ರಾಜ್ಯದಲ್ಲಿ ಮುಂಗಾರು ಮುಗಿದಿದ್ದರೂ ಮಳೆಯ ಅಬ್ಬರ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಾಜಧಾನಿ ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಹೌದು, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಂತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 26-19, ಮಂಗಳೂರು: 29-24, ಶಿವಮೊಗ್ಗ:28-21, ಬೆಳಗಾವಿ: 26-21, ಮೈಸೂರು: 27-21, ಮಂಡ್ಯ: 30-21, ಮಡಿಕೇರಿ: 26-16, ರಾಮನಗರ: 29-21, ಹಾಸನ: 28-18, ಚಾಮರಾಜನಗರ: 30-20, ಚಿಕ್ಕಬಳ್ಳಾಪುರ: 27-19, ಕೋಲಾರ: 28-20, ತುಮಕೂರು: 28-19, ಉಡುಪಿ: 29-23, ಕಾರವಾರ: 29-24, ಚಿಕ್ಕಮಗಳೂರು: 27-17, ದಾವಣಗೆರೆ: 29-20, ಯಾದಗಿರಿ: 30-23, ವಿಜಯಪುರ: 29-21, ಬೀದರ್: 28-21, ಕಲಬುರಗಿ: 29-22, ಬಾಗಲಕೋಟೆ: 31-21ಡಿಗ್ರಿ ಸೆಲ್ಸಿಯಸ್ ಇರಲಿದೆ.