ಬೆಂಗಳೂರು (ಯೋಜನೆಗಳ ಮಾಹಿತಿ): ಪಡಿತರ ಚೀಟಿ (Ration Card) ಹೊಂದಿರುವವರಿಗೆ ರಾಜ್ಯ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದ್ದು, ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲು ಮತ್ತು ವಿತರಣೆಯಲ್ಲಿ ಪಾರದರ್ಶಕತೆ ತರಲು ಬರುವ ಏಪ್ರಿಲ್ 1, 2026 ರಿಂದ ಪಡಿತರ ಚೀಟಿಯ ಹೊಸ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಲಿವೆ.
ಹೌದು, ಸರ್ಕಾರದ ಸೂಚನೆಯನ್ನು ಪಾಲಿಸದಿದ್ದರೆ ಅಥವಾ ನೀವು ಈ ಕೆಳಗಿನ ತಪ್ಪುಗಳನ್ನು ಮಾಡಿದ್ದರೆ, ಯಾವುದೇ ಮುನ್ಸೂಚನೆ ಇಲ್ಲದೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ (Delete) ಸಾಧ್ಯತೆ ಇದೆ.

ಈ 4 ಕಾರಣಗಳಿದ್ದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್!
ಇತ್ತೀಚಿಗೆ ಅನರ್ಹರನ್ನು ಪತ್ತೆ ಹಚ್ಚಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಕೆಳಗಿನ ನಿಯಮ ಉಲ್ಲಂಘಿಸಿದವರ ಕಾರ್ಡ್ ರದ್ದಾಗಲಿದೆ:
- ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ (Income Tax) ಪಾವತಿಸುತ್ತಿದ್ದರೆ.
- ಸ್ವಂತ ನಾಲ್ಕು ಚಕ್ರದ ವಾಹನ (ಟ್ರಾಕ್ಟರ್ ಹೊರತುಪಡಿಸಿ) ಹೊಂದಿದ್ದರೆ.
- ಸತತ 3 ತಿಂಗಳ ಕಾಲ ನ್ಯಾಯಬೆಲೆ ಅಂಗಡಿಯಿಂದ ಪಡಿತರ (ರೇಷನ್) ಪಡೆಯದೇ ಇದ್ದರೆ.
- ಕುಟುಂಬದಲ್ಲಿ ಮರಣ ಹೊಂದಿದ ಅಥವಾ ಮದುವೆಯಾಗಿ ಹೋದ ಸದಸ್ಯರ ಹೆಸರನ್ನು ಕಾರ್ಡ್ನಿಂದ ಡಿಲೀಟ್ ಮಾಡಿಸದೆ ಇದ್ದರೆ.
ಇದನ್ನೂ ಓದಿ: Govt Jobs: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಕೂಡಲೇ ಅರ್ಜಿ ಸಲ್ಲಿಸಿ
ಇ-ಕೆವೈಸಿ (e-KYC) ಕಡ್ಡಾಯ: ಫೆಬ್ರವರಿ 28 ಲಾಸ್ಟ್ ಡೇಟ್
ರೇಷನ್ ಕಾರ್ಡ್ಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಫೆಬ್ರವರಿ 28, 2026 ರೊಳಗೆ ಕೆವೈಸಿ ಪೂರ್ಣಗೊಳಿಸದಿದ್ದರೆ, ಮಾರ್ಚ್ 1 ರಿಂದ ಅಂತಹ ಕಾರ್ಡ್ಗಳಿಗೆ ರೇಷನ್ ವಿತರಣೆ ಸ್ಥಗಿತಗೊಳ್ಳಲಿದೆ.
ಹೇಗೆ ಮಾಡುವುದು?: ನಿಮ್ಮ ಹತ್ತಿರದ ನ್ಯಾಯಬೆಲೆ (ಪಡಿತರ) ಅಂಗಡಿಗೆ ತೆರಳಿ ಬೆರಳಚ್ಚು ನೀಡುವ ಮೂಲಕ ಅಥವಾ ‘Mera Ration App’ ಮೂಲಕ ಮನೆಯಲ್ಲೇ ಕುಳಿತು ಮುಖದ ಗುರುತು (Face Authentication) ಬಳಸಿ ಕೆವೈಸಿ ಮಾಡಬಹುದು.
ಇದನ್ನೂ ಓದಿ: ಸ್ವಂತ ಬ್ಯುಸಿನೆಸ್ ಶುರು ಮಾಡಲು ಸುವರ್ಣಾವಕಾಶ: ‘ಕರ್ನಾಟಕ ಒನ್’ ಫ್ರಾಂಚೈಸಿ ಕೇಂದ್ರಗಳಿಗೆ ಅರ್ಜಿ ಆಹ್ವಾನ!
ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ಬದಲಾವಣೆಗಳೇನು?
ಮಹಿಳೆಯೇ ಯಜಮಾನಿ: ಹೊಸ ನಿಯಮದ ಪ್ರಕಾರ ಕುಟುಂಬದ 18 ವರ್ಷ ಮೇಲ್ಪಟ್ಟ ಹಿರಿಯ ಮಹಿಳೆಯೇ ರೇಷನ್ ಕಾರ್ಡ್ನ ಮುಖ್ಯಸ್ಥೆಯಾಗಬೇಕಾಗಿದ್ದು, ಮಹಿಳೆ ಇಲ್ಲದಿದ್ದರೆ ಮಾತ್ರ ಪುರುಷರಿಗೆ ಅವಕಾಶ.
3 ತಿಂಗಳ ರೇಷನ್ ಒಟ್ಟಿಗೆ: ಇನ್ನು, ಪದೇ ಪದೇ ಅಲೆದಾಡುವುದನ್ನು ತಪ್ಪಿಸಲು ಫಲಾನುಭವಿಗಳಿಗೆ ಒಮ್ಮೆಲೇ 3 ತಿಂಗಳ ಪಡಿತರವನ್ನು ಸಂಗ್ರಹಿಸಿಕೊಳ್ಳುವ ಅವಕಾಶ ಸಿಗಲಿದೆ.
ಸಂಪೂರ್ಣ ಆನ್ಲೈನ್: ಹೊಸ ರೇಷನ್ ಕಾರ್ಡ್ಗೆ (ಆದಾಯ ಮಿತಿ ₹1.20 ಲಕ್ಷ) ಕೇವಲ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು,. ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿದ ನಂತರವಷ್ಟೇ ಕಾರ್ಡ್ ಅನುಮೋದನೆಗೊಳ್ಳಲಿದೆ.
ಕೂಡಲೇ ನಿಮ್ಮ ರೇಷನ್ ಕಾರ್ಡ್ ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಅನರ್ಹರಾಗಿದ್ದರೆ ದಂಡ ಕಟ್ಟುವ ಮುನ್ನ ನೀವೇ ಕಾರ್ಡ್ ಹಿಂದಿರುಗಿಸುವುದು ಒಳಿತು.
ಇದನ್ನೂ ಓದಿ: ಮರಾಠ ಸಮುದಾಯದವರಿಗೆ ಭರ್ಜರಿ ಗುಡ್ ನ್ಯೂಸ್: ‘ಆಹಾರ ವಾಹಿನಿ’ ಯೋಜನೆಗೆ ಅರ್ಜಿ ಆಹ್ವಾನ!




