ಪಡಿತರ ಚೀಟಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಂತೆ, ಪಡಿತರ ಚೀಟಿ ಕೂಡ ಬಹಳ ಮುಖ್ಯವಾದ ದಾಖಲೆಯಾಗಿದೆ. ಪಡಿತರ ಚೀಟಿ ಹೊಂದಿರುವವರು ಸರ್ಕಾರದಿಂದ ಪಡಿತರ ಸರಕುಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.
ಇಷ್ಟೇ ಇಲ್ಲದೆ, ಕೇಂದ್ರ ಸರ್ಕಾರ ಕೂಡ ಇತ್ತೀಚೆಗೆ ಉಚಿತ ಪಡಿತರವನ್ನು ನೀಡುತ್ತಿದ್ದು, ಸರ್ಕಾರಗಳು ನೀಡುವ ಇತರ ಪ್ರಯೋಜನಗನ್ನು ಪಡೆಯಬಹುದು. ಪಡಿತರ ಚೀಟಿ ಬಹಳ ಮುಖ್ಯವಾದ ದಾಖಲೆ ಎಂದು ಹೇಳಬಹುದು. ಆದರೆ, ಅನರ್ಹರು ಕೂಡ ಪಡಿತರ ಪಡೆಯುತ್ತಿದ್ದಾರೆ ಎಂದು ಹಲವಾರು ದೂರುಗಳು ಕೇಂದ್ರಕ್ಕೆ ತಲುಪಿದ್ದು, ಇದರೊಂದಿಗೆ ಮುಂಬರುವ ದಿನಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎನ್ನಲಾಗಿವೆ.
ಬಡವರು ಪಡಿತರ ಚೀಟಿ ಹೊಂದಿರುವುದರಿಂದ ಲಾಭವಾಗುತ್ತದೆ. ಆದರೆ, ಕೆಲವು ಜನರು ಆರ್ಥಿಕವಾಗಿ ಸದೃಢವಾಗಿದ್ದರೂ ಸಹ ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಅಂತಹ ಜನರಿಗೆ ಹೊಸ ನಿಯಮಗಳು ಪಡಿತರವನ್ನು ಪಡೆಯುವುದನ್ನು ತಡೆಯುತ್ತವೆ ಎನ್ನಲಾಗಿದೆ. ಪಡಿತರ ಚೀಟಿ ಹೊಸ ನಿಯಮಗಳ ವಿಚಾರವಾಗಿ ಈಗಾಗಲೇ ಕೇಂದ್ರ ಮತ್ತು ರಾಜ್ಯಗಳ ನಡುವೆ ಚರ್ಚೆಗಳು ನಡೆಯುತ್ತಿವೆ.
ವರದಿಗಳ ಪ್ರಕಾರ, ಮೋದಿ ಸರ್ಕಾರವು ರಾಜ್ಯಗಳ ಪ್ರಸ್ತಾಪಗಳು ಮತ್ತು ಸಲಹೆಗಳನ್ನು ಪರಿಗಣಿಸಿ ಹೊಸ ಪಡಿತರ ಚೀಟಿ ನಿಯಮಗಳನ್ನು ತರಲು ಹೊರಟಿದ್ದು, ಹೊಸ ನಿಯಮಗಳು ಜಾರಿಗೆ ಬಂದ ನಂತರ ಅರ್ಹತೆ ಪಡೆದವರಿಗೆ ಮಾತ್ರ ಪಡಿತರ ಸರಕುಗಳು ಲಭ್ಯವಿರುತ್ತವೇ ಎನ್ನಲಾಗಿದೆ.




