ರಾಜ್ಯದಲ್ಲಿ ತಗ್ಗಿದ ವರುಣಾರ್ಭಟ: ಆ.19 ರವರೆಗೆ ತುಂತುರು ಮಳೆ!

rain vijayaprabha news rain vijayaprabha news

ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಕಡೆ ಮಳೆ ಪ್ರಮಾಣ ತಗ್ಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರಿದಿದ್ದು, ರಾಜ್ಯದ ವಿವಿಧ ಭಾಗದಲ್ಲಿ ಇಂದಿನಿಂದ ಆಗಸ್ಟ್ 19 ರವರೆಗೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆಗೆ ನೀಡಿದೆ.

ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಧಾರವಾಡ, ಗೋಕರ್ಣ, ಹೊನ್ನಾವರ, ಹಾಸನ, ಕಲಬುರ್ಗಿ, ಮಡಿಕೇರಿ, ಮಂಡ್ಯ, ಮಂಗಳೂರು ಹಾಗೂ ಮೈಸೂರು ಸುತ್ತಮುತ್ತ ತುಂತುರು ಮಳೆಯಾಗಬಹುದು. ಚಿತ್ರದುರ್ಗ, ಗದಗ, ಹಂಪಿ, ರಾಯಚೂರು ಮತ್ತು ವಿಜಯಪುರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.

ಇನ್ನು, ನಿರಂತರ ಮಳೆಯ ಕಾರಣ ನದಿ ಹಾಗೂ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವಾರು ಪ್ರದೇಶಗಳು ಮುಳುಗಡೆಯಾಗಿವೆ. ಇನ್ನು, ಕೃಷಿ ಪ್ರದೇಶಗಳು ನೀರಿನಿಂದ ಜಲಾವೃತವಾಗಿದ್ದು, ಮಳೆ ತಗ್ಗಿದ್ದರೂ ಅನಾಹುತಗಳು ನಿಂತಿಲ್ಲ.

Advertisement

ವಿವಿಧ ನಗರಗಳ ಇಂದಿನ ತಾಪಮಾನ:

ಬೆಂಗಳೂರು: 29-20
ದಾವಣಗೆರೆ: 29-21
ಚಿತ್ರದುರ್ಗ: 30-20
ಹಾವೇರಿ: 28-21
ಬಳ್ಳಾರಿ: 30-19
ಗದಗ: 29-21
ಕೊಪ್ಪಳ: 31-22
ರಾಯಚೂರು: 32-22
ಯಾದಗಿರಿ: 32-22
ವಿಜಯಪುರ: 29-21
ಬೀದರ್: 28-20
ಕಲಬುರಗಿ: 30-22
ಬಾಗಲಕೋಟೆ: 29-21
ಮಂಗಳೂರು: 29-24
ಶಿವಮೊಗ್ಗ: 29-20
ಬೆಳಗಾವಿ: 25-20
ಮೈಸೂರು: 31-20
ಮಂಡ್ಯ: 32-21
ಕೊಡಗು: 27-17
ರಾಮನಗರ: 32-25
ಹಾಸನ: 29-18
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 30-19
ಕೋಲಾರ: 31-21
ತುಮಕೂರು: 30-19
ಉಡುಪಿ: 29-24
ಕಾರವಾರ: 28-24
ಚಿಕ್ಕಮಗಳೂರು: 27-17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement