ರಾಜ್ಯದಲ್ಲಿ ನೈರುತ್ಯ ಮುಂಗಾರು ಪ್ರಬಲಗೊಂಡಿರುವುದರಿಂದ ಇಂದು ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, 16 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರ್ಗಿ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ. ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರಕನ್ನಡ, ಮತ್ತು ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ವಿವಿಧ ನಗರಗಳ ತಾಪಮಾನ:
ಬೆಂಗಳೂರು: 26-20, ಮಂಗಳೂರು: 27-25, ಶಿವಮೊಗ್ಗ: 24-21, ಬೆಳಗಾವಿ: 23-20, ಮೈಸೂರು: 26-21, ಮಂಡ್ಯ: 27-21, ಕೊಡಗು: 20-17, ರಾಮನಗರ: 27-21, ಹಾಸನ: 22-19, ಚಾಮರಾಜನಗರ: 26-21 ,ಚಿಕ್ಕಬಳ್ಳಾಪುರ: 24-19, ಕೋಲಾರ: 27-21, ತುಮಕೂರು: 26-21, ಉಡುಪಿ: 27-24, ಚಿಕ್ಕಮಗಳೂರು: 21-18, ದಾವಣಗೆರೆ: 25-21, ಚಿತ್ರದುರ್ಗ: 25-21, ಹಾವೇರಿ: 25-21, ಬಳ್ಳಾರಿ: 28-23, ಗದಗ: 24-21, ಕೊಪ್ಪಳ: 34-27 ,ರಾಯಚೂರು: 26-23, ಯಾದಗಿರಿ: 29-23, ವಿಜಯಪುರ: 27-22, ಬೀದರ್: 27-21, ಕಲಬುರಗಿ: 28-22 ,ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.