ಕಳೆದ 2 ವರ್ಷಗಳಿಂದ ನಾನಾ ಕಾರಣಗಳಿಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಭತ್ತದ ಬೆಳೆ ಕಡಿಮೆ ಆಗಿದ್ದು, ಹೀಗಾಗಿ ಒಂದು ಕ್ವಿಂಟಾಲ್ ಭತ್ತ ₹ 2600 ಗೆ ಏರಿಕೆಯಾಗಿದೆ.
ವರ್ತಕರು ಹಳ್ಳಿಗಳಿಗೆ ಬಂದು ರೈತರಿಂದಲೇ ಕ್ವಿಂಟಾಲ್ಗೆ ₹ 2500-2800 ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಮಾರಾಟ ಮಾಡಲು ರೈತರ ಬಳಿ ಭತ್ತವಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ರೈತರು ತಾವು ಬೆಳೆದಿದ್ದ ಭತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆಯೂ ₹ 2040 ಇದ್ದು, ಆದರೆ ಈಗ ಭತ್ತದ ಬೆಲೆ ಒಂದು ಕ್ವಿಂಟಲ್ಗೆ 2,600 ರೂ ಗೆ ಏರಿಕೆಯಾಗಿದೆ. ಆದರೂ ಭತ್ತ ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಬೆಳೆಯಲಾಗಿಲ್ಲ. ಈ ಕೊರತೆ ಅಕ್ಕಿಯ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.