ಗಣೇಶ ಚತುರ್ಥಿಯಂದು ಈ ತಪ್ಪನ್ನು ಅಪ್ಪಿ ತಪ್ಪಿಯೂ ಮಾಡಬೇಡಿ

Ganesh Chaturthi vijayaprabha news1 Ganesh Chaturthi vijayaprabha news1

ಪ್ರತೀ ಮನೆಯಲ್ಲೂ ಇಂದು ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಹಲವಾರು ಜನ ವೃತಾಚರಣೆ ಮಾಡುತ್ತಾರೆ. ಗಣೇಶ ಚತುರ್ಥಿಯಂದು ನಿಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿದರೆ ಬಹಳ ಶುದ್ಧದಿಂದ, ಭಕ್ತಿಯಿಂದ ಪೂಜಿಸಬೇಕು. ಆಗ ನಿಮ್ಮ ಇಷ್ಟಾರ್ಥ ಈಡೇರುತ್ತದೆ. ಆದರೆ, ಇಂದು ಈ 5 ಕೆಲಸ ಮಾಡಬಾರದು ಎಂದು ಬಲ್ಲವರು ಹೇಳುತ್ತಾರೆ.

★ಮನೆಯಲ್ಲಿ ಎರಡು ಗಣಪತಿ ಮೂರ್ತಿಗಳನ್ನು ಇಡಬಾರದು.

★ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಾರದು.

Advertisement

★ಉಪವಾಸದ ದಿನದಂದು ದೈಹಿಕ ಸಂಬಂಧವನ್ನು ಹೊಂದಬೇಡಿ.

★ಗಣೇಶ ಚತುರ್ಥಿಯಂದು ಇಲಿಗಳನ್ನು ಕೊಲ್ಲಬಾರದು.

★ಉಪವಾಸ ಮಾಡುವವರು ಸಾತ್ವಿಕ ಹಣ್ಣುಗಳನ್ನೇ ತಿನ್ನಬೇಕು.

★ಪೂಜೆ ಮುಗಿಯುವವರೆಗೆ/ ದಿನಪೂರ್ತಿ ಚಂದ್ರನನ್ನು ನೋಡಬೇಡಿ.

★ಕತ್ತಲೆಯಲ್ಲಿ ಮೂರ್ತಿಯ ದರ್ಶನ ಮಾಡಬೇಡಿ

★ಹಳೆ ವಿಗ್ರಹ ಪೂಜಿಸಬೇಡಿ. ಹೊಸ ವಿಗ್ರಹ ತನ್ನಿ.

★ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ.

ಈ ತಪ್ಪನ್ನು ಅಪ್ಪಿ ತಪ್ಪಿಯೂ ಮಾಡಬೇಡಿ:

★ಗಣೇಶ ಚತುರ್ಥಿಯ 10 ದಿನದವರೆಗೆ ವೃದ್ಧರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಅವಮಾನಿಸಬೇಡಿ.

★ಮನೆಯಲ್ಲಿ ಪುಟ್ಟು ಮಕ್ಕಳಿದ್ದರೆ ಅವರ ಮೇಲೆ ಕೈ ಎತ್ತಬಾರದು ಎಂದು ಹೇಳಲಾಗುತ್ತದೆ.ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ಹಿಂಸೆಯಿಂದ ದೂರವಿರಬೇಕು.

★ಕೆಟ್ಟ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಬಾರದಂತೆ ಕಾಪಾಡಿಕೊಳ್ಳಬೇಕು ಎನ್ನುವ ನಂಬಿಕೆಯಿದೆ.ಗಣೇಶ ಚತುರ್ಥಿಯ 10 ದಿನಗಳ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ದೈಹಿಕ ಸಂಬಂಧಗಳನ್ನು ಹೊಂದುವುದು ಒಳ್ಳೆಯದಲ್ಲ.

★ಈ ಅವಧಿಯಲ್ಲಿ ಮಾಂಸದಿಂದ ತಯಾರಿಸಿದ ಆಹಾರ, ಮೀನು ಅಥವಾ ಮೊಟ್ಟೆಗಳಂತಹ ಆಹಾರವನ್ನು, ಈರುಳ್ಳಿ-ಬೆಳ್ಳುಳ್ಳಿ, ಮೂಲಂಗಿ, ಬೀಟ್ರೂಟ್‌, ಕ್ಯಾರೆಟ್ ಮುಂತಾದ ನೆಲದಡಿಯಲ್ಲಿ ಬೆಳೆಯುವ ಗೆಡ್ಡೆಗಳನ್ನು ಸೇವಿಸಬಾರದು.

★ನೀವು ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಕುಟುಂಬದ ಕೆಲವು ಸದಸ್ಯರು ಮನೆಯಲ್ಲಿಯೇ ಇರಬೇಕು, ಗಣೇಶನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಬಾರದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement