ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಿಹಿ ಸುದ್ದಿ. ಕೇವಲ ವ್ಯವಸಾಯವಷ್ಟೇ ಅಲ್ಲ, ನಿಮ್ಮ ಜಮೀನಿನ ಬದುಗಳಲ್ಲಿ ಅಥವಾ ಖಾಲಿ ಜಾಗದಲ್ಲಿ ಗಿಡ ನೆಟ್ಟರೆ ಸಾಕು, ಸರ್ಕಾರವೇ ನಿಮಗೆ ಕೈತುಂಬಾ ಹಣ ನೀಡುತ್ತದೆ. ಹೌದು, ಅರಣ್ಯ ಇಲಾಖೆಯ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ (KAPY) ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ಸಿಗಲಿದೆ.
ಪರಿಸರ ಸಂರಕ್ಷಣೆ ಮತ್ತು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು? ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿ: HAL Recruitment 2026 | ತಿಂಗಳಿಗೆ ₹23,000 ಸಂಬಳ! ಟೆಕ್ನಿಷಿಯನ್, ಫೈರ್ಮ್ಯಾನ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ
ಏನಿದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ?

ರೈತರು ತಮ್ಮ ಜಮೀನಿನಲ್ಲಿ ಕೃಷಿಯ ಜೊತೆಗೆ ಅರಣ್ಯ ಕೃಷಿಯನ್ನು (Agro-Forestry) ಉತ್ತೇಜಿಸಲು 2011ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಪಡೆದು, ಅವುಗಳನ್ನು ಪೋಷಿಸುವ ರೈತರಿಗೆ ಸರ್ಕಾರವೇ ಪ್ರೋತ್ಸಾಹ ಧನ ನೀಡುತ್ತದೆ.
ಇದನ್ನೂ ಓದಿ: VSKUB Recruitment 2026 | ತಿಂಗಳಿಗೆ ₹2 ಲಕ್ಷ ಸಂಬಳ! 139 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೇ ಲಾಸ್ಟ್ ಚಾನ್ಸ್
ರೈತರಿಗೆ ಸಿಗುವ ಹಣವೆಷ್ಟು? (Financial Benefits)
ಈ ಯೋಜನೆಯಡಿ ಸಸಿ ನೆಟ್ಟು ಪೋಷಿಸುವ ರೈತರಿಗೆ ಪ್ರತಿ ಹೆಕ್ಟೇರಿಗೆ ಬರೋಬ್ಬರಿ ₹50,000 ದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಮೊದಲ ವರ್ಷದಿಂದ ಮೂರು ವರ್ಷಗಳ ಕಾಲ ಗಿಡಗಳನ್ನು ಪೋಷಿಸಿದರೆ ಹಂತ ಹಂತವಾಗಿ ಹಣ ಜಮೆ ಆಗುತ್ತದೆ.
ಒಬ್ಬ ರೈತ ತನ್ನ ಜಮೀನಿನಲ್ಲಿ ಪ್ರತಿ ಹೆಕ್ಟೇರಿಗೆ ಗರಿಷ್ಠ 400 ಸಸಿಗಳನ್ನು ಬೆಳೆಸಲು ಅವಕಾಶವಿದೆ.
ಕೇವಲ ಪ್ರೋತ್ಸಾಹ ಧನವಷ್ಟೇ ಅಲ್ಲ, ಬೆಳೆದ ಮರಗಳಿಂದ ಸಿಗುವ ಹಣ್ಣು, ಕಂಬ, ಉರುವಲುಗಳಿಂದಲೂ ರೈತರು ಆದಾಯ ಗಳಿಸಬಹುದು.
ಅರ್ಹತೆಗಳು ಮತ್ತು ನಿಯಮಗಳು
ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು.
ಯಾವುದೇ ಸಮುದಾಯದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗಿಡ ನೆಡಲು ಉದ್ದೇಶಿಸಿರುವ ಜಮೀನಿನ ಪಹಣಿ (RTC) ಹೊಂದಿರಬೇಕು.
ಸಾಮಾನ್ಯವಾಗಿ ಮಳೆಗಾಲಕ್ಕೂ ಮುನ್ನ (ಮೇ ತಿಂಗಳ ಅಂತ್ಯದೊಳಗೆ) ಅರ್ಜಿ ಪ್ರಕ್ರಿಯೆ ನಡೆಯುತ್ತದೆ. ಈಗಿನಿಂದಲೇ ತಯಾರಿ ಮಾಡಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ಪರೀಕ್ಷೆ ಇಲ್ಲ, ಶುಲ್ಕವಿಲ್ಲ: ಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ! ಇಂದೇ ಅರ್ಜಿ ಹಾಕಿ
ಸಸಿಗಳು ಸಿಗದೇ ಇದ್ದರೆ ಏನು ಮಾಡುವುದು?
ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ ನಂತರ ಸಮೀಪದ ನರ್ಸರಿಯಲ್ಲಿ ಸಸಿಗಳು ಲಭ್ಯವಿಲ್ಲದಿದ್ದರೆ ಚಿಂತಿಸಬೇಡಿ. ಸಂಬಂಧಪಟ್ಟ ಅಧಿಕಾರಿಯಿಂದ ಲಿಖಿತ ಅನುಮತಿ ಪಡೆದು, ಬೇರೆ ವಲಯದ ನರ್ಸರಿಯಿಂದ ಸಸಿ ಪಡೆಯಬಹುದು. ಅಲ್ಲಿಯೂ ಸಿಗದಿದ್ದರೆ, ಅರಣ್ಯ ಇಲಾಖೆಯೇ ಮುಂದಿನ ವರ್ಷಕ್ಕೆ ಸಸಿಗಳನ್ನು ಸಿದ್ಧಪಡಿಸಿ ಕೊಡುತ್ತದೆ.
ಹಣ ಬರುವುದು ಹೇಗೆ?
ರೈತರು ನೆಟ್ಟ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಗಿಡಗಳು ಬದುಕಿ ಉಳಿದಿರುವುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸುತ್ತಾರೆ. ನಂತರ ಸರ್ಕಾರದ ಖಜಾನೆಯಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ (ECS ಮೂಲಕ) ಹಣ ಜಮೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.




