Ganesh Chaturthi | ಈ ವರ್ಷದ ಗಣೇಶ ಚತುರ್ಥಿ ಯಾವಾಗ? ಪೂಜಾ ವಿಧಾನ, ಶುಭ ಮುಹೂರ್ತ

Ganesh Chaturthi : ಗಣೇಶ ಚತುರ್ಥಿ ಹಿಂದೂ ಧರ್ಮದ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಇದನ್ನು ವಿಜೃಂಭಣೆ ಮತ್ತು ಭಕ್ತಿಯಿ೦ದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಗಣೇಶ ಉತ್ಸವವು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ…

Ganesh Chaturthi

Ganesh Chaturthi : ಗಣೇಶ ಚತುರ್ಥಿ ಹಿಂದೂ ಧರ್ಮದ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಇದನ್ನು ವಿಜೃಂಭಣೆ ಮತ್ತು ಭಕ್ತಿಯಿ೦ದ ಆಚರಿಸಲಾಗುತ್ತದೆ.

ಪಂಚಾಂಗದ ಪ್ರಕಾರ, ಗಣೇಶ ಉತ್ಸವವು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿಯ ದಿನದಂದು ಕೊನೆಗೊಳ್ಳುತ್ತದೆ. 10 ದಿನಗಳ ಕಾಲ ಭಕ್ತಿಯಿಂದ ಗಣಪತಿಯನ್ನು ಪೂಜಿಸಿದ ನಂತರ, ವಿಗ್ರಹವನ್ನು ಕೆರೆಯಲ್ಲಿ ವಿಸರ್ಜಿಸಲಾಗುತ್ತಿದ್ದು, ಈ ವರ್ಷ ಗಣೇಶ ಚತುರ್ಥಿ ಯಾವಾಗ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

When is Ganesh Chaturthi-ಗಣೇಶ ಚತುರ್ಥಿ ಯಾವಾಗ?

Ganesh Chaturthi

Vijayaprabha Mobile App free
  • ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ತಿಥಿ ಆರಂಬ – ಆಗಸ್ಟ್ 26 1:54ಕ್ಕೆ
  • ತಿಥಿ ಅಂತ್ಯ – ಆಗಸ್ಟ್ 27 3:44ಕ್ಕೆ
  • ಗಣೇಶ ಚತುರ್ಥಿ ದಿನಾಂಕ – ಬುಧವಾರ 6. 27
  • ಗಣೇಶ ಸ್ಥಾಪನಾ ಮುಹೂರ್ತ: ಆ. 27 ರಂದು ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 1:40 ರವರೆಗಿನ ಸಮಯ

Method of Ganesh Pratishthapana – ಗಣೇಶ ಪ್ರತಿಷ್ಠಾಪನೆಯ ವಿಧಾನ

Ganesh Chaturthi vijayaprabha news1

  • ಮೊದಲು, ಸ್ವಚ್ಚವಾದ ಮಣೆ ಅಥವಾ ಮೇಜಿನ ಮೇಲೆ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ.
  • ನಂತರ, ಆ ಆಸನದ ಮೇಲೆ ಅಕ್ಕಿ, ಅರಿಶಿನ, ಕುಂಕುಮ ಮತ್ತು ವೀಳ್ಯದೆಲೆಯನ್ನು ಅರ್ಪಿಸಿ.
  • ಇನ್ನು, ಗಣೇಶ ವಿಗ್ರಹದ ಬಲಭಾಗದಲ್ಲಿ ಶುದ್ಧ ನೀರಿನಿಂದ ತುಂಬಿದ, ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಯನ್ನು ಇರಿಸಿ.
  • ಗಣೇಶನ ಜೊತೆಗೆ, ರಿದ್ದಿ-ಸಿದ್ದಿಯ ಸಂಕೇತವಾಗಿ ಎರಡು ವೀಳ್ಯದೆಲೆಗಳನ್ನು ಇಡಿ.
  • ಇದಾದ ನಂತರ ಗಣೇಶನನ್ನು ಗಂಗಾಜಲ ಅಥವಾ ಶುದ್ಧ ನೀರಿನಿಂದ ಸ್ನಾನ ಮಾಡಿಸಿ, ತಾಜಾ ಹೂವುಗಳು, ದೂರ್ವೆ ಎಲೆಗಳು, ಹೂಮಾಲೆಗಳು, ಮೋದಕಗಳು ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಿ.
  • ಪೂಜೆಯ ಕೊನೆಯಲ್ಲಿ, ಅವರ ಆರತಿಯನ್ನು ಮಾಡಿ ಮತ್ತು ಗಣೇಶ ಚತುರ್ಥಿಯ ಕಥೆಯನ್ನು ಪಠಿಸಿ.

Recitation of Ganesh Mantra – ಗಣೇಶ ಮಂತ್ರ ಪಠಣ

ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ಆತನ ಆಶೀರ್ವಾದ ದೊರೆಯುತ್ತದೆ ಮತ್ತು ಎಲ್ಲಾ ಅಡೆತಡೆಗಳು ದೂರವಾಗುತ್ತದೆ. ನೀವು ಈ ಕೆಳಗಿನ ಮಂತ್ರಗಳನ್ನು ಏಕಾಗ್ರತೆಯಿಂದ ಪಠಿಸಬಹುದು-

ಓಂ ಗಂ ಗಣಪತಿಯೇ ನಮಃ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|

ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ||

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.