ರಾಜ್ಯದಲ್ಲಿ ನೈರುತ್ಯ ಮುಂಗಾರು ಆರ್ಭಟ ಹೆಚ್ಚಾಗಿರುವುದರಿಂದ ಒಳನಾಡಿನ 16 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ತುಮಕೂರು, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಸೆಪ್ಟೆಂಬರ್ 1ರವರೆಗೆ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ.
4 ದಿನ ಭಾರೀ ಮಳೆ:
ಇನ್ನು, ಸೆಪ್ಟೆಂಬರ್ 1ರವರೆಗೆ ಭಾರೀ ಮಳೆ ಸುರಿಯಲಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ 12 ಸೆಂ.ಮೀ ಮಳೆಯಾಗಬಹುದು ಎಂದಿದೆ.
ವಿವಿಧ ನಗರಗಳ ತಾಪಮಾನ
ಬೆಂಗಳೂರು: 26- 20 ಮಂಗಳೂರು: 28-24 ಶಿವಮೊಗ್ಗ: 29-21, ಬೆಳಗಾವಿ: 28-19, ಮೈಸೂರು: 28-21, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ:25-18, ಕೋಲಾರ: 27-21, ತುಮಕೂರು: 27-21, ಮಂಡ್ಯ: 28-21, ಕೊಡಗು: 24-18, ರಾಮನಗರ: 31-24, ಹಾಸನ: 27-19, ಉಡುಪಿ: 28-24, ಕಾರವಾರ: 29-25, ಚಿಕ್ಕಮಗಳೂರು: 26-18, ಚಿತ್ರದುರ್ಗ: 27-21, ಹಾವೇರಿ: 29-21 , ಬಳ್ಳಾರಿ: 30-23, ಗದಗ: 29-21 , ಕೊಪ್ಪಳ: 29-22 , ರಾಯಚೂರು: 31-24 , ಯಾದಗಿರಿ: 32-24 ,ವಿಜಯಪುರ: 31-22 , ಬೀದರ್:29-22 , ಕಲಬುರಗಿ: 31-23 , ಬಾಗಲಕೋಟೆ:31-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.