ರಾಜ್ಯದಲ್ಲಿ ಮತ್ತೆ ಬಾರಿ ಮಳೆ: ರಾಜ್ಯದ 9 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್!; ಇಂದಿನ ಹವಾಮಾನ ವರದಿ ಹೀಗಿದೆ

ಅರಬ್ಬಿ ಸಮುದ್ರ, ಮಹಾರಾಷ್ಟ್ರ ಕಡೆಗಿನ ಸಮುದ್ರ ಭಾಗದಲ್ಲಿ ವೈಪರಿತ್ಯಗಳು ಕಂಡು ಬಂದಿದ್ದರಿಂದ, ರಾಜ್ಯದಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಗುರುವಾರವೂ ವಿವಿಧ ಭಾಗದಲ್ಲಿ ಮಳೆಯಾಗಿದ್ದು, ಕರಾವಳಿ, ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲ…

rain vijayaprabha news

ಅರಬ್ಬಿ ಸಮುದ್ರ, ಮಹಾರಾಷ್ಟ್ರ ಕಡೆಗಿನ ಸಮುದ್ರ ಭಾಗದಲ್ಲಿ ವೈಪರಿತ್ಯಗಳು ಕಂಡು ಬಂದಿದ್ದರಿಂದ, ರಾಜ್ಯದಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಗುರುವಾರವೂ ವಿವಿಧ ಭಾಗದಲ್ಲಿ ಮಳೆಯಾಗಿದ್ದು, ಕರಾವಳಿ, ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಇದೀಗ ತಮಿಳುನಾಡಿನ ಒಳಭಾಗದಲ್ಲಿ ಸಮುದ್ರ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಇದರ ಪ್ರಭಾವ ಮುಂದಿನ ಐದು ದಿನ ಮಳೆ ಇರಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಬೆಂಗಳೂರು ನಗರದಲ್ಲಿ ಮಳೆ ಜೋರಾಗುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಹೇಳಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗುವ ಲಕ್ಷಣಗಳು ಇದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಇಂದಿನಂದ ಆ.1ರವರೆಗೆ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇಂದು ಮತ್ತು 31ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Vijayaprabha Mobile App free

ಪ್ರಮುಖ ನಗರಗಳ ತಾಪಮಾನ:

ಬೆಂಗಳೂರು: 34-22, ಮಂಗಳೂರು: 33-27,ಶಿವಮೊಗ್ಗ: 37-23, ಬೆಳಗಾವಿ: 36-22, ಮೈಸೂರು: 35-22, ಮಂಡ್ಯ: 36-23, ಕೊಡಗು: 31-20, ರಾಮನಗರ: 37-23, ಹಾಸನ: 35-21, ಚಿಕ್ಕಮಗಳೂರು: 34-21, ದಾವಣಗೆರೆ: 38-23, ಚಿತ್ರದುರ್ಗ: 37-23, ಹಾವೇರಿ: 37-23, ಬಳ್ಳಾರಿ: 39-26, ಗದಗ: 37-24, ಕೊಪ್ಪಳ: 38-24, ಚಾಮರಾಜನಗರ: 34-22, ಚಿಕ್ಕಬಳ್ಳಾಪುರ: 34-19, ಕೋಲಾರ: 34-21, ತುಮಕೂರು: 36-22, ಉಡುಪಿ: 33-27, ಕಾರವಾರ: 33-27, ರಾಯಚೂರು: 39-26, ಯಾದಗಿರಿ: 39-27, ವಿಜಯಪುರ: 38-27, ಬೀದರ್: 38-26, ಕಲಬುರಗಿ: 39-27, ಬಾಗಲಕೋಟೆ: 38-26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.