ಇಂದು ವಿಶ್ವದ ಪವರ್ಫುಲ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರು ಸೆಪ್ಟಂಬರ್ 17, 1950ರಲ್ಲಿ ಗುಜರಾತ್ನ ವಡ್ನಗರದಲ್ಲಿ ಜನಿಸಿದರು.1968ರಲ್ಲಿ ಜಶೋಧಾ ಬೆನ್ ಅವರನ್ನು ವರಿಸಿದ್ದ ಅವರು, ನಂತರದ ದಿನಗಳಲ್ಲಿ ಅವರಿಂದ ಪ್ರತ್ಯೇಕರಾದರು.
ಇನ್ನು, 2001ರ ಅ.7ರಿಂದ 2014ರ ಮೇ 22ರವರೆಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 2014ರಲ್ಲಿ ಪ್ರಧಾನಿ ಪಟ್ಟವನ್ನು ಇವರು ಅಲಂಕರಿಸಿದರು. ಆ ಬಳಿಕ ಇವರು ಹಿಂತಿರುಗಿ ನೋಡಿಲ್ಲ. ಆರ್ಎಸ್ಎಸ್ನಲ್ಲಿ ಬಾಲ ಸ್ವಯಂಸೇವಕನಾಗಿ ಸೇರ್ಪಡೆಗೊಂಡ ಇವರು ಇಂದು ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು.
ಚಾಯ್ ವಾಲಾ to ಪ್ರಧಾನಿವರೆಗೆ…ಬಡತನದಿಂದ- ಅಧಿಕಾರದವರೆಗೆ || ಮೋದಿ ಪ್ರಯಾಣ ಹೇಗಿತ್ತು ಗೊತ್ತಾ?
ಗುಜರಾತಿನ ಸಣ್ಣ ಹಳ್ಳಿಯಲ್ಲಿ ಒಂದು ರೂಪಾಯೀಗೂ ಗತಿಯಿಲ್ಲದ ಕೇವಲ ಪ್ರೀತಿ – ಸ್ನೇಹವೇ ತುಂಬಿತುಳುಕುತ್ತಿದ್ದ ಬಡ ಕುಟುಂಬದಲ್ಲಿ ೧೯೫೦ ರ ಸೆಪ್ಟೆಂಬರ್ ೧೭ ರಂದು ಶ್ರೀ ನರೇಂದ್ರ ಮೋದಿಯವರು ಜನಿಸಿದರು. ಬಾಲ್ಯದ ಕಷ್ಟದ ಜೀವನ ಇವರಪಾಲಿಗೆ ಕಠಿಣಪರಿಶ್ರಮದ ಪಾಠ ಕಲಿಸಿತು. ಅಲ್ಲದೆ, ಜನಸಾಮಾನ್ಯನ ಬದುಕು ಬವಣೆ ಪರಿತಾಪಗಳ ನಡುವಣ ಅನನ್ಯ ಜೀವಿತಾನುಭವ ನೀಡಿತು.ಇದರಿಂದ ಪ್ರೇರಿತರಾದ ಅವರು ಯುವಕರಾಗಿದ್ದಾಗಲೇ ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.
ರಾಷ್ಟ್ರಸೇವೆ ಮಾಡಲು ಮುಂದಾದರು:
ಮೋದಿಯವರ ದೇಶದ ಮೇಲಿನ ಪ್ರೀತಿ ಬಹಳ ಬೇಗ ಅರಿವಾಯಿತು. ಅವರು ಬಾಲ್ಯದಲ್ಲಿ 1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಭಾರತೀಯ ಸೇನೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು .1967ರಲ್ಲಿ ಗುಜರಾತ್ನ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೂ ಸಹಾಯ ಮಾಡಿದರು.
ಚಾಯ್ ವಾಲಾ:
ಗುಜರಾತ್ ನ ವಡ್ ನಗರ ರೈಲು ನಿಲ್ದಾಣದ ಬಳಿ ತಮ್ಮತಂದೆಯ ಟೀ ಸ್ಟಾಲ್ನಲ್ಲಿ ಮೋದಿ ಅವರು ಚಹಾ ಮಾರಿ ಜೀವನ ನಡೆಸುತ್ತಿದ್ದರು. ಅವರ ತಾಯಿ ಜೀವನ ಸಾಗಿಸಲು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು.
ಆಧ್ಯಾತ್ಮಿಕತೆಯತ್ತ ಪಯಣ:
ತೀರಾ ಇಳಿವಯಸ್ಸಿನಲ್ಲೇ ಮೋದಿಯವರು ತ್ಯಾಗದ ಕಡೆಗೆ ತಮ್ಮಒಲವನ್ನು ಬೆಳೆಸಿಕೊಂಡರು. ಇತರ ದಂತಕಥೆಗಳ ಹೆಜ್ಜೆಗಳನ್ನು ಅನುಸರಿಸಿ, ಅವರು ಮಸಾಲೆಯುಕ್ತ-ಉಪ್ಪು, ಮೆಣಸಿನಕಾಯಿಗಳು, ಎಣ್ಣೆಯುಕ್ತ ಪದಾರ್ಥವನ್ನು ತಿನ್ನುವುದನ್ನು ತ್ಯಜಿಸಿದರು.ಸ್ವಾಮಿ ವಿವೇಕಾನಂದರ ಕೃತಿಗಳಿಂದ ಪ್ರಭಾವಿತರಾದ ನರೇಂದ್ರ ಮೋದಿಯವರು ಆಧ್ಯಾತ್ಮಿಕತೆಯತ್ತ ಪಯಣ ಬೆಳೆಸಲು ಪ್ರೇರೇಪಿಸಿದರು.
ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಮೋದಿ:
2001 ರಲ್ಲಿ ಅವರ ತವರೂರಾದ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುವ ಸುವರ್ಣಾವಕಾಶ ದೊರಕಿತು. ಅನಂತರ ಸತತ ನಾಲ್ಕುಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ದಾಖಲೆ ಕಾಲಾವಧಿಯ ಸೇವೆ ಸಲ್ಲಿಸಿದರು. ಗುಜರಾತ್ ರಾಜ್ಯವನ್ನು ದೇಶದ ಮುನ್ನಡೆಗೆ ಅಗತ್ಯ ಚುಕ್ಕಾಣಿಯಾದ ಬಲಿಷ್ಠ ಅಭಿವೃದ್ಧಿ ಯಂತ್ರವನ್ನಾಗಿ ಮಾಡಿದರು.