ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಮುಂದುವರಿದಿದ್ದು, ಇಂದು ಮತ್ತು ನಾಳೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ವಿಜಯಪುರ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ,ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ ತುಮಕೂರಿನಲ್ಲಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉಳಿದಂತೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ಪ್ರಮುಖ ನಗರಗಳ ಹವಾಮಾನ ವರದಿ :
ಬೆಂಗಳೂರು: 26-19, ಮಂಗಳೂರು: 29-24, ಶಿವಮೊಗ್ಗ: 26-21, ಬೆಳಗಾವಿ: 26-21, ಮೈಸೂರು: 29-21, ಮಂಡ್ಯ: 29-21, ಮಡಿಕೇರಿ: 22-16, ರಾಮನಗರ: 28-21, ಹಾಸನ: 26-19, ಚಾಮರಾಜನಗರ: 30-21, ಚಿಕ್ಕಬಳ್ಳಾಪುರ: 24-19, ಕೋಲಾರ: 27-20, ತುಮಕೂರು: 26-20, ಉಡುಪಿ: 28-24, ಕಾರವಾರ: 28-25,ಚಿಕ್ಕಮಗಳೂರು: 24-18, ದಾವಣಗೆರೆ: 26-21, ಚಿತ್ರದುರ್ಗ: 25-20, ಹಾವೇರಿ: 27-21, ಬಳ್ಳಾರಿ: 27-22, ಗದಗ: 27-21, ಕೊಪ್ಪಳ: 27-22, ರಾಯಚೂರು: 27-22, ಯಾದಗಿರಿ: 29-22, ವಿಜಯಪುರ: 29-22, ಬೀದರ್: 28-21, ಕಲಬುರಗಿ: 29-22, ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ಇರಲಿದೆ