ಬಡ್ಡಿದರಗಳು ಕಡಿಮೆಯಾಗುತ್ತಿದ್ದರೂ, ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು ಬಯಸಿದರೆ, ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಈ ಪೋಸ್ಟ್ ಆಫೀಸ್ ಯೋಜನೆಯು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ ಮೆಚುರಿಟಿಯಲ್ಲಿ (ಅಂದರೆ 124 ತಿಂಗಳುಗಳವರೆಗೆ) ದ್ವಿಗುಣ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯು ಶೇಕಡಾ 6.9 ರ ಬಡ್ಡಿದರವನ್ನು ಹೊಂದಿದೆ.
ಕಿಸಾನ್ ವಿಕಾಸ್ ಪತ್ರ ಒಂದು ಬಾರಿ ಹೂಡಿಕೆ ಯೋಜನೆಯಾಗಿದ್ದು, ಸರ್ಕಾರ ಈ ಯೋಜನೆಯನ್ನು ನಡೆಸುತ್ತಿದೆ. ಸರ್ಕಾರವು ವಿಶೇಷವಾಗಿ ರೈತರು ಮತ್ತು ಕಡಿಮೆ ಆದಾಯದವರಿಗೆ ಅಂಚೆ ಕಚೇರಿ ಮೂಲಕ ಈ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿಲ್ಲ. ಈ ಯೋಜನೆಯಲ್ಲಿ ರೂ.1000 ಮಾತ್ರ ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ ಮಿತಿ ಎಂಬುದೇ ಇಲ್ಲ. ಈ ಯೋಜನೆಯಲ್ಲಿ ನೀವು ರೂ 50,000 ಹೂಡಿಕೆ ಮಾಡಿದರೆ, ನೀವು ಮುಕ್ತಾಯದ ಸಮಯದಲ್ಲಿ ರೂ 1 ಲಕ್ಷವನ್ನು ಪಡೆಯಬಹುದು. ದೇಶಾದ್ಯಂತ ಬ್ಯಾಂಕ್ಗಳು ಮತ್ತು ಅಂಚೆ ಕಚೇರಿಗಳಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಎರಡೂವರೆ ವರ್ಷಗಳ ನಂತರ ಹಿಂಪಡೆಯಬಹುದು;
ಎರಡೂವರೆ ವರ್ಷಗಳ ನಂತರ ಕಿಸಾನ್ ವಿಕಾಸ್ ಪತ್ರದಿಂದ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ KVP ಮೆಚುರಿಟಿ ಅವಧಿಯು 124 ತಿಂಗಳುಗಲಾಗಿದ್ದು, ಎರಡೂವರೆ ವರ್ಷಗಳ ನಂತರ ಈ ಯೋಜನೆಯಿಂದ ಹಣ ಡ್ರಾ ಮಾಡಿದರೆ ಕಡಿಮೆ ಬಡ್ಡಿದರ ಸಿಗುತ್ತದೆ. ಈ ಹಣವನ್ನು ಮೆಚ್ಯೂರಿಟಿ ತನಕ ಇಟ್ಟುಕೊಂಡರೆ ದುಪ್ಪಟ್ಟು ಲಾಭ ಪಡೆಯಬಹುದು. ಈ ಯೋಜನೆಯಲ್ಲಿ ಯಾವುದೇ ಅಪಾಯವಿಲ್ಲ.
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. KVP ನಿಯಮಗಳ ಪ್ರಕಾರ, ವಯಸ್ಕರು ಅಪ್ರಾಪ್ತರ ಪರವಾಗಿ ಯೋಜನೆಯನ್ನು ಖರೀದಿಸಬಹುದು. ಸರಿಯಾದ ಮನಸ್ಥಿತಿಯಲ್ಲಿಲ್ಲದವರ ಪರವಾಗಿ ಗಾರ್ಡಿಯನ್ ಈ ಯೋಜನೆಯನ್ನು ತೆರೆಯಬಹುದು. ಕೆವಿಪಿ ಖಾತೆ ತೆರೆಯಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಮತ್ತು ಪಾಸ್ಪೋರ್ಟ್ ಅಗತ್ಯವಿದೆ.