿಗೆ ಊರಿನ ಮುಖಂಡರು ಹೂವಿನ ಹಾರ ಹಾಕಿ ವಿಜ್ರುಂಬಣೆಯಿಂದ ಬರಮಾಡಿಕೊಂಡರು.
ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ:
ಇದನ್ನು ಓದಿ: ಕುರುಬರ ಎಸ್.ಟಿ ಮೀಸಲಾತಿ: ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿ
ಇದನ್ನು ಓದಿ: ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ
ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ




