ರಾಜ್ಯದಲ್ಲಿ ಸತತವಾಗಿ 18 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಸ್ವಲ್ಪ ಗ್ಯಾಪ್ ನೀಡಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 23ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು, ಬಾದಾಮಿ, ಬೆಳಗಾವಿ, ಬೆಂಗಳೂರು, ಬೀದರ್, ಚಿತ್ರದುರ್ಗ, ಧಾರವಾಡ. ಗದಗ, ಗೋಕರ್ಣ, ಹಂಪಿ, ಹಾಸನ, ಹೊನ್ನಾವರ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಡ್ಯ, ಮೈಸೂರು, ಮಂಗಳೂರು, ರಾಯಚೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-21, ಮಂಗಳೂರು: 31-26, ಶಿವಮೊಗ್ಗ: 32-22, ಯಾದಗಿರಿ: 40-27, ವಿಜಯಪುರ: 38-24, ಬೀದರ್: 38-26, ಕಲಬುರಗಿ: 40-27, ಬಾಗಲಕೋಟೆ: 37-24, ಬೆಳಗಾವಿ: 33-22, ತುಮಕೂರು: 32-21, ಉಡುಪಿ: 32-25, ಕಾರವಾರ: 32-27, ಚಿಕ್ಕಮಗಳೂರು: 28-19, ದಾವಣಗೆರೆ: 34-23, ಮೈಸೂರು: 32-21, ಮಂಡ್ಯ: 33-22, ಚಿತ್ರದುರ್ಗ: 33-21, ಹಾವೇರಿ: 34-22, ಬಳ್ಳಾರಿ: 37-24, ಗದಗ: 35-22, ಕೊಪ್ಪಳ: 36-23, ರಾಯಚೂರು: 40-26, ಕೊಡಗು: 26-19, ರಾಮನಗರ: 32-21,ಹಾಸನ: 39-19, ಚಾಮರಾಜನಗರ: 32-21, ಚಿಕ್ಕಬಳ್ಳಾಪುರ: 33-21, ಕೋಲಾರ: 33-21ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.